FIFA World Cup 2022: ಕತಾರ್ನಲ್ಲಿ ಝಾಕೀರ್ ನಾಯ್ಕ್ರಿಂದ ಉಪನ್ಯಾಸ?
ಕತಾರ್, ನವೆಂಬರ್ 21: ವಿಶ್ವದ ಶ್ರೀಮಂತ ಕ್ರೀಡೆ ಎಂದರೆ ಫಿಫಾ ಪುಟ್ಬಾಲ್ ವಿಶ್ವಕಪ್. ಈ ಪುಟ್ಬಾಲ್ ವಿಶ್ವಕಪ್ 2022ರ ಆವೃತ್ತಿಯು ಗಲ್ಫ್ ದೇಶ ಕತಾರ್ನಲ್ಲಿ ನಿನ್ನೆ ಭಾನುವಾರದಿಂದ ಪ್ರಾರಂಭವಾಗಿದೆ. ಇಸ್ಲಾಂ ರಾಷ್ಟ್ರವೊಂದರಲ್ಲಿ ಫಿಫಾ ವಿಶ್ವಕಪ್ ನಡೆಯುತ್ತಿರುವುದು ಇದೇ ಮೊದಲ ಬಾರಿಗೆ. ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ಗೆ ಸಂಬಂಧಿಸಿದಂತೆ ವಿವಾದಗಳು ಮುಂದುವರೆದಿದೆ. ಈ ಹಿಂದೆ ಕ್ರೀಡಾಂಗಣದಲ್ಲಿ ಮದ್ಯಪಾನ ಮತ್ತು ಎಲ್ಜಿಬಿಟಿ ನಿಷೇಧದ ಕಾರಣ ಗಲಾಟೆ ನಡೆದಿತ್ತು. ಇದೀಗ ಫಿಫಾ ವಿಶ್ವಕಪ್ನಲ್ಲಿ ಇಸ್ಲಾಂ ಧರ್ಮವನ್ನು ಉತ್ತೇಜಿಸುವ ವಿವಾದ ಪ್ರಾರಂಭವಾಗಿದೆ.
ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ ಮತ್ತು ಪೋರ್ಚುಗೀಸ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಕೊನೆಯ ವಿಶ್ವಕಪ್ ಆಡಲಿರುವುದರಿಂದ ಈ ಬಾರಿ ಫಿಫಾ ವಿಶ್ವಕಪ್ ಈ ಆವೃತ್ತಿಯು ಸಾಕಷ್ಟು ವಿಶೇಷವಾಗಲಿದೆ. ಮೊದಲ ದಿನವೇ 45 ಲಕ್ಷಕ್ಕೂ ಅಧಿಕ ಮಂದಿ ಪಂದ್ಯ ವೀಕ್ಷಿಸಿದ್ದಾರೆ. ಇಸ್ಲಾಂ ರಾಷ್ಟ್ರವಾದ ಕತಾರ್ ಇಂತಹ ದೊಡ್ಡ ಕಾರ್ಯಕ್ರಮದ ಸಹಾಯದಿಂದ ತನ್ನ ಇಸ್ಲಾಂ ಧರ್ಮವನ್ನು ಹರಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಕತಾರ್ನಿಂದ ಅನೇಕ ಮುಸ್ಲಿಂ ಬೋಧಕರನ್ನು ಕರೆಸಲಾಗಿದ್ದು, ಭಾರತದ ಪರಾರಿಯಾಗಿರುವ ಝಾಕೀರ್ ನಾಯ್ಕ್ರನ್ನೂ ಕೂಡ ಕರೆಸಿಕೊಂಡಿದೆ. ಪಂದ್ಯದ ವೇಳೆ ಮುಸ್ಲಿಂ ಧರ್ಮ ಪ್ರಚಾರ ಮಾಡುವ ಕೆಲಸ ಮಾಡಲಿದ್ದಾರೆ.
ಭಾರತದ ಪರಾರಿಯಾಗಿರುವ ಝಾಕೀರ್ ನಾಯ್ಕ್
ಭಾರತದ ಪರಾರಿಯಾಗಿರುವ ಝಾಕೀರ್ ನಾಯ್ಕ್ರನ್ನು ಕತಾರ್ ಕೂಡ ಕರೆದು ಭಾರತವನ್ನು ಕೆರಳಿಸಿದೆ. ಕತಾರ್ನ ಆಹ್ವಾನದ ಮೇರೆಗೆ ಮೂಲಭೂತವಾದಿ ಇಸ್ಲಾಂ ಧಾರ್ಮಿಕ ಮುಖಂಡ ಕೂಡ ಗಲ್ಫ್ ದೇಶವನ್ನು ತಲುಪಿದ್ದಾರೆ. ಝಾಕೀರ್ ನಾಯ್ಕ್ ಭಾರತದಲ್ಲಿ ಧಾರ್ಮಿಕ ಮತಾಂತರವನ್ನು ಉತ್ತೇಜಿಸುತ್ತಿದ್ದರು. ಅಷ್ಟೇ ಅಲ್ಲ, ಭಾರತದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಅನೇಕ ಆರೋಪಗಳು ಅವರ ಮೇಲಿವೆ.

ಭಾರತದ ವಿರೋಧಿ ಕತಾರ್?
ಕತಾರ್ ಆಗಾಗ್ಗೆ ಭಾರತದ ವಿರೋಧಿಗಳನ್ನು ಬೆಂಬಲಿಸುತ್ತದೆ. ಇದಕ್ಕೂ ಮುನ್ನ ಕತಾರ್ ಭಾರತದ ವಿವಾದಿತ ಚಿತ್ರಕಲಾವಿದ ಎಂಎಫ್ ಹುಸೇನ್ ಅವರಿಗೆ ಆಶ್ರಯ ನೀಡಿದ್ದರು. ಅಷ್ಟೇ ಅಲ್ಲ, ನೂಪುರ್ ಶರ್ಮಾ ಹೇಳಿಕೆ ಮೇರೆಗೆ ಭಾರತೀಯ ರಾಯಭಾರಿಯನ್ನು ಕರೆಸಲಾಗಿತ್ತು. ನೂಪುರ್ ಶರ್ಮಾ ಪ್ರಕರಣದಲ್ಲಿ ಕತಾರ್ ಭಾರತದ ವಿರುದ್ಧ ಸಾಕಷ್ಟು ಹೇಳಿಕೆಗಳನ್ನು ನೀಡಿತ್ತು.

ಈಗ ಅವರು ಭಾರತದಿಂದ ಪಲಾಯನವಾದಿ ಎಂದು ಘೋಷಿಸಲ್ಪಟ್ಟಿರುವ ಮೂಲಭೂತವಾದಿ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಅವರನ್ನು ಕರೆದಿದ್ದಾರೆ. ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ಶುರುವಾಗಿದೆ. ಕ್ರೀಡಾಕೂಟದಲ್ಲಿ ಕತಾರ್ಗೆ ಮುಸ್ಲಿಂ ಬೋಧಕ ಏಕೆ ಬೇಕು ಎಂದು ಜನರು ಕೇಳಿದರು. ಅದೂ ಝಾಕೀರ್ ನಾಯ್ಕ್ ಇತರ ಧರ್ಮಗಳಿಗೆ ಅಗೌರವ ತೋರಿದ ಇತಿಹಾಸವಿರುವಾಗ ಇಂತಹ ವ್ಯಕ್ತಿಗಳನ್ನು ಜಾಗತಿಕವಾಗಿ ಧಾರ್ಮಿಕ ಪ್ರಚಾರ ಮಾಡುವುದು ಏಕೆಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications