Get Updates
Get notified of breaking news, exclusive insights, and must-see stories!

ದುಲೀಪ್ ಟ್ರೋಫಿ 2022: ದಕ್ಷಿಣ ವಲಯಕ್ಕೆ ಮಯಾಂಕ್ ಉಪ ನಾಯಕ

ಬೆಂಗಳೂರು, ಆಗಸ್ಟ್ 30: ದೇಶಿ ಕ್ರಿಕೆಟ್‌ನ ಪ್ರಮುಖ ಟೂರ್ನಮೆಂಟ್ ದುಲೀಪ್ ಟ್ರೋಫಿಗೆ ತಂಡಗಳು ಪ್ರಕಟವಾಗಿವೆ. ಆರು ವಲಯಗಳನ್ನು ಒಳಗೊಂಡ ತಂಡಗಳನ್ನು ಹಿರಿಯ ಅನುಭವಿ ಆಟಗಾರರು ಪ್ರತಿನಿಧಿಸುತ್ತಿದ್ದು, ಜೊತೆಗೆ ಯುವ ಪ್ರತಿಭೆಗಳಿಗೂ ಅವಕಾಶ ಸಿಗಲಿದೆ. ದುಲೀಪ್ ಟ್ರೋಫಿ 2022ಯ ದಕ್ಷಿಣ ವಲಯ ತಂಡಕ್ಕೆ ಹನುಮ ವಿಹಾರಿ ನಾಯಕರಾಗಿದ್ದರೆ, ಕರ್ನಾಟಕದ ಮಯಾಂಕ್ ಅಗರವಾಲ್ ಉಪ ನಾಯಕರಾಗಿ ಆಯ್ಕೆ ಮಾಡಲಾಗಿದೆ.

2022-23ನೇ ಸಾಲಿನ 50ಓವರ್ ಗಳ ದುಲೀಪ್ ಟ್ರೋಫಿ ಪಂದ್ಯಾವಳಿಗಳನ್ನು ಚೆನ್ನೈ, ಸೇಲಂ,ಪಾಂಡಿಚೇರಿ ಹಾಗೂ ಕೊಯಮತ್ತೂರು ಆಯೋಜಿಸುತ್ತಿದೆ. ಎಲ್ಲಾ ಪಂದ್ಯಗಳು ಬೆಳಗ್ಗೆ 9ಕ್ಕೆ ಆರಂಭವಾಗಲಿವೆ. ಸೆಪ್ಟೆಂಬರ್ 8ರಿಂದ ಟೂರ್ನಮೆಂಟ್ ಆರಂಭವಾಗಲಿವೆ.

ಮೊದಲ ಪಂದ್ಯ ಚೆನ್ನೈನಲ್ಲಿ ಫೈನಲ್ ಪಂದ್ಯ ಕೊಯಮತ್ತೂರಿನಲ್ಲಿ ನಡೆಯಲಿದೆ. 2019-20ರಲ್ಲಿ ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಪಂದ್ಯಾವಳಿ ಕೊನೆಯ ಬಾರಿಗೆ ಆಯೋಜಿಸಲಾಗಿತ್ತು. ಇಂಡಿಯಾ ಬ್ಲೂ, ಗ್ರೀನ್ ಹಾಗೂ ರೆಡ್ ಎಂದು ಮೂರು ತಂಡಗಳು ಮಾತ್ರ ಭಾಗವಹಿಸಿದ್ದವು. ಈಗ ಮತ್ತೊಮ್ಮೆ ಹಳೆ ಮಾದರಿಗೆ ಟೂರ್ನಿ ಮರಳಿದ್ದು, 6 ತಂಡಗಳು ಸೆಣೆಸಲಿವೆ

ದುಲೀಪ್ ಟ್ರೋಫಿ ಗೆಲ್ಲುವ ತಂಡಕ್ಕೆ 30 ಲಕ್ಷ ರು ಬಹುಮಾನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. ರನ್ನರ್ ಅಪ್ ತಂಡಕ್ಕೆ 15 ಲಕ್ಷ ರು ಸಿಗಲಿದೆ.

ಉತ್ತರ ವಲಯ

ಉತ್ತರ ವಲಯ

ಉತ್ತರ ವಲಯ: ಮನ್ದೀಪ್ ಸಿಂಗ್ - ನಾಯಕ (PCA), ಯಶ್ ಧುಲ್ (DDCA), ಧ್ರುವ್ ಶೋರೆ - ಉಪ ನಾಯಕ (DDCA), ಮನನ್ ವೋಹ್ರಾ (PCA), ಹಿಮಾಂಶು ರಾಣಾ (HCA), ಆಕಾಶ್ ವಶಿಷ್ಟ್ (HPCA), ಅನ್ಮೋಲ್ ಮಲ್ಹೋತ್ರಾ - WK (PCA) , ಮಯಾಂಕ್ ದಾಗರ್ (HPCA), ಪುಲ್ಕಿತ್ ನಾರಂಗ್ (SSCB), ನವದೀಪ್ ಸೈನಿ (DDCA), ಸಿದ್ಧಾರ್ಥ್ ಕೌಲ್ (PCA), ಜಗಜಿತ್ ಸಿಂಗ್ (UTCA), ನಿಶಾಂತ್ ಸಿಂಧು (HCA), ಕಮ್ರಾನ್ ಇಕ್ಬಾಲ್ (JKCA), ವಿಕಾಸ್ ಮಿಶ್ರಾ (DDCA)

ದಕ್ಷಿಣ ವಲಯ

ದಕ್ಷಿಣ ವಲಯ

ದಕ್ಷಿಣ ವಲಯ: ಹನುಮ ವಿಹಾರಿ - ನಾಯಕ (Hyd CA), ಮಯಾಂಕ್ ಅಗರ್ವಾಲ್- ಉಪ ನಾಯಕ (KSCA), ರೋಹನ್ ಕುನ್ನುಮ್ಮಾಲ್ (ಕೇರಳ), ಮನೀಶ್ ಪಾಂಡೆ (KSCA), ದೇವದತ್ ಪಡಿಕ್ಕಲ್ (KSCA), ಬಿ ಇಂದರ್ಜಿತ್ (TNCA), ಏಕನಾಥ್ ಕೆರ್ಕರ್ WK (ಗೋವಾ) , ರಿಕಿ ಭುಯಿ - ವಿಕೆಟ್ ಕೀಪರ್(ಆಂಧ್ರ), ಸಾಯಿ ಕಿಶೋರ್ (ಟಿಎನ್‌ಸಿಎ), ಕೆ ಗೌತಮ್ (ಕೆಎಸ್‌ಸಿಎ), ಬೇಸಿಲ್ ಥಾಂಪಿ (ಕೇರಳ), ರವಿತೇಜ (Hyd ಸಿಎ), ವಿ ಸಿ ಸ್ಟೀಫನ್ (ಆಂಧ್ರ), ತನಯ್ ತ್ಯಾಗರಾಜನ್ (Hyd ಸಿಎ), ಲಕ್ಷೆ ಗರ್ಗ್ ( ಗೋವಾ)

ಪೂರ್ವ ವಲಯ

ಪೂರ್ವ ವಲಯ

ಪೂರ್ವ ವಲಯ: ಮನೋಜ್ ತಿವಾರಿ - ನಾಯಕ (ಸಿಎಬಿ), ವಿರಾಟ್ ಸಿಂಗ್ - ಉಪ ನಾಯಕ (ಜೆಎಸ್‌ಸಿಎ), ನಾಜಿಮ್ ಸಿದ್ದಿಕ್ (ಜೆಎಸ್‌ಸಿಎ), ಸುದೀಪ್ ಕುಮಾರ್ ಘರಾಮಿ (ಸಿಎಬಿ), ಶಂತನು ಮಿಶ್ರಾ (ಒಸಿಎ), ಅನುಸ್ತಪ್ ಮಜುಂದಾರ್ (ಸಿಎಬಿ), ರಿಯಾನ್ ಪರಾಗ್ (ಎಸಿಎ), ಕುಮಾರ್ ಕುಶಾಗ್ರಾ - ವಿಕೆಟ್ ಕೀಪರ್ (JSCA), ಅಭಿಷೇಕ್ ಪೊರೆಲ್ (CAB), ಶಾಬಾಜ್ ಅಹ್ಮದ್ (CAB), ಶಹಬಾಜ್ ನದೀಮ್ (JSCA), ಇಶಾನ್ ಪೊರೆಲ್ (CAB), ಆಕಾಶ್ ದೀಪ್ (CAB), ಮುಕ್ತರ್ ಹುಸೇನ್ (ACA), ಮಣಿ ಶಂಕರ್ ಮುರಾ ಸಿಂಗ್ (TCA) )

ಪಶ್ಚಿಮ ವಲಯ

ಪಶ್ಚಿಮ ವಲಯ

ಪಶ್ಚಿಮ ವಲಯ: ಅಜಿಂಕ್ಯ ರಹಾನೆ -ನಾಯಕ (ಮುಂಬೈ), ಶ್ರೇಯಸ್ ಅಯ್ಯರ್ (ಮುಂಬೈ), ಪೃಥ್ವಿ ಶಾ (ಮುಂಬೈ), ಯಶಸ್ವಿ ಜೈಸ್ವಾಲ್ (ಮುಂಬೈ), ರಾಹುಲ್ ತ್ರಿಪಾಠಿ (ಮಹಾರಾಷ್ಟ್ರ), ಚಿರಾಜ್ ಜಾನಿ (ಸೌರಾಷ್ಟ್ರ), ಹೆಟ್ ಪಟೇಲ್ (ಗುಜರಾತ್), ಹಾರ್ದಿಕ್ ತಮೋರೆ (ಮುಂಬೈ), ಶಮ್ಸ್ ಮುಲಾನಿ (ಮುಂಬೈ), ತನಿಶ್ ಕೋಟ್ಯಾನ್ (ಮುಂಬೈ), ಅತಿತ್ ಸೇಠ್ (ಬರೋಡಾ), ಚಿಂತನ್ ಗಜಾ (ಗುಜರಾತ್), ಶಾರ್ದೂಲ್ ಠಾಕೂರ್ (ಮುಂಬೈ), ಜಯದೇವ್ ಉನದ್ಕತ್ (ಸೌರಾಷ್ಟ್ರ), ಸತ್ಯಜೀತ್ ಬಚಾವ್ (ಮಹಾರಾಷ್ಟ್ರ)

ಕೇಂದ್ರ ವಲಯ

ಕೇಂದ್ರ ವಲಯ

ಕೇಂದ್ರ ವಲಯ: ಕರಣ್ ಶರ್ಮಾ - ನಾಯಕ (UPCA), ಶುಭಂ ಶರ್ಮಾ - ಉಪ ನಾಯಕ (MPCA), ಹಿಮಾಂಶು ಮಂತ್ರಿ - ವಿಕೆಟ್ ಕೀಪರ್ (MPCA), ಯಶ್ ದುಬೆ (MPCA), ಪ್ರಿಯಮ್ ಗಾರ್ಗ್ (UPCA), ರಿಂಕು ಸಿಂಗ್ (UPCA), ಅಶೋಕ್ ಮನೇರಿಯಾ (RCA) , ಅಕ್ಷಯ್ ವಾಡ್ಕರ್ - WK (VCA), ಗೌರವ್ ಯಾದವ್ (MPCA), ವೆಂಕಟೇಶ್ ಅಯ್ಯರ್ (MPCA), ದೀಪಕ್ ಧಪೋಲಾ (CAU), ಅನಿಕೇತ್ ಚೌಧರಿ (RCA), ಕುಮಾರ್ ಕಾರ್ತಿಕೇಯ (MPCA), ಆದಿತ್ಯ ಸರ್ವತೆ (VCA), ಅಂಕಿತ್ ರಜಪೂತ್ (UPCA)

ಈಶಾನ್ಯ ವಲಯ

ಈಶಾನ್ಯ ವಲಯ

ಈಶಾನ್ಯ ವಲಯ: ಆಶಿಶ್ ಥಾಪಾ - ನಾಯಕ (ಸಿಕ್ಕಿಂ), ಟೆಚಿ ನೇರಿ (ಅರುಣಾಚಲ), ಜೊನಾಥನ್ ರಾಂಗ್‌ಸೆನ್ (ನಾಗಾಲ್ಯಾಂಡ್), ಕಿಶನ್ ಲಿಂಗ್ಡೋಹ್ (ಮೇಘಾಲಯ), ಅಂಕುರ್ ಮಲಿಕ್ (ಸಿಕ್ಕಿಂ), ಬಿಶ್ವರ್ಜಿತ್ ಕೆ (ಮಣಿಪುರ), ಜಿ ಲಾಲ್ಬಿಯಾಕ್ವೇಲಾ (ಮಿಜೋರಾಂ), ಆರ್ ಕೆ ರೀಕ್ಸೋರಾಂ ಮಣಿಪುರ), ಕ್ರಿವಿಟ್ಸೊ ಕೆನ್ಸೆ (ನಾಗಾಲ್ಯಾಂಡ್), ಟೆಚಿ ಡೋರಿಯಾ (ಅರುಣಾಚಲ), ದಿಪ್ಪು ಸಂಗ್ಮಾ (ಮೇಘಾಲಯ), ಹೊಕೈಟೊ ಜಿಮೊಮಿ (ನಾಗಾಲ್ಯಾಂಡ್), ಎಲ್ ಕಿಶನ್ ಸಿಂಗಾ (ಮಣಿಪುರ), ಬಾಬಿ ಝಡ್ (ಮಿಜೋರಾಂ), ಎಂಡಿ. ಅಲ್ ಬಷಿದ್ (ಮಣಿಪುರ)

ಚಿತ್ರಕೃಪೆ: ಸಿಕ್ಕಿಂ ಕ್ರಿಕೆಟ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+