ರಾಮನಗರ: ತಾಯಿಯ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ ಎಂದ ನಿಖಿಲ್ ಕುಮಾರಸ್ವಾಮಿ
ರಾಮನಗರ, ಜನವರಿ, 09: ಕ್ಷೇತ್ರದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮಹಿಳಾ ಶಾಸಕಿಯಾಗಿ ಕ್ಷೇತ್ರಕ್ಕೆ ತಂದ ಅನುದಾನ ಇತಿಹಾಸವಾಗಿದೆ. ಹೀಗಾಗಿ ಅನಿತಾ ಕುಮಾರಸ್ವಾಮಿಯವರು ಮಾಡಿರುವ ಅಭಿವೃದ್ಧಿ ಕೆಲಸ ನನಗೆ ಶ್ರೀರಕ್ಷೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಕೆಂಪನಹಳ್ಳಿ ದೇವ ಮೂಲೆಯಾಗಿದ್ದು, ಕಳೆದ ಮೂವತ್ತು ವರ್ಷಗಳಿಂದ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದೇ ಚುನಾವಣೆ ಇರಲಿ ಇಲ್ಲಿಂದಲೇ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಇಲ್ಲಿಂದಲೇ ಕ್ಷೇತ್ರ ಪ್ರವಾಸ ಹಮ್ಮಿಕೊಂಡಿದ್ದೇನೆ ಎಂದರು.
Karnataka Assembly Election 2023: ರಾಮನಗರ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ನಿಖಿಲ್
ಕುಮಾರಸ್ವಾಮಿಯಿಂದ
ಬಿರುಸಿನ
ಪ್ರಚಾರ
ಕ್ಷೇತ್ರದ
ಕಸಬಾ
ಹೋಬಳಿಯ
ಮಾಯಗಾನಹಳ್ಳಿ
ವ್ಯಾಪ್ತಿಯಲ್ಲಿ
ಪ್ರತಿ
ಹಳ್ಳಿಗಳಿಗೂ
ಮನೆ-ಮನೆಗೂ
ಭೇಟಿ
ನೀಡುವ
ಕಾರ್ಯಕ್ರಮವನ್ನು
ಮಾಡುತ್ತಿದ್ದೇನೆ.
ಮುಂದೆಯೂ
ಕ್ಷೇತ್ರದ
ಎಲ್ಲಾ
ಹಳ್ಳಿಗಳಿಗೆ
ಭೇಟಿ
ನೀಡಿ
ಕಾರ್ಯಕರ್ತರ
ಆಶೀರ್ವಾದವನ್ನು
ಪಡೆಯುತ್ತೇನೆ.
ಮಾಜಿ
ಪ್ರಧಾನಿ
ಎಚ್.ಡಿ.
ದೇವೇಗೌಡರು,
ಮಾಜಿ
ಸಿಎಂ
ಎಚ್.ಡಿ.
ಕುಮಾರಸ್ವಾಮಿ,
ಶಾಸಕಿ
ಅನಿತಾ
ಕುಮಾರಸ್ವಾಮಿ
ಅವರನ್ನು
ಜನ
ಪ್ರೀತಿ,
ವಿಶ್ವಾಸದಿಂದ
ಕಾಣುತ್ತಾರೆ.
ಅವರ
ಪ್ರೀತಿ
ಗಳಿಸಲು
ನಾನು
ಶ್ರಮಿಸುತ್ತೇನೆ.
ಇದೀಗ
ಪಕ್ಷ
ನನಗೆ
ಜವಾಬ್ದಾರಿ
ನೀಡಿದ್ದು,
ಈ
ತಾಲೂಕಿನ
ಜನರ
ಪ್ರೀತಿ
ವಿಶ್ವಾಸವನ್ನು
ಉಳಿಸಿಕೊಂಡು
ಹೋಗುವ
ಕೆಲಸ
ಮಾಡುತ್ತೇನೆ.
ಪ್ರಾಮಾಣಿಕತೆಯಿಂದ
ಕ್ಷೇತ್ರದ
ಜನರ
ವಿಶ್ವಾಸಗಳಿಸುವೆ
ಎಂದರು.
ಹಳ್ಳಿ-ಗಳಿಗೆ
ಭೇಟಿ
ನೀಡುತ್ತಿರುವ
ನಿಖಿಲ್
ಗ್ರಾಮಗಳಿಗೆ
ಬೇಟಿ
ನೀಡಿದ
ಸಮಯದಲ್ಲಿ
ನನ್ನನ್ನು
ಯುವಕರು,
ಮಹಿಳೆಯರು
ಹಾಗೂ
ಹಿರಿಯರು
ಸೇರಿದಂತೆ
ಪ್ರತಿಯೊಬ್ಬರೂ
ಪ್ರೀತಿಯಿಂದ
ಕಾಣುತ್ತಾರೆ.
ನನ್ನ
ಮೇಲೆ
ಕ್ಷೇತ್ರದ
ಜನರಿಗೆ
ಸಾಕಷ್ಟು
ನಿರೀಕ್ಷೆ
ಇದೆ.
ಅವರ
ನಿರೀಕ್ಷೆಗೂ
ಮೀರಿ
ಕೆಲಸ
ಮಾಡುವ
ಶಕ್ತಿ
ಜನ
ನೀಡುತ್ತಾರೆ
ಎನ್ನುವ
ನಂಬಿಕೆ
ಇದೆ
ಎಂದರು.
ಕಳೆದ
ಮೂರು
ದಿನಗಳಿಂದಲೂ
ಹಳ್ಳಿ-ಗಳಿಗೆ
ಭೇಟಿ
ನೀಡುತ್ತಿರುವ
ನಿಖಿಲ್
ಕುಮಾರಸ್ವಾಮಿ,
ತಮ್ಮ
ತಾಯಿ
ಶಾಸಕಿ
ಅನಿತಾ
ಕುಮಾರಸ್ವಾಮಿ
ಅವರು
ಮಾಡಿರುವ
ಅಭಿವೃದ್ಧಿ
ಕಾರ್ಯ
ತಿಳಿಸುವ
ಜೊತೆಗೆ
ಕಾರ್ಯಕರ್ತರ
ಮನಬಲವನ್ನ
ಹೆಚ್ಚಿಸಲು
ಪ್ರಯತ್ನಿಸಿದ್ದಾರೆ.
ಹಾಗೆಯೇ ಮಾಯಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಪನಹಳ್ಳಿ, ಮಾಯಗಾನಹಳ್ಳಿ, ಧಾರಾಪುರ, ಕೇತೋಹಳ್ಳಿ, ಸಂಗಬಸವನ ದೊಡ್ಡಿ, ಮಾದಾಪುರ, ಬಸವನಪುರ, ರಾಂಪುರ ಸೇರಿದಂತೆ 15ಕ್ಕೂ ಹೆಚ್ಚು ಹಳ್ಳಿಗಳಿಗೆ ನಿಖಿಲ್ ಭೇಟಿ ನೀಡಿದರು. ಇನ್ನು ಪ್ರತಿ ಗ್ರಾಮದಲ್ಲೂ ಪಟಾಕಿ ಸಿಡಿಸಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಆರತಿ ಬೆಳಗುವ ಮೂಲಕ ಜನರು ತಮ್ಮ ಪ್ರೀತಿ, ವಿಶ್ವಾಸ ವ್ಯಕ್ತಪಡಿಸಿದರು.