ರಾಯಲ್ ಚಾಲೆಂಜ್ ಕುಡಿಯಲ್ಲ ಎಂದ ಡಿಸಿಎಂ ಡಿಕೆಶಿ, ಮತ್ತೇನು ಕುಡೀತಿರಿ ಸರ್? ಅಂತಾ ಕೇಳ್ತಿದ್ದಾರೆ ನೆಟ್ಟಿಗರು... Virat Kohli
ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಮಾರಾಟ ಆಗಲಿದೆ... 17,000 ಕೋಟಿ ರೂಪಾಯಿಗೆ ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಮಾರಾಟ ಮಾಡಲು ಸಿದ್ಧತೆ ನಡೆದಿದೆ... ಕರ್ನಾಟಕದ ಪ್ರಭಾವಿ ರಾಜಕಾರಣಿ ಬೆಂಗಳೂರು ತಂಡ ಆರ್ಸಿಬಿ ಖರೀದಿ ಮಾಡಲಿದ್ದಾರೆ... ಆರ್ಸಿಬಿ ಮಾರಾಟ ಮಾಡಿದರೆ ಮುಂದೆ ಏನು ಪರಿಸ್ಥಿತಿ? ವಿರಾಟ್ ಕೊಹ್ಲಿ ಆರ್ಸಿಬಿ ತಂಡ ಬಿಟ್ಟು ಹೋಗುತ್ತಾರಾ? ಹಿಂಗೆಲ್ಲಾ ಯರ್ರಾಬಿರ್ರಿ ಸುದ್ದಿಗಳು ಓಡಾಡುತ್ತಿರುವ ಸಮಯದಲ್ಲೇ, ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ!
ಯೆಸ್... ಬೆಂಗಳೂರು ತಂಡ ಆರ್ಸಿಬಿ 17,000 ಕೋಟಿ ರೂಪಾಯಿಗೆ ಮಾರಾಟ ಆಗುತ್ತಾ? ಅನ್ನೋ ಸುದ್ದಿಯನ್ನ ದಿಢೀರ್ ರಾಷ್ಟ್ರೀಯ ಮಾಧ್ಯಮಗಳು ಕೂಡ ಪ್ರಕಟಿಸಿದ್ದವು. 2025ರ ಐಪಿಎಲ್ ಕಪ್ ಗೆದ್ದ ನಮ್ಮ ಆರ್ಸಿಬಿ ತನ್ನ ಕೆಪಾಸಿಟಿ ಏನು? ಅಂತಾ ತೋರಿಸಿದೆ. ಈ ಸಮಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ತಾನು ಹೊಂದಿರುವ ಷೇರು ಮೌಲ್ಯ ಅಂದರೆ ಪಾಲನ್ನು ಮಾರಾಟ ಮಾಡಲು ಬ್ರಿಟನ್ ಮೂಲದ ಕಂಪನಿ ಡಿಯಾಜಿಯೋ ಸಿದ್ಧವಾಗಿದೆ, ಕರ್ನಾಟಕ ರಾಜ್ಯದ ಪ್ರಭಾವಿ ರಾಜಕಾರಣಿ ಆರ್ಸಿಬಿ ತಂಡ ಖರೀದಿ ಮಾಡುತ್ತಾರೆ ಎಂಬ ಸುದ್ದಿಗಳು ಸಂಚಲನ ಸೃಷ್ಟಿಸಿದ್ದವು. ಈ ಎಲ್ಲಾ ಸುದ್ದಿಗಳಿಗೆ ಇದೀಗ ಕರ್ನಾಟಕದ ಮಾನ್ಯ ಉಪಮುಖ್ಯಂತ್ರಿಗಳು ಖಡಕ್ ಉತ್ತರ ನೀಡಿದ್ದಾರೆ....

ರಾಯಲ್ ಚಾಲೆಂಜ್ ಕುಡಿಯಲ್ಲ ಎಂದ ಡಿಸಿಎಂ ಡಿಕೆಶಿ...
ಹೌದು, ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿಗೆ 7 ಕೋಟಿ ಕನ್ನಡಿಗರು ಪ್ರಾಣ ಬೇಕಾದರೂ ಕೊಡ್ತಾರೆ... ಹಿಂಗೆಲ್ಲಾ ಬೆಂಗಳೂರು ತಂಡ ಆರ್ಸಿಬಿ ಅಭಿಮಾನಿಗಳು ಹೇಳುತ್ತಾರೆ, ಆರ್ಸಿಬಿ ತಂಡವನ್ನು ಹೊಗಳುತ್ತಾರೆ. ಅದರಲ್ಲೂ ವಿರಾಟ್ ಕೊಹ್ಲಿ ಅಭಿಮಾನಿಗಳು ಕೂಡ ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಬೆನ್ನಿಗೆ ನಿಲ್ಲುತ್ತಾರೆ. ಈ ಮೂಲಕ 50 ಕೋಟಿಗೂ ಹೆಚ್ಚು ಅಭಿಮಾನಿಗಳನ್ನ ನಮ್ಮ ಬೆಂಗಳೂರು ತಂಡ ಆರ್ಸಿಬಿ ಹೊಂದಿದೆ ಅಂತಾರೆ ಫ್ಯಾನ್ಸ್. ಇಂತಹ ಸಮಯದಲ್ಲೇ, ಪ್ರಭಾವಿ ರಾಜಕಾರಣಿ ಆರ್ಸಿಬಿ ಬೆಂಗಳೂರು ತಂಡ ಖರೀದಿ ಮಾಡುವ ಸುದ್ದಿಯೂ ಜೋರಾಗಿದೆ. ಹೀಗಿದ್ದಾಗಲೇ, ರಾಯಲ್ ಚಾಲೆಂಜ್ ಕುಡಿಯಲ್ಲ ಎಂದ ಡಿಸಿಎಂ ಡಿಕೆಶಿ, ಮತ್ತೇನು ಕುಡೀತಿರಿ ಸರ್? ಅಂತಾ ಕೇಳ್ತಿದ್ದಾರೆ ನೆಟ್ಟಿಗರು...
ನನಗೇಕೆ ಆರ್ಸಿಬಿ ಟೀಮ್ ಬೇಕು?
ಅಂದಹಾಗೆ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್ಸಿಬಿ ತಂಡ ಖರೀದಿ ಮಾಡ್ತಾರೆ ಅಂತಾ ಹಬ್ಬಿದ್ದ ಗಾಳಿ ಸುದ್ದಿಗಳಿಗೆ ಇದೀಗ ಅವರೇ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ನಾನು ಹಿಂದಿನಿಂದ ಕೂಡ ಕರ್ನಾಟಕ ರಾಜ್ಯದ ಕ್ರಿಕೆಟ್ ಸಂಸ್ಥೆಯಲ್ಲಿ ಸದಸ್ಯ ಆಗಿದ್ದೇನೆ. ಹಾಗೇ ಹಿಂದೆ ನನಗೆ ಕೆಎಸ್ಸಿಎ ಮ್ಯಾನೇಜ್ಮೆಂಟ್ಗೆ ಸೇರುವ ಆಫರ್ ಕೂಡ ನೀಡಿದ್ದರು. ಆದರೆ ನನಗೆ ಅಷ್ಟೊಂದು ಟೈಂ ಇಲ್ಲ ಇದೇ ಕಾರಣಕ್ಕೆ ನನ್ನ ಶೈಕ್ಷಣಿಕ ಸಂಸ್ಥೆಗಳ ಉಸ್ತುವಾರಿ ನೋಡಿಕೊಳ್ಳಲು ಕುಟುಂಬದ ಸದಸ್ಯರಿಗೆ ಜವಾಬ್ದಾರಿ ನೀಡಿದ್ದೇನೆ ಎಂದಿದ್ದಾರೆ. ಅಲ್ಲದೆ, ನಾನು ರಾಯಲ್ ಚಾಲೆಂಜ್ ವಿಸ್ಕಿಯನ್ನೇ ಕುಡಿಯಲ್ಲ. ನನಗೇಕೆ ಆರ್ಸಿಬಿ ಟೀಮ್ ಬೇಕು? ಎಂದು ಪ್ರಶ್ನೆ ಮಾಡುವ ಮೂಲಕ ಗಾಳಿ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು...
ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ!
ಮತ್ತೊಂದು ಕಡೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಾನು ರಾಯಲ್ ಚಾಲೆಂಜ್ ವಿಸ್ಕಿಯನ್ನೇ ಕುಡಿಯಲ್ಲ ಅಂತಾ ಹೇಳಿದ ವಿಚಾರವನ್ನೇ ಮುಂದೆ ಇಟ್ಟುಕೊಂಡು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಿದ್ದಾರೆ. ಹಾಗೇ, ಮತ್ತೇನು ಕುಡೀತಿರಿ ಸರ್? ಅಂತಾ ಕೇಳ್ತಿದ್ದಾರೆ ನೆಟ್ಟಿಗರು. ಇದರ ಜೊತೆಗೆ ಆರ್ಸಿಬಿ ತಂಡವನ್ನು ಕರ್ನಾಟಕದಲ್ಲಿ ಪ್ರಭಾವಿ ರಾಜಕಾರಣಿ ಒಬ್ಬರು ಖರೀದಿ ಮಾಡುತ್ತಾರೆ ಅನ್ನೋ ಸುದ್ದಿಗೂ ಬ್ರೇಕ್ ಬಿದ್ದಿದ್ದು, ಆರ್ಸಿಬಿ ಅಭಿಮಾನಿಗಳು ಇದೀಗ ಮುಂದಿನ ಸಲ ಕೂಡ ಕಪ್ ನಮ್ದೇ ಅಂತಾ ಹೇಳುತ್ತಿದ್ದಾರೆ!
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications