ICC World Cup: ವಿಶ್ವಕಪ್ ಗೆದ್ದು ಮನೆಗೆ ಹೋದ್ರೆ ಆಸ್ಟ್ರೇಲಿಯಾ ಆಟಗಾರರಿಗೆ ಮರ್ಯಾದಿ ಸಿಗಲೇ ಇಲ್ಲ!
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲು ಕಂಡ ಕಾರಣ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ. ಹೀಗೆ ಚಾಂಪಿಯನ್ ಆಸಿಸ್ ತನ್ನ ತವರು ಆಸ್ಟ್ರೇಲಿಯಾಗೆ ತೆರಳಿದರೆ ಅವರಿಗೆ ಸಿಕ್ಕ ಮರ್ಯಾದಿ ಎಂತಹದ್ದು ಗೊತ್ತಾ?
ಹೌದು ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭರ್ಜರಿಯಾಗಿ ವಿಶ್ವಕಪ್ ಗೆದ್ದು ಬೀಗಿ, 6ನೇ ಬಾರಿಗೆ ಕಪ್ ಮನೆಗೆ ತೆಗೆದುಕೊಂಡು ಹೋಗಿದೆ. ಆದರೆ ಇಂತಿಪ್ಪ ಆಸ್ಟ್ರೇಲಿಯಾ ಕ್ರಿಕೆಟ್ ಟೀಂ ಈ ಬಾರಿ ಭರ್ಜರಿಯಾಗಿ ಸ್ವಾಗತ ಬಯಸಿತ್ತು. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಹಲವು ತಮ್ಮ ತವರಿಗೆ ಮರಳಿದ್ದು, ಅವರಿಗೆಲ್ಲ ತಮ್ಮ ದೇಶ ಆಸ್ಟ್ರೇಲಿಯಾದಲ್ಲಿ ಹೇಳೋರು ಕೇಳೋರು ಇಲ್ಲದಂತಾಗಿದೆ. ಈ ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ವೆರೈಟಿ ವೆರೈಟಿ ಕಮೆಂಟ್ ಬರ್ತಿದೆ.

ಹೇಳೋರಿಲ್ಲ.. ಕೇಳೋರಿಲ್ಲ..!
ವಿಶ್ವಕಪ್ 2023 ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಟೀಂ ಗೆದ್ದು ಬೀಗಿತ್ತು. ಇದೀಗ ತಂಡದ ಕೆಲವರು ಅವರವರ ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ. ಇದೇ ರೀತಿ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಸಿಡ್ನಿ ಏರ್ಪೋರ್ಟ್ಗೆ ಬಂದಿಳಿದಿದ್ದು, ಅಲ್ಲಿ ಕಮ್ಮಿನ್ಸ್ಗೆ ಸಿಕ್ಕ ಗೌರವ ಎಂಥದ್ದು ಅಂತ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಕ್ರಿಕೆಟ್ ವಿಶ್ವಕಪ್ ಟ್ರೋಫಿ ಗೆದ್ದು ಬೀಗಿದ್ದರೂ ಪ್ಯಾಟ್ ಕಮ್ಮಿನ್ಸ್ ಅವರನ್ನ ಹೇಳೋರು, ಕೇಳೋರೆ ಇಲ್ಲವೆಂಬ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು.
Really a lot to learn from countries like Australia. No one cares, probably most even don’t watch the game, have a job to do instead of hero worshiping. May be that’s why they win? So much less pressure. If India won WC, police bandobast lagana padta 😅
— Shruti Chaturvedi 🇮🇳 (@adhicutting) November 22, 2023
pic.twitter.com/cN8ILnrcQW
ಆಸ್ಟ್ರೇಲಿಯಾ ನೋಡಿ ಕಲಿಯಬೇಕಂತೆ!
ಈ ಬಗ್ಗೆ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ಬರೆದುಕೊಂಡಿದ್ದು, ವಿಡಿಯೋ ಶೇರ್ ಮಾಡಿ 'ಆಸ್ಟ್ರೇಲಿಯಾ ರೀತಿಯ ದೇಶಗಳಿಂದ ನಾವು ಕಲಿಯುವುದು ತುಂಬಾ ಇದೆ. ಸಾಕಷ್ಟು ಜನರು ಆಟವನ್ನೇ ನೋಡುವುದಿಲ್ಲ. ಆಟಗಾರರನ್ನು ಹೀರೋ ರೀತಿ ನೋಡುವ ಮತ್ತು ಆರಾಧಿಸುವ ಕೆಲಸ ಬಿಟ್ಟು ಅವರಿಗೆಲ್ಲಾ ಅವರದ್ದೇ ಕೆಲಸ ಇರುತ್ತದೆ. ಬಹುಶಃ ಈ ಕಾರಣಕ್ಕೆ ಅವರು ಗೆಲ್ಲುತ್ತಾರೆ ಅಂತಾ ಕಾಣುತ್ತದೆ, ಯಾಕಂದ್ರೆ ಅವರಿಗೆ ತುಂಬಾ ಕಡಿಮೆ ಒತ್ತಡ ಇರುತ್ತದೆ. ಭಾರತ ವಿಶ್ವಕಪ್ ಗೆದ್ದಿದ್ದರೆ ಪೊಲೀಸ್ ಭದ್ರತೆ ಬೇಕಾಗಿತ್ತು' ಎಂದಿದ್ದಾರೆ ಶೃತಿ ಚಥುರ್ವೇದಿ ಎಂಬ ಟ್ವಿಟ್ಟರ್ ಬಳಕೆದಾರರು.
ನಮ್ಮ ದೇಶದಲ್ಲಿ ಕಾಲಿಗೆ ಬೀಳುತ್ತಿದ್ದರು!
ಹಾಗೇ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ವಿಡಿಯೋ ಬಗ್ಗೆ ಬರೆದುಕೊಂಡಿದ್ದು, ವಿಡಿಯೋ ಶೇರ್ ಮಾಡಿ 'ಪ್ಯಾಟ್ ಕಮ್ಮಿನ್ಸ್ ವಿಶ್ವಕಪ್ ಗೆದ್ದು ಆಸ್ಟ್ರೇಲಿಯಾದಲ್ಲಿ ಲ್ಯಾಂಡ್ ಆಗಿದ್ದರೂ ಯಾರೂ ಅವರಿಗೆ ಶುಭಾಶಯ ಕೋರಲು ಬಂದಿಲ್ಲ. ಅಕಸ್ಮಾತ್ ನಾವು ಗೆದ್ದಿದ್ದರೆ ನಮ್ಮ ಜನ ತಮ್ಮ ವಿಮಾನವನ್ನೇ ಬಿಟ್ಟು ಆಟಗಾರರ ಕಾಲಿಗೆ ಬಿದ್ದು ಡಾನ್ಸ್ ಮಾಡ್ತಿದ್ರು' ಎಂದು ಹೇಳಿದ್ದಾರೆ ಸುಶಾಂತ್ ಮೆಹ್ತಾ ಎಂಬ ಟ್ಟಿಟ್ಟರ್ ಬಳಕೆದಾರರು. ಹೀಗೆ ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾಗೆ ಬಂದು ತಲುಪಿದ್ರೂ ಅವರಿಗೆ ಸಿಕ್ಕ ಗೌರವದ ಬಗ್ಗೆ ಚರ್ಚೆ ಶುರುವಾಗಿದೆ.
Ye Pat Cummins WC jeet ke Australia land kiya hai aur koi greet karne ke liye bhi nahi hai.
— Sushant Mehta (@SushantNMehta) November 22, 2023
Hum jeet jaate to log apni flight miss kar ke players ke pairon mein lot log ke dance kar rahe hote…pic.twitter.com/VzR1AAEePB
ಭಾರತ ಕ್ರಿಕೆಟ್ ಟೀಂ ಈ ಬಾರಿ ಟೂರ್ನಿಯಲ್ಲಿ ಶಕ್ತಿಶಾಲಿಯಾಗಿ ಮುನ್ನುಗ್ಗಿತ್ತು. ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಸೋಲದೆ ಅಬ್ಬರಿಸಿತ್ತು. ವಿಶ್ವಕಪ್ ಆರಂಭದಲ್ಲಿ ಮೊದಲ ಮ್ಯಾಚ್ನ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ ಟೀಂ ಇಂಡಿಯಾ ಆಸಿಸ್ ಪಡೆಗೆ ಹೀನಾಯ ಸೋಲು ಕರುಣಿಸಿ ಗಮನ ಸೆಳೆದಿತ್ತು. ಆದರೆ ಕಳೆದ ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆ ಸೋಲಿಗೆ ಸೇಡು ತೀರಿಸಿಕೊಂಡಿತ್ತು ಆಸ್ಟ್ರೇಲಿಯಾ. ಈ ಮೂಲಕ ಟೀಂ ಇಂಡಿಯಾ, 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಪಟ್ಟ ಪಡೆದಿತ್ತು. ಅಂದಿನಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಸಖತ್ ಸುದ್ದಿಯಲ್ಲಿದ್ದಾರೆ.
-
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications