Ravichandran Ashwin: ಭಾರತ ತಂಡ ಸೇರಿಕೊಂಡ ರವಿಚಂದ್ರನ್ ಅಶ್ವಿನ್
ಇಂಗ್ಲೆಂಡ್ ವಿರುದ್ಧದ 3 ನೇ ಟೆಸ್ಟ್ನ 4 ನೇ ದಿನದಂದು ರವಿಚಂದ್ರನ್ ಅಶ್ವಿನ್ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಕುಟುಂಬದಲ್ಲಿ ವೈದ್ಯಕೀಯ ತುರ್ತುಸ್ಥಿತಿಯ ಕಾರಣ ರಾಜ್ಕೋಟ್ ಟೆಸ್ಟ್ನಿಂದ ಹೊರಗುಳಿದಿದ್ದರು. ಮೂರನೇ ದಿನ ತಂಡದಿಂದ ಹೊರಗಿದ್ದ ಅವರು, ನಾಲ್ಕನೇ ದಿನ ಮತ್ತೆ ತಂಡವನ್ನು ಸೇರಿಕೊಂಡರು.
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ತಮ್ಮ ತಾಯಿಯನ್ನು ಭೇಟಿಯಾಗಲು ಚೆನ್ನೈಗೆ ಹಿಂದಿರುಗಿದ್ದರು. ಆದರೆ 48 ಗಂಟೆಗಳ ನಂತರ ಭಾರತ ತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದರು.

"ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ಸ್ವಲ್ಪ ಸಮಯದ ನಂತರ ಆರ್ ಅಶ್ವಿನ್ ಅವರನ್ನು ತಂಡಕ್ಕೆ ಹಿಂದಿರುಗಿಸುವುದಾಗಿ ಘೋಷಿಸಲು ಸಂತೋಷವಾಗಿದೆ. ಅಶ್ವಿನ್, 3 ನೇ ಟೆಸ್ಟ್ನ 2 ನೇ ದಿನದ ನಂತರ ತಂಡದಿಂದ ತಾತ್ಕಾಲಿಕವಾಗಿ ಹಿಂದೆ ಸರಿಯಬೇಕಾಯಿತು. ಕುಟುಂಬದ ತುರ್ತು ಪರಿಸ್ಥಿತಿಗೆ ಹಾಜರಾಗಲು ರಾಜ್ಕೋಟ್ನಲ್ಲಿ ಆರ್ ಅಶ್ವಿನ್ ಮತ್ತು ತಂಡದ ಮ್ಯಾನೇಜ್ಮೆಂಟ್ ಅವರು 4 ನೇ ದಿನದಂದು ಮತ್ತೆ ತಂಡಕ್ಕೆ ಬರುತ್ತಾರೆ ಮತ್ತು ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ತಂಡದ ಕಾರಣಕ್ಕಾಗಿ ಕೊಡುಗೆಯನ್ನು ಮುಂದುವರಿಸುತ್ತಾರೆ ಎಂದು ಖಚಿತಪಡಿಸಲು ಸಂತೋಷವಾಗಿದೆ," ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿತ್ತು.
ಕಣಕ್ಕಿಳಿದ ಅಶ್ವಿನ್
ನಾಲ್ಕನೇ ದಿನ ಮಧ್ಯಾಹ್ನದ ವೇಳೆಗೆ ಭಾರತ ತಂಡವನ್ನು ಸೇರಿಕೊಂಡ ಅವರು, ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ನಂತರ, ಮೈದಾನಕ್ಕಿಳಿದರು. ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಳೆದುಕೊಂಡು 430 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 557 ರನ್ಗಳ ಮುನ್ನಡೆ ಹೊಂದಿರುವ ಭಾರತ ಇಂಗ್ಲೆಂಡ್ ಗೆಲುವಿಗೆ ಬೃಹತ್ ಗುರಿ ನೀಡಿದೆ.
ಮೂರನೇ ದಿನ ಅಶ್ವಿನ್ ಅನುಪಸ್ಥಿತಿ
ಮೂರನೇ ದಿನ ರವಿಚಂದ್ರನ್ ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ಭಾರತ ಕೇವಲ ನಾಲ್ವರು ಬೌಲರ್ ಗಳ ಜೊತೆ ಕಣಕ್ಕಿಳಿಯಿತು. ಅಶ್ವಿನ್ ಬದಲಾಗಿ ದೇವದತ್ ಪಡಿಕ್ಕಲ್ ಫೀಲ್ಡಿಂಗ್ ಮಾಡಿದರು.
ಅಶ್ವಿನ್ ಅನುಪಸ್ಥಿತಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ಬೌಲರ್ ಗಳು ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 319 ರನ್ಗಳಿಗೆ ಆಲೌಟ್ ಮಾಡಿತ್ತು. ಮೊಹಮ್ಮದ್ ಸಿರಾಜ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದಿದ್ದರು.
ಶುಕ್ರವಾರ ಅಶ್ವಿನ್ ಅವರು ಇಂಗ್ಲೆಂಡ್ನ ಝಾಕ್ ಕ್ರಾಲಿಯನ್ನು ಔಟ್ ಮಾಡಿದಾಗ 2 ನೇ ದಿನದಂದು ಐತಿಹಾಸಿಕ 500 ವಿಕೆಟ್ಗಳ ಗಡಿಯನ್ನು ತಲುಪಿದ ಭಾರತದ ಎರಡನೇ ಬೌಲರ್ ಎನಿಸಿಕೊಂಡರು.












Click it and Unblock the Notifications