50 ಅಡಿ ಮರ ಹತ್ತಿ ಕೂತಿದ್ದ ಆರ್ಸಿಬಿ ಬೆಂಗಳೂರು ಅಭಿಮಾನಿ, ಮುಂದೆ ಆಗಿದ್ದು ಭಯಾನಕ... Virat Kohli
ಕನ್ನಡವೇ ನಮ್ಮಮ್ಮ, ಅವಳಿಗೆ ಕೈಮುಗಿಯಮ್ಮ... ಹಿಂಗೆ ನಮ್ಮ ಕನ್ನಡಿಗರು ಆರ್ಸಿಬಿ ತಂಡ 18 ವರ್ಷಗಳ ನಂತರ ಐಪಿಎಲ್ ಕಪ್ ಗೆದ್ದ ಸಂಭ್ರಮದಲ್ಲಿ ತೇಲಿ ಹೋಗಿದ್ದಾರೆ. ಜೂನ್ 3 ಮಂಗಳವಾರ ರಾತ್ರಿ ಆರ್ಸಿಬಿ ಕಪ್ ಗೆದ್ದ ಸುದ್ದಿ ತಿಳಿದ ನಂತರ ಸತತ 24 ಗಂಟೆ ಎಲ್ಲೆಲ್ಲೂ ಸಂಭ್ರಮವೇ ಮೊಳಗಿತ್ತು. ಆದರೆ ಇದೇ ಸಂಭ್ರಮದ ನಡುವೆ ಘೋರ ದುರಂತಗಳು ಕೂಡ ನಡೆದು ಹೋಗಿ, ಕಣ್ಣಲ್ಲಿ ನೀರು ಬರುವಂತೆ ಆಗಿದೆ. ಹೀಗಿದ್ದಾಗಲೇ, 50 ಅಡಿ ಮರ ಹತ್ತಿ ಕೂತಿದ್ದ ಆರ್ಸಿಬಿ ಬೆಂಗಳೂರು ಅಭಿಮಾನಿ, ಮುಂದೆ ಆಗಿದ್ದು ಭಯಾನಕ...
ಹೌದು, ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ 18 ವರ್ಷಗಳ ನಂತರ ಕಪ್ ಗೆದ್ದ ಹಿನ್ನೆಲೆ ಭಾರಿ ಭರ್ಜರಿ ಸಂಭ್ರಮ ಮನೆ ಮಾಡಿತ್ತು. ಆದರೆ ಈ ಸಂಭ್ರಮ ಕೇವಲ 24 ಗಂಟೆ ಒಳಗೆ ಮಣ್ಣುಪಾಲು ಕೂಡ ಆಗಿ ಹೋಯ್ತು. ಇದಕ್ಕೆ ಕೆಲವು ಅಭಿಮಾನಿಗಳು ಮಾಡಿದ ತಪ್ಪು & ಎಡವಟ್ಟು ಕಾರಣ ಅನ್ನೋ ಆರೋಪ ಮಾಡುತ್ತಿದ್ದಾರೆ ಆರ್ಸಿಬಿ ಬೆಂಗಳೂರು ತಂಡದ ವಿರೋಧಿಗಳು & ಶತ್ರುಗಳು. ಅದರಲ್ಲೂ ಆರ್ಸಿಬಿ ತಂಡವನ್ನ 5 ವರ್ಷಗಳ ಕಾಲ ಬ್ಯಾನ್ ಮಾಡಿ ಅಂತಾನೂ ಬಿಸಿಸಿಐ ಮಂಡಳಿಗೆ ಒತ್ತಾಯ ಮಾಡುತ್ತಿದ್ದಾರೆ ನಮ್ಮ ಬೆಂಗಳೂರು ತಂಡ ಆರ್ಸಿಬಿ ಶತ್ರುಗಳು. ಇಂತಹ ಸಮಯದಲ್ಲೇ...

50 ಅಡಿ ಮರ ಹತ್ತಿ ಕೂತಿದ್ದ ಆರ್ಸಿಬಿ ಅಭಿಮಾನಿ...
ಜೂನ್ 3 ಮಂಗಳವಾರ ರಾತ್ರಿ ನಮ್ಮ ಬೆಂಗಳೂರು ತಂಡ ಆರ್ಸಿಬಿ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಿತ್ತು. ಜೂನ್ 4 ಬುಧವಾರ ಸಂಜೆ ತನಕ ಎಲ್ಲಾ ಚನ್ನಾಗಿಯೇ ಇತ್ತು, ಆದರೆ ದಿಢೀರ್ ಅಂತಾ ದೊಡ್ಡ ಬರಸಿಡಿಲಿನ ಆಘಾತ ಆರ್ಸಿಬಿ ಅಭಿಮಾನಿಗಳಿಗೆ ಬಂದು ಎರಗಿತ್ತು. ಅಂದಹಾಗೆ ಗುಜರಾತ್ ಕ್ರೀಡಾಂಗಣದಲ್ಲಿ ಐಪಿಎಲ್ 2025 ಫೈನಲ್ ಮ್ಯಾಚ್ ಆಡಿ ಗೆದ್ದಿದ್ದ ಆರ್ಸಿಬಿ ತಂಡದ ಆಟಗಾರರು ಬುಧವಾರ ಬೆಂಗಳೂರಿಗೆ ಐಪಿಎಲ್ ಕಪ್ ಸಮೇತರಾಗಿ ಬಂದಿದ್ದರು...
ಹೀಗಿದ್ದಾಗ ಲಕ್ಷ ಲಕ್ಷ ಅಭಿಮಾನಿಗಳು ಒಟ್ಟಿಗೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಲು ಸಿದ್ಧರಾಗಿದ್ದರು. ಇದೇ ಸಮಯದಲ್ಲಿ ಘೋರ ಕಾಲ್ತುಳಿತ ಉಂಟಾಗಿ 11 ಆರ್ಸಿಬಿ ಅಭಿಮಾನಿಗಳ ಜೀವವೇ ತಕ್ಷಣ ಹೋಗಿದೆ. ನೂರಾರು ಆರ್ಸಿಬಿ ಅಭಿಮಾನಿಗಳಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ನರಳುತ್ತಿದ್ದು, ಅಪ್ಪ & ಅಮ್ಮ ಕಣ್ಣೀರು ಹಾಕುತ್ತಿದ್ದಾರೆ. ಹೀಗಿದ್ದಾಗಲೇ, 50 ಅಡಿ ಮರ ಹತ್ತಿ ಕೂತಿದ್ದ ಆರ್ಸಿಬಿ ಬೆಂಗಳೂರು ಅಭಿಮಾನಿ, ಮುಂದೆ ಆಗಿದ್ದು ಭಯಾನಕ...
ಅಯ್ಯಯ್ಯೋ ಹಿಂಗೆಲ್ಲಾ ಆಗಿ ಹೋಯ್ತಾ?
ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಅಭಿಮಾನಿ ಒಬ್ಬ ವಿಧಾನಸೌಧ ಎದುರಿಗೆ ಅಂದ್ರೆ ಹೈಕೋರ್ಟ್ ಬಳಿ ಇರುವ 50 ಅಡಿ ಮರ ಹತ್ತಿ ಕೂತಿದ್ದಾನೆ. ಹೀಗೆ ಈತ ಮರ ಹತ್ತಿ ಕೂತು ಆರ್ಸಿಬಿ ಸಂಭ್ರಮ ಕಾರ್ಯಕ್ರಮ ನೋಡುತ್ತಿದ್ದಾನೆ, ಇದೇ ವೇಳೆ ಆರ್ಸಿಬಿ ಅಭಿಮಾನಿ ಮರ ಹತ್ತಿ ಕೂತಿರುವ ವಿಚಾರ ವಿರಾಟ್ ಕೊಹ್ಲಿ ಅವರ ಕಣ್ಣಿಗೂ ಕಂಡಿದೆ. ಇದನ್ನ ನೋಡಿ ವಿಧಾನ ಸೌಧದ ಎದುರು ಸನ್ಮಾನ ಮಾಡಿಸಿಕೊಳ್ಳಲು ಬಂದಿದ್ದ ಕಿಂಗ್ ವಿರಾಟ್ ಕೊಹ್ಲಿ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ. ಆದರೆ 50 ಅಡಿ ಮರ ಹತ್ತಿ ಕೂತಿದ್ದ ಆರ್ಸಿಬಿ ಬೆಂಗಳೂರು ಅಭಿಮಾನಿ, ಮುಂದೆ ಆಗಿದ್ದು ಭಯಾನಕ... ಅದು ಏನು ಅಂದ್ರೆ ಹೀಗೆ ಆರ್ಸಿಬಿ ಅಭಿಮಾನಿ 50 ಅಡಿ ಮರ ಹತ್ತಿ ಕೂತಿರುವ ಸುದ್ದಿ ತಿಳಿದು, ಮತ್ತಷ್ಟು ಅಭಿಮಾನಿಗಳು ಕೂಡ ಅದೇ ರೀತಿಯಾಗಿ ಮರ ಹತ್ತಿದ್ದಾರೆ. ಹೀಗೆ ಸುಮಾರು ಅಭಿಮಾನಿಗಳು ಈ ರೀತಿ ಮರ ಹತ್ತುವ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಪೊಲೀಸರು ಬಂದು ಎಲ್ಲರನ್ನೂ ಇಳಿಸಿದ್ದು, ಅಪಾಯ ಒಂದು ಕೂದಲೆಳೆ ಅಂತರದಲ್ಲಿ ತಪ್ಪಿ ಹೋಗಿದೆ...
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications