ಗಾಜನೂರು ಮೀನು ಹೊಟೇಲ್ಗಳ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ: 7 ಪ್ರಕರಣ ದಾಖಲು
ಶಿವಮೊಗ್ಗ, ನವೆಂಬರ್, 16: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಗಾಜನೂರಿನ ಮೀನು ಹೊಟೇಲ್ಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೀನು ಹೊಟೇಲ್, ಡಾಬಾ, ರೆಸ್ಟೋರೆಂಟ್ಗಳಲ್ಲಿ ಮದ್ಯ ಸರಬರಾಜು ಆರೋಪ ಕೇಳಿಬಂದಿತ್ತು. ಅಬಕಾರಿ ಇಲಾಖೆಯ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಕಲ್ಪಿಸಿರುವ ದೂರುಗಳು ಬಂದಿದ್ದವು. ಈ ಹಿನ್ನೆಲೆ ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನು ಹೊಟೇಲ್, ಡಾಬಾ, ರೆಸ್ಟೋರೆಂಟ್ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಗಾಜನೂರಿನ ಐದು ಹೊಟೇಲ್ಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಮದ್ಯ ಸರಬರಾಜು, ಮದ್ಯ ಸೇವನೆಗೆ ಅವಕಾಶ ಕಲ್ಪಿಸಿರುವುದು ಬೆಳಕಿಗೆ ಬಂದಿದೆ. ಹಾಗಾಗಿ 7 ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ದಯಾಮರಣ ಕೋರಿ ಅರ್ಜಿ ಸಲ್ಲಿಸಿದ ಸಾಗರದ ದಂಪತಿ: ಅಧಿಕಾರಿಗಳ ಸ್ಪಷ್ಟನೆ
ಅಕ್ರಮ
ಮದ್ಯ
ಮಾರಾಟ;
7
ಪ್ರಕರಣ
ದಾಖಲು
"7
ಪ್ರಕರಣ
ದಾಖಲು
ಮಾಡಲಾಗಿದ್ದು,
ತಪ್ಪಿತಸ್ಥರ
ವಿರುದ್ಧ
ಮುಂದಿನ
ಕ್ರಮ
ಕೈಗೊಳ್ಳಲಾಗುವುದು
ಎಂದು
ತಿಳಿಸಿದರು.
ಹೋಟೆಲ್,
ಡಾಬಾ
ಮಾಲೀಕರನ್ನು
ಕರೆಸಿ
ಸಭೆ
ಮಾಡಲಾಯಿತು.
ಇದು
ಹೀಗೆ
ಮುಂದುವರೆದರೆ
ಟ್ರೇಡ್
ಪರವಾನಗಿ
ರದ್ದಗೊಳಿಸಲು
ಸಂಬಂಧಿಸಿದ
ಇಲಾಖೆಗೆ
ತಿಳಿಸಲಾಗುತ್ತದೆ
ಅಂತಾ
ಎಚ್ಚರಿಕೆ
ಕೊಟ್ಟಿದ್ದೇವೆ"
ಎಂದು
ಅಬಕಾರಿ
ಇಲಾಖೆ
ಉಪ
ಆಯುಕ್ತ
ಕ್ಯಾ.ಅಜಿತ್
ಕುಮಾರ್
ತಿಳಿಸಿದ್ದಾರೆ.
ಹೋಟೆಲ್
ಮಾಲೀಕರ
ಸಭೆ
ನಡಸಿದ
ಅಬಕಾರಿ
ಇಲಾಖೆ
ಅಧಿಕಾರಿಗಳು
ಮದ್ಯ
ಸರಬರಾಜು,
ಮದ್ಯ
ಸೇವನೆಗೆ
ಅವಕಾಶ
ಕಲ್ಪಿಸದಂತೆ
ಸೂಚಿಸಿದ್ದಾರೆ.
ಇದೆ
ಪರಿಸ್ಥಿತಿ
ಮುಂದುವರೆದರೆ
ಪರವಾನಗಿ
ರದ್ದುಗೊಳಿಸುವುದಾಗಿಯೂ
ಎಚ್ಚರಿಕೆ
ನೀಡಿದ್ದಾರೆ.
ಅಬಕಾರಿ ಇಲಾಖೆ ಉಪ ಆಯುಕ್ತ ಕ್ಯಾ.ಅಜಿತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರಾದ ಶೀಲಾ ಧಾರಜ್ಕರ್, ಹಾಲಾನಾಯ್ಕ್, ಮಂಜುನಾಥ್ ಜೆ.ಬಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು ಎನ್ನಲಾಗಿದೆ.
ಇಂಡಿ
ತಾಲೂಕಿನಲ್ಲಿ
ಅಕ್ರಮ
ಮದ್ಯ
ಮಾರಾಟ
ಕಳೆದ
ತಿಂಗಳಷ್ಟೇ
ಇಂಡಿ
ತಾಲೂಕಿನಾದ್ಯಂತ
ಅಕ್ರಮ
ಮದ್ಯ
ಮಾರಾಟ
ನಡೆದಿದ್ದು,
ಅದನ್ನು
ಕೂಡಲೆ
ತಡೆಗಟ್ಟಬೇಕು.
ಇಲ್ಲವಾದಲ್ಲಿ
ಉಗ್ರಹೋರಾಟ
ಮಾಡಬೇಕಾಗುತ್ತದೆ
ಎಂದು
ಕಲಬುರಗಿ
ಜಿಲ್ಲಾ
ಪಂಚಾಯತ್
ಮಾಜಿ
ಅಧ್ಯಕ್ಷ
ಶಿವಯೋಗೆಪ್ಪ
ನೇದಲಗಿ
ನೇತೃತ್ವದಲ್ಲಿ
ಪ್ರತಿಭಟನೆ
ನಡೆಸಲಾಗಿತ್ತು.ಪಟ್ಟಣದ
ಅಬಕಾರಿ
ನಿರೀಕ್ಷಕರ
ಕಚೇರಿಗೆ
ನೂರಾರು
ಸಾರ್ವಜನಿಕರೊಂದಿಗೆ
ಭಾಗಿಯಾಗಿ
ಅಕ್ರಮ
ಮಧ್ಯ
ಮಾರಾಟ
ತಡೆಗೆ
ಅಬಕಾರಿ
ನಿರೀಕ್ಷಕ
ಎಂ.ಎಸ್.
ಪಡಸಲಗಿ
ಅವರಿಗೆ
ಮನವಿ
ಸಲ್ಲಿಸಲಾಗಿತ್ತು.
ಪ್ರತಿಭಟನಾಕಾರರನ್ನು
ಉದ್ದೇಶಿಸಿ
ನೇದಲಗಿಯವರು
ಮಾತನಾಡಿದ್ದು,
ತಾಲೂಕಿನಾದ್ಯಂತ
ಅಕ್ರಮ
ಮಧ್ಯ
ಮಾರಾಟ
ನಡೆಯುತ್ತಿದೆ.
ಆದರೆ
ಸಂಬಂಧಿಸಿದ
ಇಲಾಖೆ
ಕ್ರಮ
ಕೈಗೊಳ್ಳುತ್ತಿಲ್ಲ.
ಇದರಿಂದ
ಸಾವಿರಾರು
ಬಡ
ಕುಟುಂಬಗಳು
ಬೀದಿಗೆ
ಬೀಳುತ್ತಿವೆ
ಎಂದು
ಆಕ್ರೋಶ
ವ್ಯಕ್ತಪಡಿಸಿದ್ದರು.
ಇಂಡಿ ಸೇರಿದಂತೆ ನಾದ, ತಾಂಬಾ, ತಡವಲಗಾ, ಬಂಥನಾಳ, ಲಚ್ಯಾಣ, ಝಳಕಿ, ಬಳ್ಳೊಳ್ಳಿ, ಹೊರ್ತಿ, ಸಾಲೋಟಗಿ, ಸಂಗೋಗಿ, ಸಾತಲಗಾಂವ, ರೋಡಗಿ, ಖೇಡಗಿ, ಲಾಳಸಂಗಿ, ಸಾತಪುರ, ಇಂಗಳಗಿ ಸೇರಿಸಿದಂತೆ ಹಲವು ಗ್ರಾಮಗಳಲ್ಲಿ ಅಕ್ರಮ ಮಧ್ಯೆ ಮಾರಾಟ ನಡೆಯುತ್ತಿದೆ ಎಂದು ತಿಳಿಸಿದ್ದರು. ಮನವಿ ಸ್ವೀಕರಿಸಿದ ಅಬಕಾರಿ ಉಪನಿರೀಕ್ಷಕ ಎಂ.ಎಸ್. ಪಡಸಲಗಿ ಅಕ್ರಮ ಮಧ್ಯದ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಅಬಕಾರಿಗಳ ನಡೆ ವಿರುದ್ಧ ಅನುಮಾನ
ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಆದರೂ ಕೂಡ ಇದುವರೆಗೂ ಅಬಕಾರಿ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಅಕ್ರಮ ಮದ್ಯ ಮಾರಾಟ ಎಂದು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಹಾಗೂ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಭರವಸೆಯನ್ನೂ ನೀಡುತ್ತಾರೆ. ಆದರೆ ಕೊನೆಗೆ ದಿನ ಕಳೆದಂತೆ ಯಾವುದೇ ಕ್ರಮಗಳನ್ನು ಜರುಗಿಸದೇ ಸುಮ್ಮನಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.