ಆಸ್ಟ್ರೇಲಿಯಾ ತಂಡಕ್ಕೆ ಸರಿಯಾಗಿ ಕೊಟ್ಟು ಸೇಡು ತೀರಿಸಿಕೊಂಡ ರೋಹಿತ್ ಶರ್ಮಾ!
ರೋಹಿತ್ ಶರ್ಮಾ ಇಂದು ಆಸ್ಟ್ರೇಲಿಯಾ ತಂಡದ ವಿರುದ್ಧ ಅಬ್ಬರಿಸಿದ್ದಾರೆ. ಅದರಲ್ಲೂ 2023ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿತ್ತು. ಹೀಗೆ ಭಾರತ ಸೋಲು ಕಂಡ 8 ತಿಂಗಳ ಒಳಗೆ, ಭಾರತ ಸೇಡು ತೀರಿಸಿಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ 2024ರ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿಳಲು ಭಾರತ ಮುಹೂರ್ತ ಫಿಕ್ಸ್ ಮಾಡಿದೆ. ಹಾಗಿದ್ರೆ ರೋಹಿತ್ ಶರ್ಮಾ ಹೆಂಗೆಲ್ಲಾ ಸೇಡನ್ನ ತೀರಿಸಿಕೊಂಡರು ಗೊತ್ತಾ? ಮುಂದೆ ಓದಿ.
ಆಸ್ಟ್ರೇಲಿಯಾ ವಿರುದ್ಧದ, ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ 3ನೇ ಪಂದ್ಯದಲ್ಲಿ ಭಾರತ ಆರಂಭದಲ್ಲೇ ಎಡವಿತ್ತು. ಮೊದಲಿಗೆ ಟಾಸ್ ಸೋತು ಹಿನ್ನಡೆ ಕಂಡ ಭಾರತ, ಅನಿವಾರ್ಯ ಸ್ಥಿತಿಯಲ್ಲಿ ಬ್ಯಾಟಿಂಗ್ ಆರಂಭ ಮಾಡಿತ್ತು. ಇದೇ ವೇಳೆ, ವಿರಾಟ್ ಕೊಹ್ಲಿ ಮತ್ತೆ ಸೊನ್ನೆ ಸುತ್ತಿ, ಡಕ್ ಔಟ್ ಆದರು. ಈ ಮೂಲಕ ವಿರಾಟ್ ಕೊಹ್ಲಿ ಔಟಾಗಿದ್ದು ಚಿಂತೆ ಹೆಚ್ಚಿಸಿತ್ತು. ಆದರೆ ಆಗಲೇ ರೋಹಿತ್ ಶರ್ಮಾ ರೊಚ್ಚಿಗೆದ್ದು ಕಾಂಗರೂ ಪಡೆಯ ಆಟಾಗಾರರಿಗೆ ಚಳಿ ಬಿಡಿಸಿದರು.

ಶತಕ ಬಾರಿಸಲು ರೋಹಿತ್ ಸಿದ್ಧ!
ರೋಹಿತ್ ಶರ್ಮಾ ಕೇವಲ 19 ಬಾಲ್ ಆಡಿ ಅರ್ಧ ಶತಕ ಬಾರಿಸಿದರು, ಈ ಮೂಲಕ ಭಾರತ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಇತ್ತೀಚಿನ ಮಾಹಿತಿ ಪ್ರಕಾರ ಭಾರತ ತಂಡವು 10 ಓವರ್ ಆಡಿದ್ದು, 114 ರನ್ಗೆ 2 ವಿಕೆಟ್ ಕಳೆದುಕೊಂಡಿದೆ. ಇನ್ನು ಭಾರತ ಟೀಂ ಕ್ಯಾಪ್ಟನ್ ರೋಹಿತ್ ಶರ್ಮಾ 36 ಬಾಲ್ ಆಡಿ 89 ರನ್ ಗಳಿಸಿದ್ದಾರೆ. 7 ಬೌಂಡರಿ & 8 ಸಿಕ್ಸರ್ ಸಿಡಿಸಿ 244.44 ಸರಾಸರಿಯಲ್ಲಿ ಔಟಾಗದೆ ಆಟವಾಡುತ್ತಿದ್ದಾರೆ ರೋಹಿತ್.
ಸೋತರೆ ಆಸ್ಟ್ರೇಲಿಯಾ ಮನೆ ಕಡೆಗೆ!
2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗ ಸೂಪರ್-8 ಹಂತದ ಪಂದ್ಯಗಳು ನಡೀತಾ ಇವೆ. ಈಗಾಗಲೇ ಆಸ್ಟ್ರೇಲಿಯಾ 2 ಮ್ಯಾಚ್ ಆಡಿ 1 ಮ್ಯಾಚ್ ಸೋತಿದೆ. ಹಾಗೇ ಕೇವಲ ಒಂದೇ ಒಂದು ಪಂದ್ಯ ಗೆದ್ದಿದೆ. ಹೀಗಾಗಿ ಆಸ್ಟ್ರೇಲಿಯಾ ಇಂದು ಭಾರತದ ವಿರುದ್ಧವೂ ಪಂದ್ಯ ಸೋತರೆ ಒಟ್ಟು 3 ಪಂದ್ಯದಲ್ಲಿ 2 ಪಂದ್ಯ ಸೋತಂತೆ ಆಗುತ್ತದೆ. ಆದರೆ ಭಾರತ ತಂಡ ಗಾಗಲೇ 2 ಮ್ಯಾಚ್ ಗೆದ್ದು, ಈಗ 3ನೇ ಪಂದ್ಯ ಗೆಲ್ಲಲು ಸಜ್ಜಾಗಿದೆ.
ಸೇಡಿಗೆ ಸೇಡು ಗ್ಯಾರಂಟಿ?
ಆಸ್ಟ್ರೇಲಿಯಾ ತಂಡವು ಇಂದು ಸೋತರೆ, ಅಫ್ಘಾನಿಸ್ತಾನ ತಂಡಕ್ಕೆ ಇದು ವರವಾಗಲಿದೆ. ಯಾಕಂದ್ರೆ ಅಫ್ಘಾನ್ ತಂಡ ಸೆಮಿಫೈನಲ್ ಪ್ರವೇಶ ಬಹುತೇಕ ಪಕ್ಕಾ ಆಗಲಿದೆ. ಹೀಗಾಗಿ ಇಂದು ಭಾರತ ಗೆಲ್ಲಬೇಕು ಅಂತಾ, ಅಫ್ಘಾನ್ ತಂಡ ಕೂಡ ಬೇಡಿಕೊಳ್ಳುತ್ತಿದೆ. ಈಗಿನ ಸ್ಥಿತಿ ನೋಡಿದರೆ ಭಾರತ ತಂಡ ಈ ಪಂದ್ಯ ಗೆದ್ದು, ಆಸ್ಟ್ರೇಲಿಯಾ ಆಟಗಾರರಿಗೆ ಮನೆಯ ದಾರಿ ತೋರಿಸುವುದು ಬಹುತೇಕ ಪಕ್ಕಾ ಆಗಿದೆ. ಹಾಗೇ 2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ಫೈನಲ್ ಪಂದ್ಯ ಸೋತಿದ್ದಕ್ಕೆ ಸೇಡು ತೀರಿಸಿಕೊಂಡಂತೆ ಆಗಲಿದೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications