ವೈರಲ್ ವಿಡಿಯೋ: ದೈತ್ಯ ಹೆಬ್ಬಾವಿನಿಂದ ಪಾರಾದ ಸಾಕು ನಾಯಿ
Recommended Video

ಶಿವಮೊಗ್ಗ, ಜುಲೈ.12: ಜಿಲ್ಲೆಯ ಸೊರಬ ತಾಲೂಕಿನ ಕಾನಳ್ಳಿ ಗ್ರಾಮದ ಜಯಶೀಲಗೌಡ ಎಂಬುವವರ ತೋಟದಲ್ಲಿ ಬೃಹದಾಕಾರ ಹೆಬ್ಬಾವೊಂದು ಸಾಕು ನಾಯಿಯನ್ನು ಹಿಡಿದು, ಸುತ್ತಿಕೊಂಡು ನುಂಗಲೆತ್ನಿಸಿತು. ಅಷ್ಟರಲ್ಲೇ ಓಡಿ ಬಂದ ಜಯಶೀಲಗೌಡ ನಾಯಿಯನ್ನು ಹೆಬ್ಬಾವಿನಿಂದ ಪಾರು ಮಾಡಿದರು.
ಇದೀಗ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ತಂದೆ ಜಯಶೀಲಗೌಡ ನಾಯಿಯನ್ನು ಹೆಬ್ಬಾವಿನಿಂದ ಬಚಾವ್ ಮಾಡಿದ್ದು ಹಾಗೂ ಮಗಳು ಮೊಬೈಲ್ ನಲ್ಲಿ ಧೈರ್ಯವಾಗಿ ಚಿತ್ರೀಕರಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಘಟನೆಯ ವಿವರ: ಜಯಶೀಲಗೌಡ ಅವರ ಸಾಕು ನಾಯಿ ಇದಕ್ಕಿದ್ದಂತೆ ಜೋರಾಗಿ ಕೂಗಲಾರಂಭಿಸಿತು. ನಾಯಿಯ ಧ್ವನಿ ಕೇಳಿ ಓಡಿ ಬಂದ ಜಯಶೀಲಗೌಡ ಅವರ ಕಣ್ಣಿಗೆ ಕಂಡದ್ದು ಬೃಹದಾಕರಾದ ಹೆಬ್ಬಾವು. ಜೊತೆಗೆ ಅದು ನಾಯಿಯನ್ನು ಸುತ್ತಿಕೊಳ್ಳುತ್ತಿರುವ ದೃಶ್ಯ.
ಇನ್ನೇನು ನಾಯಿ ಹೆಬ್ಬಾವಿನ ಪಾಲಾಗಬೇಕು ಎನ್ನುವಷ್ಟರಲ್ಲಿ ಜಯಶೀಲಗೌಡ ದೊಡ್ಡ ಕೋಲು ತೆಗೆದುಕೊಂಡು ಹೆಬ್ಬಾವಿಗೆ ಹೊಡೆಯಲಾರಂಭಿಸಿದರು. ಹೊಡೆದ ಮಾತ್ರಕ್ಕೆ ಹೆಬ್ಬಾವೇನೂ ನಾಯಿಯನ್ನು ಬಿಡಲಿಲ್ಲ. ಹೊಡೆಯುತ್ತಾ ಹೋದಂತೆ ಅರ್ಧ ನುಂಗಿದ್ದ ನಾಯಿಯನ್ನು ಬಾಯಿಯಿಂದ ಹೊರ ಹಾಕಲು ಪ್ರಯತ್ನಿಸುತ್ತಿತ್ತು. ಮತ್ತೇ ನುಂಗಲು ಎತ್ತಿಸುತ್ತಿತ್ತು.

ಆಗ ಜಯಶೀಲಗೌಡ ತಕ್ಷಣವೇ ಯೋಚಿಸಿ, ಹೆಬ್ಬಾವಿನ ಬಾಲವನ್ನು ಹಿಡಿದು ಜೋರಾಗಿ ಎಳೆದಿದ್ದಾರೆ. ಆಗ ನಾಯಿ ಹೊರಬಂದಿದೆ. ಇಷ್ಟು ದೃಶ್ಯವನ್ನು ಗೌಡರ ಮಗಳು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೋ ನೋಡಿದರೆ ಎಂಥವರಿಗೂ ಒಮ್ಮೆ ಮೈ ಜುಮ್ಮೆನ್ನುವುದು ಖಚಿತ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications