ಸಿಂಗದೂರು ದೇವಿ ನಮಗೆ ಸೇರಿದವಳು, ವಿಗ್ರಹ ನಮಗೆ ಕೊಡಿ: ಮತ್ತೊಂದು ಕುಟುಂಬದ ಬೇಡಿಕೆ
ಶಿವಮೊಗ್ಗ, ಅಕ್ಟೋಬರ್ 21: ಸಿಗಂದೂರಿನಲ್ಲಿ ಪ್ರಧಾನ ಅರ್ಚಕ ಮತ್ತು ಧರ್ಮದರ್ಶಿಗಳ ನಡುವಿನ ತಿಕ್ಕಾಟ ಹೆಚ್ಚಾದ ಸಂದರ್ಭದಲ್ಲಿಯೇ, ಸಿಗಂದೂರು ದೇವಿ ನಮ್ಮ ಕುಟುಂಬದ ಆರಾಧಕಳು ನಮಗೆ ಕೊಡಿ ಎಂಬ ಕೂಗು ಸಾಗರ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿದೆ.
ಇಂದು ಸಿಗಂದೂರು ಚೌಡೇಶ್ವರಿ ನಮ್ಮ ಕುಟುಂಬದ ಆರಾಧಕಳಾಗಿದ್ದು, ನಮಗೆ ಆ ದೇವಿಯ ವಿಗ್ರಹವನ್ನು ಕೊಡಿ ಎಂದು ನಾರಾಯಣ ಎಂಬುವವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಳಿಕೊಂಡಿದ್ದಾರೆ.
""ನಮ್ಮ ಅಜ್ಜಿ ಅಪ್ಪಾಣಿ ಚೌಡಮ್ಮನಿಂದ ಸ್ಥಾಪಿತಗೊಂಡ ಚೌಡೇಶ್ವರಿ ದೇವಿಯನ್ನು ಜಟ್ಟಾನಾಯ್ಕ ಎಂಬುವವರು ನೋಡಿಕೊಂಡು ಬರುತ್ತಿದ್ದರು. ಕಾಲಕ್ರಮೇಣ ಸೀಗೆ ಕಣಿವೆ ಎಂಬಲ್ಲಿದ್ದ ದೇವಸ್ಥಾನದಲ್ಲಿ ಹಣ ಬಂಗಾರ ಕಳ್ಳತನಗೊಂಡ ಆರೋಪದಡಿ ರಾಮಪ್ಪ ಮತ್ತು ಶೇಷನಾಯ್ಕರವರು ನಮ್ಮ ತಂದೆಯವರನ್ನು ಹೊರಹಾಕುವಲ್ಲಿ ಯಶಸ್ವಿಯಾದರು'' ಎಂದು ಹೇಳಿದರು.

ಈಗ ರಾಮಪ್ಪನವರು ದೇವಸ್ಥಾನವನ್ನು ಬೆಳೆಸಿದ್ದಾರೆ. ಇಲ್ಲಿಯವರೆಗೆ ದೇವಾಲಯದಲ್ಲಿ ದುಡಿದ ಹಣದಲ್ಲಿ ಒಂದು ಪೈಸೆಯನ್ನು ನಾನು ಕೇಳುವುದಿಲ್ಲ. ಆದರೆ ವಿಗ್ರಹವನ್ನು ಕೊಡಿ ನಾವು ಅದನ್ನು ಪೂಜಿಸಲಿದ್ದೇನೆ ಎಂದರು.
ಚೌಡೇಶ್ವರಿ ದೇವಿಗೆ ಅಪಪ್ರಚಾರವಾಗುತ್ತಿದ್ದು, ತಿಕ್ಕಾಟ ಆರಂಭವಾಗಿದೆ. ಹಾಗಾಗಿ ಆ ದೇವಿ ನಮಗೆ ಕೊಡಿ, ನಮ್ಮ ಅಪ್ಪಾಣಿ ಅಜ್ಜಿಯಿಂದ ಈ ದೇವಿ ಪ್ರತಿಷ್ಠಾಪನೆ ಆಗಿದೆ ಎಂದು ಹೇಳಿದರು.
ಬಳೆಕೊಪ್ಪದಲ್ಲಿ ಈಗಲೂ ಸಿಗಂದೂರು ದೇವಿಯ ವಿಗ್ರಹವನ್ನಿಟ್ಟು ಪೂಜಿಸಲಾಗುತ್ತಿದೆ. ಇದನ್ನು ನಾನು ಧರ್ಮಸ್ಥಳದಲ್ಲಿಯೂ ದೇವರ ಮುಂದೆ ಬಂದು ಹೇಳಲು ಸಿದ್ಧನಿದ್ದೇನೆ ಎಂದು ನಾರಾಯಣ ತಿಳಿಸಿದರು.
ಸಿಗಂದೂರು ಚೌಡೇಶ್ವರಿ ನಮ್ಮ ದೇವರು ಎಂದು ಶಿವಮೊಗ್ಗದವರೆಗೆ ಬಂದು ಹಕ್ಕು ಚಲಾಯಿಸುತ್ತಿರುವ ಕುಟುಂಬಗಳಲ್ಲಿ ನಾರಾಯಣ ಇವರು ನಾಲ್ಕನೆಯವರಾಗಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications