ಉಗ್ರರ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ ನೇತ್ರಾ, ಹೆರಾನ್
ಶ್ರೀನಗರ, ಫೆಬ್ರವರಿ 26 : ಗಡಿ ನಿಯಂತ್ರಣಾ ರೇಖೆಯ ಬಳಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ಭಾರತದ ವಾಯು ಸೇನೆ ಫೆಬ್ರವರಿ 26ರಂದು ಮುಂಜಾವಿನಲ್ಲಿ ದಾಳಿ ಮಾಡುತ್ತಿದ್ದಾಗ, 'ಐ ಇನ್ ದಿ ಸ್ಕೈ' ಎಂದೇ ಖ್ಯಾತವಾಗಿರುವ ಎರಡು ಡ್ರೋಣ್ ಗಳು ಪ್ರಮುಖ ಪಾತ್ರ ವಹಿಸಿವೆ.
ಒಂದು, ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (ಡಿಆರ್ಡಿಓ) ದೇಶೀಯವಾಗಿ ನಿರ್ಮಿಸಿರುವ 'ನೇತ್ರಾ' ಎಂಬ ಏರ್ ಬಾರ್ನ್ ಅರ್ಲಿ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಂ, ಮತ್ತು ಎರಡನೇಯದು, ಇಸ್ರೇಲ್ ನಿರ್ಮಿತ ಹೆರಾನ್ ಎಂಬ ಡ್ರೋಣ್. ಇವೆಡರ ಸಹಾಯದಿಂದ ಯಶಸ್ವಿಯಾಗಿ ಮತ್ತು ಯಾವುದೇ ಪ್ರತಿದಾಳಿಗೆ ಅವಕಾಶವಿಲ್ಲದಂತೆ ಭಾರತೀಯ ವಾಯು ಸೇನೆ ದಾಳಿ ಮಾಡಿ ವಾಪಸ್ ಬಂದಿದೆ.
ಇವೆರಡು ಪಾಕಿಸ್ತಾನದ ಏರ್ಫೋರ್ಸ್ ಜೆಟ್ ವಿಮಾನಗಳ ಚಲನವಲನಗಳ ಮೇಲೆ ಮತ್ತು ಗಡಿ ನಿಯಂತ್ರಣಾ ರೇಖೆಗುಂಟ ಪಾಕಿಸ್ತಾನಕ್ಕೆ ಸೇರಿದ ಆ್ಯಂಟಿ-ಏರ್ ಕ್ರಾಫ್ಟ್ ರಾಡಾರ್ ಗಳ ಮೇಲೆ ಕಣ್ಣಿಟ್ಟಿದ್ದವು. ಇವೆರಡರಿಂದ ಸತತವಾಗಿ ವಾಯು ಸೇನೆಗೆ ಸಂದೇಶಗಳು ರವಾನೆಯಾಗುತ್ತಲೇ ಇದ್ದವು.

ಇದರಲ್ಲಿ ಹೆರಾನ್ ಡ್ರೋಣ್, ಮಧ್ಯಮ ಎತ್ತರದಲ್ಲಿ ಹಾರುವ, ದೂರ ದೃಷ್ಟಿಯ ಮಾನವರಹಿತ ವೈಮಾನಿಕ ವಾಹನವಾಗಿದ್ದು, ಇಸ್ರೇಲ್ ನ ಏರೋಸ್ಪೇಸ್ ಇಂಡಸ್ಟ್ರೀಸ್ ನ ಮಲತ್ ವಿಭಾಗ ಅಭಿವೃದ್ಧಿಪಡಿಸಿದೆ. ಇದು 10.5 ಕಿ.ಮೀ. ಎತ್ತರದಲ್ಲಿ 52 ಗಂಟೆಗಳ ಕಾಲ ಸತತವಾಗಿ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಭೂಮಿಯ ಮೇಲಿಂದ ಕೇಂದ್ರದಿಂದ ಸಂಪರ್ಕ ಕಡಿತಗೊಂಡರೆ ತಾನಾಗಿಯೇ ಭೂಮಿಗಿಳಿಯುವ ವ್ಯವಸ್ಥೆ ಇದರಲ್ಲಿದೆ. ಮತ್ತು ಇದು ಯಾವುದೇ ಪ್ರತಿಕೂಲ ವಾತಾವರಣವಿದ್ದರೂ ಸಮರ್ಥವಾಗಿ ಕೆಲಸ ನಿರ್ವಹಿಸುತ್ತದೆ.
ಸೆಂಟರ್ ಫಾರ್ ಏರ್ ಬಾರ್ನ್ ಸಿಸ್ಟೆಂಟ್ಸ್ ಸಹಯೋಗದೊಂದಿಗೆ ಡಿಆರ್ಡಿಓ ನಿರ್ಮಿಸಿರುವ 'ನೇತ್ರಾ', ಇತರ ದೇಶಗಳ ಏರ್ಫೋರ್ಸ್ ನ ಜೆಟ್ ವಿಮಾನಗಳ ಮೇಲೆ ಕಣ್ಣಿಟ್ಟಿರುತ್ತದೆ ಮತ್ತು ಚಲನವಲನ ಕಂಡುಬಂದರೆ ಮೊದಲೇ ಸೂಚನೆ ರವಾನಿಸುವ ವ್ಯವಸ್ಥೆ ಹೊಂದಿದೆ. ಆನ್-ಬೋರ್ಡ್ ಸೆನ್ಸಾರ್ ಗಳ ಮೂಲಕ ಪ್ರತಿದಾಳಿ ಆಗುವ ಸಂಭವನೀಯತೆ ಇದ್ದರೆ ಅದನ್ನು ಮೊದಲೇ ರವಾನಿಸುತ್ತದೆ.
ಇವುಗಳಂಥದೇ ವ್ಯವಸ್ಥೆ ಹೊಂದಿದ್ದ ಪಾಕಿಸ್ತಾನದ ಮಾನವರಹಿತ ವೈಮಾನಿಕ ವಾಹನವನ್ನು ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿ ಮಂಗಳವಾರು ಹೊಡೆದುರುಳಿಸಲಾಗಿದೆ. ಕಛ್ ಜಿಲ್ಲೆಯ ಅಬ್ದಸಾ ತಾಲೂಕಿನ ನಂಘಟದ್ ಗ್ರಾಮದ ಬಳಿ ಈ ಡ್ರೋಣ್ ನ ಅವಶೇಷಗಳು ಬಿದ್ದಿದ್ದವು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications