Get Updates
Get notified of breaking news, exclusive insights, and must-see stories!

ವಿರುಷ್ಕಾ ಮಗುವಿನ ವಿರುದ್ಧ ಟ್ವೀಟ್ ಮಾಡಿದ ಟೆಕ್ಕಿಗೆ ಜಾಮೀನು

ಮುಂಬೈ, ನವೆಂಬರ್ 21: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಅಪ್ರಾಪ್ತ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ ವ್ಯಕ್ತಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಅಪ್ರಾಪ್ತ ಮಗುವಿನ ವಿರುದ್ಧ ಟ್ವಿಟರ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದ ಆರೋಪದ ಮೇಲೆ 23 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ರಾಮನಾಗೇಶ್ ಅಕುಬತಿನಿ ಅವರಿಗೆ ಮುಂಬೈ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ.

ಅಕ್ಟೋಬರ್ 24 ರಂದು T20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ತಂಡ ಸೋತ ನಂತರ ಕೊಹ್ಲಿ ಮತ್ತು ಶರ್ಮಾ ಅವರ 10 ತಿಂಗಳ ಮಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ಗಳನ್ನು ಆರೋಪಿ ರಾಮನಾಗೇಶ್ ಅಕುಬತಿನಿ ಕಳುಹಿಸಿದ್ದನು. ಮುಂಬೈ ಪೊಲೀಸರ ಸೈಬರ್ ವಿಭಾಗ ಕೊಹ್ಲಿಯ ಮ್ಯಾನೇಜ್‌ಮೆಂಟ್‌ನ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿತ್ತು. ಬಳಿಕ ಆರೋಪಿಯನ್ನು ನವೆಂಬರ್ 8, 2021 ರಂದು ಮುಂಬೈ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ. ಈತ ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ನ ಸ್ಟೇಟ್ ಟಾಪರ್ ಮತ್ತು ಪದವೀಧರನಾಗಿದ್ದಾನೆಂದು ತಿಳಿದು ಬಂದಿದೆ.

ನವೆಂಬರ್ 11, 2021 ರಂದು ಆರೋಪಿ ಅಕುಬತಿನಿಯನ್ನು ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯದಲ್ಲಿ ಅಕುಬತಿನಿ ಅವರು ವಿರಾಟ್ ಕೊಹ್ಲಿಯನ್ನು ಮೊದಲು ಟ್ರೋಲ್ ಮಾಡಲು ತನ್ನ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಅನ್ನು ನಿರಂತರವಾಗಿ ಬದಲಾಯಿಸಿದ್ದಾರೆ ಎಂದು ಹೇಳಿದರು. ಬಳಿಕ ಅಕುಬತಿನಿ ಅವರನ್ನು ಮ್ಯಾಜಿಸ್ಟ್ರೇಟ್ ಆದೇಶದಂತೆ ನವೆಂಬರ್ 16, 2021 ರವರೆಗೆ ಪೊಲೀಸ್ ಜೈಲಿನಲ್ಲಿರಿಸಲಾಯಿತು. ಆ ಸಮಯದಲ್ಲಿ ಅವರು ವಕೀಲ ಅಭಿಜೀತ್ ದೇಸಾಯಿ ಮೂಲಕ ಜಾಮೀನು ಅರ್ಜಿ ಸಲ್ಲಿಸಿದರು.

Mumbai court grants bail for Tweeter against Virushka child

ತನ್ನ ವಿರುದ್ಧ ಹೊರಿಸಲಾದ ಆರೋಪಗಳು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅರ್ಹವಲ್ಲ. ಆದ್ದರಿಂದ ಜಾಮೀನು ನೀಡಬೇಕು ಎಂದು ಅಕುಬtiನಿ ತನ್ನ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ. ಟ್ವೀಟ್ ಅನ್ನು ತುಂಡುಗಳಾಗಿ ನೋಡದೆ ಒಟ್ಟಾರೆಯಾಗಿ ನೋಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಖಾತೆಯು ಸಂದೇಶ ಪರೀಕ್ಷೆಯ ಆಧಾರದ ಮೇಲೆ ಎರಡು ಖಾತೆಗಳಿಂದ ಟ್ವೀಟ್‌ ಮಾಡಲಾಗಿದೆ. ಪರಿಣಾಮವಾಗಿ, ಟ್ವೀಟ್ ಅನ್ನು ಅಕುಬತಿನಿ ಕಳುಹಿಸಿದ್ದಾರೋ ಇಲ್ಲವೋ ಎಂಬುದು ಇನ್ನೂ ತನಿಖೆಯಲ್ಲಿದೆ.

ಅಕುಬತಿನಿಯಿಂದ ಪಡೆದ ಫೋನ್‌ನ ಐಪಿ ವಿಳಾಸವನ್ನು ದುರುದ್ದೇಶಪೂರಿತ ಉದ್ದೇಶಗಳಿಗಾಗಿ ಬಳಸಬಹುದು ಎಂಬುದು ವಾದವಾಗಿತ್ತು. "ಕೇವಲ IP ವಿಳಾಸವನ್ನು ಪತ್ತೆಹಚ್ಚುವುದರಿಂದ ಪ್ರಸ್ತುತ ಅರ್ಜಿದಾರರಿಗೆ ಆಪಾದಿತ ಕೃತ್ಯವನ್ನು ಆರೋಪಿಸಲು ಸಾಧ್ಯವಿಲ್ಲ" ಎಂದು ಮನವಿಯು ಒತ್ತಿಹೇಳಿದೆ. ಹೀಗಾಗಿ ಆರೋಪಿಗೆ ಅಪರಾಧಗಳಿಗೆ ಸಮಗ್ರ ತನಿಖೆಯ ಅಗತ್ಯವಿರುತ್ತದೆ, ಜೈಲು ವಾಸವಲ್ಲ ಎಂದು ಅವರು ಸೂಚಿಸಿದರು.

ಒಂದು ಅಥವಾ ಎರಡು ಶ್ಯೂರಿಟಿಗಳಿರಬೇಕು ಅದರಲ್ಲಿ ಒಬ್ಬರು ಸ್ಥಳೀಯರಾಗಿರಬೇಕು ಎಂಬ ಆಧಾರದಲ್ಲಿ ₹ 50,000 ಮೊತ್ತದ ಬಾಂಡ್‌ ಸಲ್ಲಿಸಿ ಜಾಮೀನು ಪಡೆಯುವಂತೆ ಶನಿವಾರ, ಬಾಂದ್ರಾದ ಮ್ಯಾಜಿಸ್ಟ್ರೇಟ್ ಅವರು ಆಕುಬತಿನಿಗೆ ಸೂಚಿಸಿದರು. ಆರೋಪಿಯು ವಾರಕ್ಕೆ ಎರಡು ಬಾರಿ ಒಂದು ತಿಂಗಳ ಕಾಲ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಾಜರಾಗಬೇಕು ಮತ್ತು ಶ್ಯೂರಿಟಿಗಳೊಂದಿಗೆ ತನ್ನ ವಾಸದ ವಿವರಗಳನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಅಕ್ಟೋಬರ್‌ 24 ರಂದು ದುಬೈನಲ್ಲಿ ನಡೆದ ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲು ಕಂಡಿದೆ. ಈ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ದ್ವೇಷದ ಕಾಮೆಂಟ್‌ಗಳು ಆರಂಭವಾಗಿತ್ತು. ಈ ಸೋಲಿಗೆ ಮೊಹಮ್ಮದ್‌ ಶಮಿ ಕಾರಣ. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಕಳಪೆ ಪ್ರದರ್ಶನ ನೀಡಿದ್ದ ಎಂದು ನಿಂದನೆ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಶಮಿ ವಿರುದ್ಧ ಕೋಮು ದ್ವೇಷದ ಕಾಮೆಂಟ್‌ಗಳನ್ನು ಮಾಡುತ್ತಿರುವಾಗ ಹಲವಾರು ಮಂದಿ ಮೊಹಮ್ಮದ್‌ ಶಮಿ ಪರವಾಗಿ ನಿಂತಿದ್ದರು. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಶಮಿ ಪರವಾಗಿ ಪೋಸ್ಟ್‌ ಮಾಡಿದ್ದರು. ಶಮಿ ವಿರುದ್ಧ ಕೋಮು ದ್ವೇಷ ತೋರುವ ಜನರ ವಿರುದ್ಧ ಖಡಕ್‌ ಆಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ವಿರಾಟ್‌ ಕೊಹ್ಲಿ, "ಈ ಜನರು ಬೆನ್ನುಮೂಳೆಯಿಲ್ಲದವರು" ಎಂದು ಕೊಹ್ಲಿ ಪ್ರಸ್ತಾಪ ಮಾಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+