ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು
RCB Sold: ಐಪಿಎಲ್ 2026 ಸೀಸನ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕತ್ವ ಬದಲಾವಣೆಯಾಗುತ್ತಿದೆ. ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ನೇತೃತ್ವದ ಒಕ್ಕೂಟವು ಖರೀದಿ ಮಾಡಿದೆ ಎಂದು ತಿಳಿದುಬಂದಿದೆ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ₹16,000 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗುವ ಮೂಲಕ ವಿಶ್ವದ ಅತ್ಯಂತ ದುಬಾರಿ ಕ್ರೀಡಾ ಫ್ರಾಂಚೈಸಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಹೊಸ ಮಾಲೀಕರು ಯಾರು?
ಪ್ರಸ್ತುತ ಮಾಲೀಕರಾದ ಡಿಯಾಜಿಯೊ (ಯುನೈಟೆಡ್ ಸ್ಪಿರಿಟ್ಸ್) ಸಂಸ್ಥೆಯಿಂದ ಈ ತಂಡವನ್ನು ದೈತ್ಯ ಹೂಡಿಕೆದಾರರ ಒಕ್ಕೂಟವೊಂದು ಖರೀದಿಸಿದೆ. ಈ ಒಕ್ಕೂಟದಲ್ಲಿ ಭಾರತದ ಹೆಮ್ಮೆಯ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಅಮೆರಿಕದ ಬೋಲ್ಟ್ ವೆಂಚರ್ಸ್ ಮತ್ತು ಜಾಗತಿಕ ಹೂಡಿಕೆ ಸಂಸ್ಥೆ ಬ್ಲ್ಯಾಕ್ಸ್ಟೋನ್ ಜಂಟಿ ಪಾಲುದಾರಿಕೆ ಹೊಂದಿವೆ.
ಈ ಐತಿಹಾಸಿಕ ಒಪ್ಪಂದದ ಅಡಿಯಲ್ಲಿ ಆದಿತ್ಯ ಬಿರ್ಲಾ ಗ್ರೂಪ್ನ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ಆರ್ಸಿಬಿ ಫ್ರಾಂಚೈಸಿಯ ನೂತನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
₹16,600 ಕೋಟಿ ಮೊತ್ತದ ಈ ಡೀಲ್ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ವ್ಯವಹಾರವಾಗಿದೆ. ಈ ಒಪ್ಪಂದವು ಕೇವಲ ಪುರುಷರ ತಂಡಕ್ಕೆ ಮಾತ್ರವಲ್ಲದೆ, ಆರ್ಸಿಬಿ ಮಹಿಳಾ ತಂಡವನ್ನೂ ಒಳಗೊಂಡಿದೆ. ಐಪಿಎಲ್ 2026ರ ಸೀಸನ್ ಮುಕ್ತಾಯದ ನಂತರ ಈ ಹೊಸ ಮಾಲೀಕತ್ವವು ಅಧಿಕೃತವಾಗಿ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಪ್ರಸ್ತುತ ಮಾಲೀಕತ್ವವೇ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
ಕುಮಾರ್ ಮಂಗಲಂ ಬಿರ್ಲಾ ಹೇಳಿದ್ದೇನು?
ಈ ಕುರಿತು ಮಾತನಾಡಿದ ಆದಿತ್ಯ ಬಿರ್ಲಾ ಗ್ರೂಪ್ನ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರು, "ಕಳೆದ ಎರಡು ದಶಕಗಳಲ್ಲಿ ಐಪಿಎಲ್ ಜಾಗತಿಕ ಕ್ರೀಡಾ ಶಕ್ತಿಯಾಗಿ ಬೆಳೆದು ಭಾರತೀಯ ಕ್ರಿಕೆಟ್ನ ಮೌಲ್ಯವನ್ನು ಹೆಚ್ಚಿಸಿದೆ. ಆರ್ಸಿಬಿಯಂತಹ ಪ್ರಭಾವಶಾಲಿ ತಂಡದ ಜವಾಬ್ದಾರಿ ವಹಿಸಿಕೊಳ್ಳುವುದು ನಮಗೆ ಹೆಮ್ಮೆಯ ವಿಷಯ. ಈ ಅಸಾಧಾರಣ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ," ಎಂದು ತಿಳಿಸಿದ್ದಾರೆ.
2025ರಲ್ಲಿ ಆರ್ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ತಂಡದ ಮೌಲ್ಯ ಗಗನಕ್ಕೇರಲು ಪ್ರಮುಖ ಕಾರಣವಾಗಿದೆ. ಈ ಬದಲಾವಣೆಯು ಮುಂಬರುವ ಸೀಸನ್ಗಳಲ್ಲಿ ತಂಡದ ಆರ್ಥಿಕ ಮತ್ತು ಕ್ರೀಡಾ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಮಾಲೀಕತ್ವದ ಬದಲಾವಣೆಯಿಂದ ಆಗುವ ಪರಿಣಾಮಗಳು
₹16,600 ಕೋಟಿಯ ಬೃಹತ್ ಹೂಡಿಕೆಯೊಂದಿಗೆ ಬಂದಿರುವ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಬ್ಲ್ಯಾಕ್ಸ್ಟೋನ್ನಂತಹ ಜಾಗತಿಕ ದೈತ್ಯ ಸಂಸ್ಥೆಗಳು ಆರ್ಥಿಕವಾಗಿ ಅತ್ಯಂತ ಬಲಿಷ್ಠವಾಗಿವೆ. ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ (ಬೋಲ್ಟ್ ವೆಂಚರ್ಸ್) ಅವರು ಎನ್ಬಿಎ ಮತ್ತು ಪ್ರೀಮಿಯರ್ ಲೀಗ್ನಂತಹ ಜಾಗತಿಕ ವೇದಿಕೆಗಳಲ್ಲಿ ಅನುಭವ ಹೊಂದಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ಕ್ರೀಡಾ ಹರಾಜು ಪ್ರಕ್ರಿಯೆಯು ಸಂಪೂರ್ಣವಾಗಿ ಡೇಟಾ ಸೈನ್ಸ್ ಮತ್ತು ಅಡ್ವಾನ್ಸ್ಡ್ ಸ್ಟ್ಯಾಟಿಸ್ಟಿಕ್ಸ್ ಆಧಾರಿತವಾಗಿರುತ್ತದೆ.
ಇದರಿಂದಾಗಿ ಆರ್ಸಿಬಿ ಹರಾಜಿನಲ್ಲಿ ಕೇವಲ 'ಹೆಸರಾಂತ' ಆಟಗಾರರ ಹಿಂದೆ ಹೋಗದೆ, 'ಪರ್ಫಾರ್ಮೆನ್ಸ್ ಆಧಾರಿತ' ಅಂಡರ್-ರೇಟೆಡ್ ಆಟಗಾರರನ್ನು ಗುರುತಿಸುವ ಸಾಧ್ಯತೆ ಹೆಚ್ಚಿದೆ. ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ಸ್ವತಃ ಮಾಜಿ ಕ್ರಿಕೆಟಿಗರಾಗಿರುವುದರಿಂದ, ಅವರಿಗೆ ದೇಶೀಯ ಕ್ರಿಕೆಟ್ನ ಬಗ್ಗೆ ಉತ್ತಮ ಜ್ಞಾನವಿದೆ. ಹರಾಜಿನಲ್ಲಿ ಕರ್ನಾಟಕದ ಅಥವಾ ಭಾರತದ ಉದಯೋನ್ಮುಖ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆಯಿದೆ.
ಡಿಯಾಜಿಯೊ ಸಂಸ್ಥೆಗೆ ಕ್ರಿಕೆಟ್ ಒಂದು ವ್ಯವಹಾರವಾಗಿತ್ತು. ಆದರೆ ಹೊಸ ಮಾಲೀಕರಿಗೆ ಇದು ಕ್ರೀಡಾ ಪರಂಪರೆ ನಿರ್ಮಿಸುವ ವೇದಿಕೆಯಾಗಿದೆ. ಇದರಿಂದಾಗಿ ಹರಾಜಿನಲ್ಲಿ ಪ್ರತಿ ಸೀಸನ್ಗೂ ತಂಡವನ್ನು ಬದಲಿಸುವ ಬದಲು, ಮುಂದಿನ 5-10 ವರ್ಷಗಳ ಕಾಲ ತಂಡವನ್ನು ಮುನ್ನಡೆಸಬಲ್ಲ ಸ್ಥಿರ ನಾಯಕತ್ವ ಮತ್ತು ಉತ್ತಮ ಆಟಗಾರರಿಗೆ ವೇದಿಕೆ ಕಲ್ಪಿಸಲು ಒತ್ತು ನೀಡಬಹುದು.
ಬ್ರ್ಯಾಂಡ್ ಮೌಲ್ಯ ಮತ್ತು ಆಟಗಾರರ ಆಕರ್ಷಣೆ
ಆರ್ಸಿಬಿ ಈಗಾಗಲೇ ದೊಡ್ಡ ಬ್ರ್ಯಾಂಡ್. ಈಗ ಬಿರ್ಲಾ ಮತ್ತು ಬ್ಲ್ಯಾಕ್ಸ್ಟೋನ್ ಅಂತಹ ಹೆಸರುಗಳು ಸೇರಿರುವುದರಿಂದ, ಜಾಗತಿಕ ಮಟ್ಟದ ಸ್ಟಾರ್ ಆಟಗಾರರು ಆರ್ಸಿಬಿ ಪರ ಆಡಲು ಹೆಚ್ಚು ಆಸಕ್ತಿ ತೋರುವ ಸಾಧ್ಯತೆಯಿದೆ. ಹರಾಜಿನ ಸಮಯದಲ್ಲಿ ಆಟಗಾರರನ್ನು ಮನವೊಲಿಸುವಲ್ಲಿ ಮತ್ತು ಅವರಿಗೆ ಉತ್ತಮ ವಾಣಿಜ್ಯ ಒಪ್ಪಂದಗಳನ್ನು ನೀಡುವಲ್ಲಿ ಹೊಸ ಮಾಲೀಕತ್ವ ನೆರವಾಗಬಹುದು. ಒಟ್ಟಿನಲ್ಲಿ ಹೊಸ ಮಾಲೀಕತ್ವವು ಆರ್ಸಿಬಿಗೆ ಕೇವಲ ಹಣವನ್ನಷ್ಟೇ ಅಲ್ಲದೆ, ಜಾಗತಿಕ ಕ್ರೀಡಾ ಶಿಸ್ತು ಮತ್ತು ವೃತ್ತಿಪರತೆಯನ್ನು ತರಲಿದೆ. ಇದು ಹರಾಜಿನಲ್ಲಿ "ಭಾವನಾತ್ಮಕ ಖರೀದಿ"ಗಿಂತ "ತರ್ಕಬದ್ಧ ಖರೀದಿ"ಗೆ ದಾರಿ ಮಾಡಿಕೊಡಬಹುದು ಎಂದು ಹೇಳಲಾಗುತ್ತದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
ಐಪಿಎಲ್ನಲ್ಲಿ ಯಾರೂ ಕೊಳ್ಳದಿದ್ದರೂ ಅಯೋಧ್ಯೆಯಲ್ಲಿ ಅಬ್ಬರಿಸಿದ ಆರ್ಸಿಬಿ ಮಾಜಿ ಆಟಗಾರ; 195 ರನ್ ಚಚ್ಚಿದ ಸ್ವಸ್ತಿಕ್ ಚಿಕಾರ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ












Click it and Unblock the Notifications