ಸಾತನೂರಲ್ಲಿ ಮಾರಮ್ಮನ ಕೊಂಡಕ್ಕೆ ಬಿದ್ದು ಆರ್ಚಕ ಗಂಭೀರ ಗಾಯ
ರಾಮನಗರ, ಮಾರ್ಜ್ 6: ಕೊಂಡ ಹಾಯುವ ವೇಳೆ ಕೊಂಡಕ್ಕೆ ಬಿದ್ದ ಆರ್ಚಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಗ್ರಾಮದಲ್ಲಿ ಮಾರ್ಚ್ 5ರಂದು ಮಾರಮ್ಮ ದೇವಿಯ ಕೊಂಡೋತ್ಸವದ ವೇಳೆ ಘಟನೆ ನಡೆದಿದೆ.
ಮಾರ್ಚ್ 5ರಂದು ಸಾತನೂರು ಗ್ರಾಮದಲ್ಲಿ ಮಾರಮ್ಮ ದೇವಿಯ ಕೊಂಡೋತ್ಸವ ಆಯೋಜಿಸಲಾಗಿತ್ತು. ಈ ಸಂದರ್ಭ ಆರ್ಚಕ ರವಿ ಕೊಂಡ ಹಾಯಲು ಹೋಗಿ ಆಯತಪ್ಪಿ ಕೊಂಡದಲ್ಲಿ ಬಿದಿದ್ದಾರೆ.

ಕೊಂಡದಲ್ಲಿ ಬಿದ್ದ ಪರಿಣಾಮ ಆರ್ಚಕ ರವಿ ಕೈ ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications