Bengaluru Bulls: ರೋಚಕ ಹಣಾಹಣಿಯಲ್ಲಿ ಯು ಮುಂಬಾ ವಿರುದ್ಧ ಗೆದ್ದ ಬೆಂಗಳೂರು ಗೂಳಿಗಳು
ಭಾನುವಾರ ದೆಹಲಿಯ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧ 42-37 ಅಂಕಗಳ ಅಂತರದಿಂದ ಮಹತ್ವದ ಗೆಲುವು ಸಾಧಿಸಿತು. ಬೆಂಗಳೂರು ಬುಲ್ಸ್ ಪರ, ಸುಶೀಲ್ ಸೂಪರ್ 10 ಮತ್ತು ಅಕ್ಷಿತ್ 8 ಅಂಕಗಳನ್ನು ಪಡೆದರು, ಯು ಮುಂಬಾ ರೈಡರ್ ಜೈ ಭಗವಾನ್ ಅವರ 10 ಅಂಕಗಳ ಹೊರತಾಗಿಯೂ ಸೋಲೊಪ್ಪಿಕೊಂಡಿತು.
ಯು ಮುಂಬಾ ಭರ್ಜರಿಯಾಗಿಯೇ ಆಟ ಆರಂಭಿಸಿತು, ಆದರೆ ಬೆಂಗಳೂರು ಬುಲ್ಸ್ ಅವರಿಗೆ ಹೆಚ್ಚಿನ ಅವಕಾಶ ನೀಡಲಿಲ್ಲ. ಪಾರ್ಟೀಕ್ ಮತ್ತು ಆಲ್ರೌಂಡರ್ ರಾನ್ ಸಿಂಗ್ ಅವರ ಅತ್ಯುತ್ತಮ ಸೂಪರ್ ಟ್ಯಾಕಲ್ಗಳ ಮೂಲಕ ಬೆಂಗಳೂರು ಬುಲ್ಸ್ ಎರಡು ಬಾರಿ ಆಲ್-ಔಟ್ ಅವಕಾಶಗಳನ್ನು ತಡೆಯಿತು. ಆದರೆ ಯು ಮುಂಬಾದ ರೈಡರ್ ಜೈ ಭಗವಾನ್ ಬುಲ್ಸ್ ವಿರುದ್ಧ ಮೇಲುಗೈ ಸಾಧಿಸಿ ತಮ್ಮ ತಂಡದ ಮೊದಲ ಆಲ್-ಔಟ್ ಪಡೆದರು.

ಬೆಂಗಳೂರು ಬುಲ್ಸ್ ತಂಡವನ್ನು ದೂರವಿಡಲು ಯು ಮುಂಬಾ ಸಾಕಷ್ಟು ಶ್ರಮಿಸಬೇಕಾಯಿತು. ಅಕ್ಷಿತ್ ಅವರ ಸೂಪರ್ ರೈಡ್ ಬುಲ್ಸ್ಗೆ ಆತ್ಮವಿಶ್ವಾಸ ಕೊಟ್ಟಿತು. ಒಂದೇ ರೈಡ್ನಲ್ಲಿ 4 ಪಾಯಿಂಟ್ ಪಡೆಯುವ ಮೂಲಕ ಅಂಕಗಳ ಅಂತರ ಕಡಿಮೆ ಮಾಡಿದರು. ನಂತರ ಬೆಂಗಳೂರು ಬುಲ್ಸ್ ಯು ಮುಂಬಾವನ್ನು ಆಲ್-ಔಟ್ ಮಾಡಿದರು. ಯು ಮುಂಬಾ ರೈಡರ್ಗಳು ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದು ತಮ್ಮ ಎದುರಾಳಿಗಳಿಗೆ ರೈಡರ್ ಸುಶೀಲ್ ಮುನ್ನಡೆ ಸಾಧಿಸುವ ಅವಕಾಶವನ್ನು ನೀಡಿತು.
ಕೊನೆಯ 5 ನಿಮಿಷ ಇರುವಾಗ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದವು. ಆದರೆ ಪಂದ್ಯದ ಕೊನೆಯ ಹಂತದಲ್ಲಿ ಬೆಂಗಳೂರು ಬುಲ್ಸ್ ಪಾಯಿಂಟ್ಗಳ ಅಂತರವನ್ನು ಹೆಚ್ಚಿಸಿಕೊಂಡಿದ್ದಲ್ಲದೆ, ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಮಾಡು ಇಲ್ಲವೇ ಮಡಿ ಪಂದ್ಯ
ಬೆಂಗಳೂರು ಬುಲ್ಸ್ ಮುಂದಿನ ಹಂತಕ್ಕೆ ಪ್ರವೇಶ ಪಡೆಯಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಸೋಲಿಸಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಮುಂದಿನ ಪಂದ್ಯಲ್ಲಿ ಬೆಂಗಳೂರು ಬುಲ್ಸ್ ಪುಣೇರಿ ಪಲ್ತಾನ್ ತಂಡವನ್ನು ಎದುರಿಸಲಿದೆ. ಫೆಬ್ರವರಿ 7ರಂದು ಈ ಪಂದ್ಯ ನಡೆಯಲಿದೆ. ಇದುವರೆಗೂ ಆಡಿರುವ 18 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಬೆಂಗಳೂರು ಬುಲ್ಸ್ 9 ಪಂದ್ಯಗಳಲ್ಲಿ ಸೋತಿದ್ದು ಎರಡು ಪಂದ್ಯಗಳಲ್ಲಿ ಟೈ ಮಾಡಿಕೊಂಡಿದೆ. 48 ಅಂಕಗಳೊಂದಿದೆ ಅಂಕಪಟ್ಟಿಯಲ್ಲಿ ಸದ್ಯ 7ನೇ ಸ್ಥಾನದಲ್ಲಿದೆ.
-
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್











Click it and Unblock the Notifications