ಓಟ ನಿಲ್ಲಿಸಿದ 'ಈಸೂರು ದಂಗೆ': ಅಂತಿಮ ದರ್ಶನಕ್ಕೆ ಜನಸಾಗರ, ರಾಷ್ಟ್ರಗೀತೆ ಹೇಳಿ ಅಂತ್ಯ ಸಂಸ್ಕಾರ
ಶಿವಮೊಗ್ಗ, ಮಾರ್ಚ್ 6: ಸೋಲಿಲ್ಲದ ಸರದಾರ ಎಂಬ ಖ್ಯಾತಿ ಹೊಂದಿದ್ದ ಈಸೂರು ದಂಗೆ ಹೋರಿ ಮೃತಪಟ್ಟಿದೆ. ವಯೋಸಹಜ ಕಾರಣದಿಂದ ಹೋರಿ ಕೊನೆಯುಸಿರೆಳೆದಿದೆ. ಈಸೂರು ಗ್ರಾಮದಲ್ಲಿ ಈಸೂರು ದಂಗೆಯ ಅಂತಿಮ ಯಾತ್ರೆ ನಡೆಯಿತು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ "ಈಸೂರು ದಂಗೆ' ಯ ಅಂತಿಮ ದರ್ಶನಕ್ಕೆ ಬೃಹತ್ ಸಂಖ್ಯೆಯಲ್ಲಿ ಜನರು ಬಂದಿದ್ದರು. ಟ್ರಾಕ್ಟರ್ ಮೇಲೆ ಹೋರಿಯನ್ನು ಇರಿಸಿ ಮೆರವಣಿಗೆ ನಡೆಸಲಾಯಿತು. ಗ್ರಾಮದಲ್ಲಿ ದೊಡ್ಡ ಸಂಖ್ಯೆಯ ಜನರು ಸೇರಿ, ಹೋರಿಗೆ ಅಂತಿಮ ನಮನ ಸಲ್ಲಿಸಿದರು. ಅಶೋಕ ಚಕ್ರವಿಲ್ಲದ ತ್ರಿವರ್ಣ ಹೊದಿಸಿ, ರಾಷ್ಟ್ರಗೀತೆ ಹಾಡಿ ಗ್ರಾಮದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ದಶಕಕ್ಕೂ ಹೆಚ್ಚು ಕಾಲದಿಂದ ಸ್ಪರ್ಧೆ
ಈಸೂರಿನ ಡಾ.ಪ್ರಶಾಂತ್ ಎಂಬುವರು ಈಸೂರು ದಂಗೆ ಹೋರಿಯನ್ನು ಸಾಕಿದ್ದರು. ಈ ಹೋರಿ ಶಿವಮೊಗ್ಗ, ಹಾವೇರಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯಲ್ಲಿ ಭಾರೀ ಹೆಸರು ಗಳಿಸಿತ್ತು. ಪಕ್ಕದ ತಮಿಳುನಾಡಿನಲ್ಲೂ ಈಸೂರು ದಂಗೆಗೆ ಅಭಿಮಾನಿಗಳಿದ್ದಾರೆ. ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಈಸೂರು ದಂಗೆ ಹೋರಿಯನ್ನು ನೋಡಲೆಂದೇ ಹೋರಿಹಬ್ಬಕ್ಕೆ ಅಭಿಮಾನಿಗಳು ಹರಿದುಬರುತ್ತಿದ್ದರು.

ಎಲ್ಲಿಯೇ ಹೋದರೂ ಬಹುಮಾನ ಫಿಕ್ಸ್
ಯಾವುದೇ ಹೋರಿ ಬೆದರಿಸುವ ಸ್ಪರ್ಧೆಗೆ ಹೋದರೂ ಈಸೂರು ದಂಗೆ ಹೋರಿಗೆ ಬಹುಮಾನ ಕಟ್ಟಿಟ್ಟ ಬುತ್ತಿ. ಎಷ್ಟೇ ಜನರು ಅಡ್ಡಗಟ್ಟಿದರೂ, ಯಾರ ಕೈಗೂ ಸಿಗದೆ ತಪ್ಪಿಸಿಕೊಳ್ಳುತ್ತಿತ್ತು. ನೂರಾರು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಹಿಸಿದ್ದರೂ, ಈತನಕ ಯಾರೊಬ್ಬರು ಈಸೂರು ದಂಗೆ ಹೋರಿಯನ್ನು ಹಿಡಿದು, ಕೊಬ್ಬರಿ ಹರಿಯಲು ಸಾದ್ಯವಾಗಿಲ್ಲ. ಈ ಹೋರಿಯು ಮಿಂಚಿನ ವೇಗದಲ್ಲಿ ಓಡುವ ಶಕ್ತಿ ಹೊಂದಿತ್ತು. 7 ಬೈಕ್, 15 ಫ್ರಿಡ್ಜ್ , 15 ಟಿವಿ, ಎತ್ತಿನಗಾಡಿ, ಬಂಗಾರದ ಬಳೆ, 10ಕ್ಕೂ ಹೆಚ್ಚು ಬಂಗಾರದ ಬಹುಮಾನಗಳು ಸೇರಿದಂತೆ ನೂರಾರು ಬಹುಮಾನಗಳನ್ನು ಈ ಹೋರಿ ಗಳಿಸಿದೆ.

ರಾಜ್ಯಾದ್ಯಂತ ಇದ್ದಾರೆ ಅಭಿಮಾನಿಗಳು
ಈಸೂರು ದಂಗೆ ಹೋರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಹೋರಿ ಬೆದರಿಸುವ ಸ್ಪರ್ಧೆಯ ಬಗ್ಗೆ ಆಸಕ್ತಿ ಹೊಂದಿರುವವರಿಗೆಲ್ಲ ಈ ಹೋರಿ ಪರಿಚಿತ. ಈ ಹೋರಿಗಾಗಿಯೇ ಸ್ಪರ್ಧೆಗೆ ಬರುವವರಿದ್ದರು. ಪ್ರತಿ ಸ್ಪರ್ಧೆಯಲ್ಲೂ ಈಸೂರು ದಂಗೆಯನ್ನು ಹಿಡಿದು ನಿಲ್ಲಿಸಬೇಕು ಎಂದು ಅಖಾಡಕ್ಕೆ ಇಳಿಯುವವರಿದ್ದರು.

ಟ್ಯಾಟೋ ಹಾಕಿಸಿಕೊಳ್ಳುತ್ತಿದ್ದರು
ಈಸೂರು ದಂಗೆ ಹೋರಿ ಅದೆಷ್ಟು ಫೇಮಸ್ ಅಂದರೆ, ಇದರೊಟ್ಟಿಗೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದರು. ಹೋರಿ ಬೆದರಿಸುವ ಸ್ಪರ್ಧೆಗೆ ಮೊದಲು ಮತ್ತು ಆನಂತರ ಈಸೂರು ದಂಗೆ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ನೂಕಾಟ, ತಳ್ಳಾಟವಾಗುತ್ತಿತ್ತು. ಇನ್ನು, ನೂರಾರು ಮಂದಿ ಈಸೂರು ದಂಗೆ ಹೋರಿಯ ಹಚ್ಚೆ ಅಥವಾ ಟ್ಯಾಟೋಗಳನ್ನು ಹಾಕಿಸಿಕೊಂಡು, ಅಭಿಮಾನ ಪ್ರದರ್ಶಿಸುತ್ತಿದ್ದರು.
ಇಷ್ಟೊಂದು ಖ್ಯಾತಿಯ ಪಡೆದಿದ್ದ ಈಸೂರು ದಂಗೆ ಹೋರಿ, ತನ್ನ ಮಿಂಚಿನ ಓಟ ನಿಲ್ಲಿಸಿದೆ. ಅದನ್ನು ಸಾಕಿದವರು, ಗ್ರಾಮಸ್ಥರು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಮಂದಿ ಪೋಸ್ಟ್ ಪ್ರಕಟಿಸಿ, ಈಸೂರು ದಂಗೆಗೆ ಅಂತಿಮ ನಮನ ಸಲ್ಲಿಸಿದ್ದಾರೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications