Get Updates
Get notified of breaking news, exclusive insights, and must-see stories!

ಕನ್ನಡಿಗನಿಗೆ ಅವಕಾಶ ಕೊಟ್ಟಿದ್ದಕ್ಕೆ ಗೌತಮ್ ಗಂಭೀರ್ ವಿರುದ್ಧ ಕಿಡಿ ಕಾರಿದ ಮಾಜಿ ಕ್ರಿಕೆಟಿಗ

ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆದ ಬಳಿಕ ತಂಡವು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತ ಬಳಿಕ, ನ್ಯೂಜಿಲೆಂಡ್ ವಿರುದ್ಧ ಅವಮಾನಕರ ಟೆಸ್ಟ್ ಸರಣಿ ಸೋಲು ಕಂಡಿದೆ. 10 ವರ್ಷಗಳ ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಸೋತಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.

ಗೌತಮ್ ಗಂಭೀರ್ ವಿರುದ್ಧ ಈಗಾಗಲೇ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಇದೀಗ ಗೌತಮ್ ಗಂಭೀರ್ ಸಹ ಆಟಗಾರರಾಗಿದ್ದ ಮನೋಜ್ ತಿವಾರಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗೌತಮ್ ಗಂಭೀರ್ ಒಬ್ಬ ಕಪಟಿ, ಆತ ಹೇಳುವುದನ್ನು ಮಾಡುವುದಿಲ್ಲ ಎಂದು ಟೀಕಿಸಿದ್ದಾರೆ.

Manoj tiwary criticises gautam gambhir family comments

ಗೌತಮ್ ಗಂಭೀರ್ ಮತ್ತು ಮನೋಜ್ ತಿವಾರಿ ಭಾರತ ತಂಡದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೌತಮ್ ಗಂಭೀರ್ ಜೊತೆ ಆಡಿದ್ದಾರೆ. ಅಲ್ಲದೆ ದೆಹಲಿ ರಾಜ್ಯ ತಂಡಕ್ಕೂ ಸಹ ಜೊತೆಯಾಗಿ ಆಡಿದ್ದಾರೆ.

ಕನ್ನಡಿಗನಿಗೆ ಅವಕಾಶ ಕೊಟ್ಟಿದ್ದಕ್ಕೆ ಟೀಕೆ

ಇತ್ತೀಚೆಗೆ ಮನೋಜ್ ತಿವಾರಿ ಗೌತಮ್ ಗಂಭೀರ್ ಬೇಕೆಂದೆ ಹರ್ಷಿತ್ ರಾಣಾಗೆ ಅವಕಾಶ ನೀಡಿದ್ದಾರೆ. ಆಕಾಶ್‌ ದೀಪ್‌ರನ್ನು ಕಡೆಗಣಿಸಲಾಗಿದೆ ಎಂದು ಹೇಳಿದ್ದರು. ಇದಕ್ಕೆ ಹರ್ಷಿತ್ ರಾಣಾ ಸಮರ್ಥನೆ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಗಂಭೀರ್ ಅವರನ್ನು ಸಮರ್ಥನೆ ಮಾಡಿಕೊಳ್ಳುವುದರಿಲ್ಲ ಅಚ್ಚರಿಯೇನಿಲ್ಲ ಎಂದರು.

ಪರ್ತ್‌ನಲ್ಲಿ ಆಕಾಶ್ ದೀಪ್ ಬದಲಾಗಿ ಹರ್ಷಿತ್ ರಾಣಾ ಯಾಕೆ ಆಡಿದರು, ಅದು ಹೇಗೆ ಸಾಧ್ಯವಾಯಿತು. ಆಕಾಶ್ ದೀಪ್ ಏನು ತಪ್ಪು ಮಾಡಿದ್ದರು. ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ವೇಗದ ಬೌಲರ್ ಆಗಿ ಆಸ್ಟ್ರೇಲಿಯಾದಲ್ಲಿ ಬೌಲಿಂಗ್ ಮಾಡುವುದು ಕನಸಾಗಿರುತ್ತದೆ. ವೇಗಿಗಳಿಗೆ ಸಹಾಯ ನೀಡುವ ಪಿಚ್‌ಗಳಲ್ಲಿ ಆಕಾಶ್‌ ದೀಪ್‌ರನ್ನು ಕೂರಿಸಿ ಹರ್ಷಿತ್ ರಾಣಾರನ್ನು ಸೇರಿಸಿಕೊಂಡಿದ್ದೇಕೆ? ಹರ್ಷಿತ್ ರಾಣಾ ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಆಡಿಲ್ಲ, ಆಕಾಶ್ ದೀಪ್ ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಆಕಾಶ್ ದೀಪ್‌ರನ್ನು ಕೈಬಿಟ್ಟಿದ್ದು ಪಕ್ಷಪಾತದ ಧೋರಣೆ, ಅದಕ್ಕಾಗಿಯೇ ಅವರು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಹೆಚ್‌ಟಿ ಜೊತೆ ಮಾತನಾಡುವ ಸಂದರ್ಭದಲ್ಲಿ ತಿಳಿಸಿದ್ದಾರೆ.

ನಾನು ಯಾವುದೇ ತಪ್ಪಾದ ಮಾತು ಆಡುತ್ತಿಲ್ಲ, ಯಾರಾದರೂ ಇರುವ ವಿಚಾರ ಮಾತನಾಡಿದಾಗ, ವ್ಯಕ್ತಿಗಳನ್ನು ಸಮರ್ಥಿಸಿಕೊಳ್ಳಲು ಬರುತ್ತಾರೆ. ಆದರೆ ಅವರಿಗೆ ನಾನು ಏನು ಎನ್ನುವುದು ತಿಳಿದಿಲ್ಲ, ಸತ್ಯಗಳನ್ನು ಮಾತ್ರ ಮಾತನಾಡುತ್ತೇನೆ ಎಂದರು.

ಕುಟುಂಬವನ್ನು ನಿಂದಿಸಿದ್ದಾರೆ

ಗಂಭೀರ್ ಜೊತೆಗಿನ ತಮ್ಮ ಹಳೆಯ ಸಂಬಂಧವನ್ನು ಕೂಡ ನೆನಪಿಸಿಕೊಂಡರು. ಗಂಭೀರ್ ನನ್ನ ಕುಟುಂಬವನ್ನು ನಿಂದಿಸಿದ್ದಾರೆ. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿದರು.

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಗಂಭೀರ್ ನಿರ್ಧಾರಗಳ ಬಗ್ಗೆ ಕೂಡ ಪ್ರಶ್ನೆ ಮಾಡಿದ್ದಾರೆ. ಹರ್ಷಿತ್ ರಾಣಾ ಮತ್ತು ದೇವದತ್ ಪಡಿಕ್ಕಲ್‌ರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿದ ಅವರು, ಅಭಿಮನ್ಯು ಈಶ್ವರನ್ ಅಂತಹ ಬ್ಯಾಟರ್ ಇದ್ದಾಗ ದೇವದತ್ ಪಡಿಕ್ಕಲ್‌ಗೆ ಅವಕಾಶ ನೀಡಿದ್ದೇಕೆ ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+