ಉಗ್ರರ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ ನೇತ್ರಾ, ಹೆರಾನ್
ಶ್ರೀನಗರ, ಫೆಬ್ರವರಿ 26 : ಗಡಿ ನಿಯಂತ್ರಣಾ ರೇಖೆಯ ಬಳಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ಭಾರತದ ವಾಯು ಸೇನೆ ಫೆಬ್ರವರಿ 26ರಂದು ಮುಂಜಾವಿನಲ್ಲಿ ದಾಳಿ ಮಾಡುತ್ತಿದ್ದಾಗ, 'ಐ ಇನ್ ದಿ ಸ್ಕೈ' ಎಂದೇ ಖ್ಯಾತವಾಗಿರುವ ಎರಡು ಡ್ರೋಣ್ ಗಳು ಪ್ರಮುಖ ಪಾತ್ರ ವಹಿಸಿವೆ.
ಒಂದು, ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (ಡಿಆರ್ಡಿಓ) ದೇಶೀಯವಾಗಿ ನಿರ್ಮಿಸಿರುವ 'ನೇತ್ರಾ' ಎಂಬ ಏರ್ ಬಾರ್ನ್ ಅರ್ಲಿ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಂ, ಮತ್ತು ಎರಡನೇಯದು, ಇಸ್ರೇಲ್ ನಿರ್ಮಿತ ಹೆರಾನ್ ಎಂಬ ಡ್ರೋಣ್. ಇವೆಡರ ಸಹಾಯದಿಂದ ಯಶಸ್ವಿಯಾಗಿ ಮತ್ತು ಯಾವುದೇ ಪ್ರತಿದಾಳಿಗೆ ಅವಕಾಶವಿಲ್ಲದಂತೆ ಭಾರತೀಯ ವಾಯು ಸೇನೆ ದಾಳಿ ಮಾಡಿ ವಾಪಸ್ ಬಂದಿದೆ.
ಇವೆರಡು ಪಾಕಿಸ್ತಾನದ ಏರ್ಫೋರ್ಸ್ ಜೆಟ್ ವಿಮಾನಗಳ ಚಲನವಲನಗಳ ಮೇಲೆ ಮತ್ತು ಗಡಿ ನಿಯಂತ್ರಣಾ ರೇಖೆಗುಂಟ ಪಾಕಿಸ್ತಾನಕ್ಕೆ ಸೇರಿದ ಆ್ಯಂಟಿ-ಏರ್ ಕ್ರಾಫ್ಟ್ ರಾಡಾರ್ ಗಳ ಮೇಲೆ ಕಣ್ಣಿಟ್ಟಿದ್ದವು. ಇವೆರಡರಿಂದ ಸತತವಾಗಿ ವಾಯು ಸೇನೆಗೆ ಸಂದೇಶಗಳು ರವಾನೆಯಾಗುತ್ತಲೇ ಇದ್ದವು.

ಇದರಲ್ಲಿ ಹೆರಾನ್ ಡ್ರೋಣ್, ಮಧ್ಯಮ ಎತ್ತರದಲ್ಲಿ ಹಾರುವ, ದೂರ ದೃಷ್ಟಿಯ ಮಾನವರಹಿತ ವೈಮಾನಿಕ ವಾಹನವಾಗಿದ್ದು, ಇಸ್ರೇಲ್ ನ ಏರೋಸ್ಪೇಸ್ ಇಂಡಸ್ಟ್ರೀಸ್ ನ ಮಲತ್ ವಿಭಾಗ ಅಭಿವೃದ್ಧಿಪಡಿಸಿದೆ. ಇದು 10.5 ಕಿ.ಮೀ. ಎತ್ತರದಲ್ಲಿ 52 ಗಂಟೆಗಳ ಕಾಲ ಸತತವಾಗಿ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಭೂಮಿಯ ಮೇಲಿಂದ ಕೇಂದ್ರದಿಂದ ಸಂಪರ್ಕ ಕಡಿತಗೊಂಡರೆ ತಾನಾಗಿಯೇ ಭೂಮಿಗಿಳಿಯುವ ವ್ಯವಸ್ಥೆ ಇದರಲ್ಲಿದೆ. ಮತ್ತು ಇದು ಯಾವುದೇ ಪ್ರತಿಕೂಲ ವಾತಾವರಣವಿದ್ದರೂ ಸಮರ್ಥವಾಗಿ ಕೆಲಸ ನಿರ್ವಹಿಸುತ್ತದೆ.
ಸೆಂಟರ್ ಫಾರ್ ಏರ್ ಬಾರ್ನ್ ಸಿಸ್ಟೆಂಟ್ಸ್ ಸಹಯೋಗದೊಂದಿಗೆ ಡಿಆರ್ಡಿಓ ನಿರ್ಮಿಸಿರುವ 'ನೇತ್ರಾ', ಇತರ ದೇಶಗಳ ಏರ್ಫೋರ್ಸ್ ನ ಜೆಟ್ ವಿಮಾನಗಳ ಮೇಲೆ ಕಣ್ಣಿಟ್ಟಿರುತ್ತದೆ ಮತ್ತು ಚಲನವಲನ ಕಂಡುಬಂದರೆ ಮೊದಲೇ ಸೂಚನೆ ರವಾನಿಸುವ ವ್ಯವಸ್ಥೆ ಹೊಂದಿದೆ. ಆನ್-ಬೋರ್ಡ್ ಸೆನ್ಸಾರ್ ಗಳ ಮೂಲಕ ಪ್ರತಿದಾಳಿ ಆಗುವ ಸಂಭವನೀಯತೆ ಇದ್ದರೆ ಅದನ್ನು ಮೊದಲೇ ರವಾನಿಸುತ್ತದೆ.
ಇವುಗಳಂಥದೇ ವ್ಯವಸ್ಥೆ ಹೊಂದಿದ್ದ ಪಾಕಿಸ್ತಾನದ ಮಾನವರಹಿತ ವೈಮಾನಿಕ ವಾಹನವನ್ನು ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿ ಮಂಗಳವಾರು ಹೊಡೆದುರುಳಿಸಲಾಗಿದೆ. ಕಛ್ ಜಿಲ್ಲೆಯ ಅಬ್ದಸಾ ತಾಲೂಕಿನ ನಂಘಟದ್ ಗ್ರಾಮದ ಬಳಿ ಈ ಡ್ರೋಣ್ ನ ಅವಶೇಷಗಳು ಬಿದ್ದಿದ್ದವು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications