ರಾಮನಗರ ಉಪ ಚುನಾವಣೆ ಫಲಿತಾಂಶ : ಅನಿತಾ ಭರ್ಜರಿ ಗೆಲುವು
ರಾಮನಗರ, ನವೆಂಬರ್ 06 : ಜಮಖಂಡಿ ವಿಧಾನಸಭೆ, ಶಿವಮೊಗ್ಗ, ಮಂಡ್ಯ ಮತ್ತು ಬಳ್ಳಾರಿ ಲೋಕಸಭೆ ಚುನಾವಣೆಯಂತೆ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಆಸಕ್ತಿ ಉಳಿದಿಲ್ಲ. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ನಿರೀಕ್ಷೆಯಂತೆ ಜಯಭೇರಿ ಬಾರಿಸಿದ್ದಾರೆ.
ಅನಿತಾ ಅವರಿಗೆ ಪ್ರಮುಖ ಸ್ಪರ್ಧಿಯಾಗಿದ್ದ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಲ್ ಚಂದ್ರಶೇಖರ್ ಅವರು, ಮತದಾನ ಇನ್ನೇನು ಎರಡೇ ದಿನಗಳಿರುವಾಗ ಭಾರತೀಯ ಜನತಾ ಪಕ್ಷಕ್ಕೆ ಕೈಕೊಟ್ಟು ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ, ರಾಮನಗರದಲ್ಲಿ ಕಾಟಾಚಾರಕ್ಕೆ ಮತದಾನ ನಡೆದಿತ್ತು.
ಚಂದ್ರಶೇಖರ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಅಧಿಕೃತ ಮಾಹಿತಿ ನೀಡದಿದ್ದ ಕಾರಣ ಅವರ ಹೆಸರು ಮತಪೆಟ್ಟಿಗೆಯಲ್ಲಿ ಹಾಗೆಯೇ ಇತ್ತು. ಹೀಗಾಗಿ ಅವರಿಗೆ ಒಂದಿಷ್ಟು ಮತಗಳು ಬಂದಿವೆ.

ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಆಡಿರುವ ಆಟದಿಂದಾಗಿ ಮತ್ತು ಬಿಜೆಪಿ ನಾಯಕರ ಉದಾಸೀನದಿಂದಾಗಿ ಗೆಲ್ಲಬಹುದಾಗಿದ್ದ ಕ್ಷೇತ್ರವನ್ನು ಭಾರತೀಯ ಜನತಾ ಪಕ್ಷ ಕಳೆದುಕೊಂಡಂತಾಗಿದೆ. ಮತದಾರರು ಅನಿತಾ ಬಗ್ಗೆ ಆಕ್ರೋಶಗೊಂಡಿದ್ದರೂ ಅವರನ್ನೇ ಗೆಲ್ಲಿಸಬೇಕಾದ ಪರಿಸ್ಥಿತಿ ಬಂದಿರುವುದು ವಿಚಿತ್ರ ಮತ್ತು ವಿಡಂಬನಾತ್ಮಕ.












Click it and Unblock the Notifications