RCB VS CSK: ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಭೀತಿ: 10 ಓವರ್ಗಳ ಪಂದ್ಯ ನಡೆದರೆ ಲೆಕ್ಕಾಚಾರ ಏನು? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಹೈ ವೋಲ್ಟೇಜ್ ಪಂದ್ಯವ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲು ಆರ್ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಶನಿವಾರ ನಡೆಯುವ ಪಂದ್ಯಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರ್ಸಿಬಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.
ಆರ್ಸಿಬಿ ಅಭಿಮಾನಿಗಳು ಶನಿವಾರ ಪಂದ್ಯ ಬರದೆ ಇದ್ದರೆ ಸಾಕಪ್ಪ ಎಂದು ದೇವರಲ್ಲಿ ಹರಿಕೆ ಕಟ್ಟಿಕೊಳ್ಳುತ್ತಿದ್ದಾರೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಸಿಎಸ್ಕೆ ಬಲಿಷ್ಠವಾಗಿದೆ. ಆದರೆ ಪ್ರಸಕ್ತ ಋತುವಿನ ಎರಡನೇ ಅವಧಿಯಲ್ಲಿ ಬೆಂಗಳೂರು ತಂಡ ನೀಡಿರುವ ಪ್ರದರ್ಶನ ಅಮೋಘವಾಗಿದೆ. ಆರಂಭದಲ್ಲಿ ಪಂದ್ಯಗಳನ್ನು ಸೋತು ಕೈ ಚೆಲ್ಲಿದ್ದ ಬೆಂಗಳೂರು ತಂಡ, ನಂತರ ಸತತ ಪಂದ್ಯಗಳನ್ನು ಗೆದ್ದು ಗೆಲುವಿನ ಟ್ರ್ಯಾಕ್ಗೆ ಮರಳಿದ್ದಾರೆ.

ಇಂದು ನಡೆಯುವ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಜಯ ಸಾಧಿಸಿ, ಪ್ಲೇ ಆಫ್ಗೆ ಪ್ರವೇಶಿಸಬೇಕು ಎಂದು ಅಭಿಮಾನಿಗಳ ಆಶಯವಾಗಿದೆ. ಆದರೆ ವರುಣ ಈ ಪಂದ್ಯಕ್ಕೆ ಕಾಟ ನೀಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಅಭಿಮಾನಿಗಳು ಈಗಾಗಲೇ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ಒಂದು ವೇಳೆ ಮಳೆ ಬಂದು ಓವರ್ಗಳಿಗೆ ಕತ್ತರಿ ಬಿದ್ದರೆ ಏನು ಕಥೆ ಎಂಬ ಆತಂಕ ಮನೆ ಮಾಡಿದೆ.
20 ಓವರ್ ಪಂದ್ಯ ನಡೆದರೆ ಸಮೀಕರಣ ಏನು?
ಒಂದು ವೇಳೆ ಶನಿವಾರ ಮಳೆರಾಯ ತನ್ನ ಕೆಲಸವನ್ನು ನಿಲ್ಲಿಸಿದ್ದೇ ಆದಲ್ಲಿ, 20 ಓವರ್ಗಳ ಸಂಪೂರ್ಣ ಪಂದ್ಯ ನಡೆಯುವ ಸಾಧ್ಯತೆ ಇದೆ. ಹೀಗೆ ಆದಲ್ಲಿ ಆರ್ಸಿಬಿ ಮೊದಲು ಬ್ಯಾಟ್ ಮಾಡಿದರೆ, ಸಿಎಸ್ಕೆ ತಂಡವನ್ನು 18 ರನ್ಗಳಿಂದ ಸೋಲಿಸಬೇಕು. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ ಮೊತ್ತವನ್ನು ಚೇಸ್ ಮಾಡಬೇಕಾದಲ್ಲಿ ಬೆಂಗಳೂರು ತಂಡ 18.1 ಓವರ್ಗಳಲ್ಲಿ ಗುರಿ ಮುಟ್ಟುವ ಅನಿವಾರ್ಯತೆ ಇದೆ. ಅಂದಗಾ ಮಾತ್ರ ಬೆಂಗಳೂರು ತಂಡದ ರನ್ ರೇಟ್ ಸಿಎಸ್ಕೆ ಗಿಂತಲೂ ಬಲಾಢ್ಯವಾಗುತ್ತದೆ.

ಮಳೆ ಕಾಟ ನೀಡಿ ಓವರ್ಗಳಿಗೆ ಕತ್ತರಿ ಬಿದ್ದರೆ?
ಶನಿವಾರ ಪಂದ್ಯ ಆರಂಭಕ್ಕೂ ಮುನ್ನ ಅಥವಾ ಪಂದ್ಯದ ಸಮಯದಲ್ಲಿ ಮಳೆ ಸುರಿದಿದ್ದೇ ಆದರೆ ಓವರ್ಗಳಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಹೀಗೆ ಆದರೂ ಇದಕ್ಕೆ ಪರಿಹಾರವಿದೆ. ಆರ್ಸಿಬಿ ಒಂದು ವೇಳೆ 16 ಓವರ್ಗಳಲ್ಲಿ 171 ರನ್ಗಳ ಗುರಿಯನ್ನು ನೀಡಿದರೆ, ಸಿಎಸ್ಕೆ ತಂಡವನ್ನು ಆರ್ಸಿಬಿ 152 ರನ್ಗಳಿಗೆ ಕಟ್ಟಿ ಹಾಕುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಪ್ಲೇ ಆಫ್ ಆಸೆ ಫಲಿಸುತ್ತದೆ.
ಪಂದ್ಯ ಹತ್ತು ಓವರ್ ನಡೆದರೆ?
ಮಳೆ ಹೆಚ್ಚು ಸಮಯ ಬಿದ್ದ ಪರಿಣಾಮ ಕೇವಲ 10 ಓವರ್ಗಳ ಪಂದ್ಯವನ್ನು ಆಡಿಸಲು ಅವಕಾಶವಾದರೆ, ಆಗಲೂ ಇದೇ ಸಮೀಕರಣ ಅಪೈ ಆಗುತ್ತದೆ. ಅಂದರೆ ಸಿಂಪಲ್ ಆರ್ಸಿಬಿ ಚೇಸ್ ಮಾಡಿದರೆ, 11 ಎಸೆತ ಇರುವಾಗಲೇ ಗೆಲ್ಲಬೇಕು. ಡಿಫೆಂಡ್ ಮಾಡಿಕೊಳ್ಳುವುದಿದ್ದರೆ 18 ರನ್ ಜಯ ಸಾಧಿಸಬೇಕು. ಅಂದಾಗ ಮಾತ್ರ ಪ್ಲೇ ಆಫ್ ಕನಸು ನನಸಾಗುತ್ತದೆ. ಇಲ್ಲದಿದ್ದರೆ ಈ ಬಾರಿಯೂ. ನಿರಾಸೆ ಕಟ್ಟಿಟ್ಟ ಬುತ್ತಿತ್ತು.
ಕಳೆದ ಕೆಲವು ಪಂದ್ಯಗಳಲ್ಲಿ ಆರ್ಸಿಬಿ ನೀಡಿದ ಪ್ರದರ್ಶನವನ್ನು ಸಿಎಸ್ಕೆ ವಿರುದ್ಧವೂ ನೀಡಿದ್ದೇ ಆದಲ್ಲಿ ಗೆಲುವಿನ ನಗೆ ಬೀರಬಹುದು.
-
ಆಶಾ ಭೋಸ್ಲೆಗೆ ಮುಂಬೈ ಇಂಡಿಯನ್ಸ್-ಆರ್ಸಿಬಿ ಪಂದ್ಯದಲ್ಲಿ ಗೌರವ ನಮನ, ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಆಟಗಾರರು -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Vaibhav Suryavanshi: ನನ್ನ ಕನಸು ಕೊನೆಗೂ ನನಸಾಯಿತು; ವಿರಾಟ್ ಕೊಹ್ಲಿಗೆ ವಿಶೇಷ ಧನ್ಯವಾದ ಹೇಳಿದ ವೈಭವ್ ಸೂರ್ಯವಂಶಿ -
ಒಂದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಒಲಿದ ಮೂರು ಮರೆಯಲಾಗದ ಗೌರವಗಳು; ಕಿಂಗ್ ಕೊಹ್ಲಿ ಸಂದೇಶ ಭಾರೀ ವೈರಲ್ -
IPL 2026: ಸಿಎಸ್ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಮಳೆ ಭೀತಿ ಇದ್ಯಾ? ಹವಾಮಾನ ಇಲಾಖೆ ಹೇಳೋದೇನು -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್








Click it and Unblock the Notifications