ಸಿ.ಪಿ. ಯೋಗೇಶ್ವರ್ ಬಿಜೆಪಿ ತೊರೆಯುವ ವದಂತಿಗೆ ಸಚಿವ ಅಶ್ವಥ್ ನಾರಾಯಣ ಸ್ಪಷ್ಟನೆ
ರಾಮನಗರ, ನವೆಂಬರ್ 6: ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಬಿಜೆಪಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ, ಅವರು ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದರು.
ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ಸೇರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ ಎಂಬ ವದಂತಿಗಳಿಗೆ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಚನ್ನಪಟ್ಟಣದಲ್ಲಿ ಅಲ್ಲಗಳೆದರು.
ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ನಾಯಕರಿಗೆ ಇಷ್ಟೊಂದು ಮಾನ್ಯತೆ ನೀಡಿದ್ದಾರೆ. ಆದರೆ ಸಿ.ಪಿ. ಯೋಗೇಶ್ವರ್ ಬಿಜೆಪಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಯೋಗೇಶ್ವರ್ ನಮ್ಮ ಪಕ್ಷದಲ್ಲೇ ಇರುತ್ತಾರೆ, ನಮ್ಮ ನಾಯಕರಾಗಿ ಬಿಜೆಪಿ ಪಕ್ಷದಲ್ಲೇ ಸದೃಢವಾಗಿ ಬೆಳೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಪಕ್ಷದ ನಾಯಕರಿಗೆ ಪ್ರತಿಪಕ್ಷದ ನಾಯಕರು ಮನ್ನಣೆ ನೀಡುವಾಗ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯುತ್ತಾರೆ. ನಮ್ಮ ಪಕ್ಷದ ನಾಯಕರ ಶಕ್ತಿ ಮತ್ತು ಅವರ ಪ್ರತಿಭೆಗೆ ಮನ್ನಣೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಕರೆಯುತ್ತಿದ್ದಾರೆ. ಅವರು ಯಾವುದೇ ಕಾರಣಕ್ಕೂ ಅವರ ಜೊತೆ ಹೋಗುವುದಿಲ್ಲ ಎಂದರು.
ಇನ್ನು ಸಿ.ಪಿ. ಯೋಗೇಶ್ವರ್ ಹಲವು ಬಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸಚಿವ ಸ್ಥಾನ ಅವರಿಗೇನು ಹೊಸದಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರಿಗೆ ಯಾವೆಲ್ಲಾ ಗೌರವ, ಸ್ಥಾನಮಾನ ನೀಡಬೇಕು ಎಲ್ಲವೂ ಸಿಗುತ್ತದೆ ಎಂದು ಸಚಿವ ಅಶ್ವಥ್ ನಾರಾಯಣ್ ಭವಿಷ್ಯ ನುಡಿದರು.
ಪೆಟ್ರೋಲ್-
ಡೀಸೆಲ್
ಬೆಲೆ
ಇಳಿಕೆ
ಸಮರ್ಥನೆ
ಮಾಡಿಕೊಂಡ
ಸಚಿವ
ಅಶ್ವಥ್
ನಾರಾಯಣ್
ರಾಜ್ಯ
ಎರಡು
ಕ್ಷೇತ್ರಗಳ
ಉಪ
ಚುನಾವಣೆ
ಫಲಿತಾಂಶ
ನಂತರ
ಪೆಟ್ರೋಲ್-
ಡೀಸೆಲ್
ಬೆಲೆ
ಇಳಿಕೆ
ವಿಚಾರವಾಗಿ
ಸಚಿವ
ಅಶ್ವಥ್
ನಾರಾಯಣ್
ಪ್ರತಿಕ್ರಿಯೆ
ನೀಡಿ,
ಆಗ
ದರ
ಏರಿಕೆಯಾಗಿದ್ದು,
ಅಂತಾರಾಷ್ಟ್ರೀಯ
ಬೆಲೆಗಳು
ಏರಿಕೆಯಾಗುತ್ತಿತ್ತು.
ದರ
ಏರಿಕೆಯಾಗಿರುವುದನ್ನು
ಕಡಿವಾಣ
ಹಾಕಬೇಕು
ಎಂದು
ಪ್ರಧಾನಿ
ನರೇಂದ್ರ
ಮೋದಿ
ನಿರ್ಧರಿಸಿದ್ದಾರೆ
ಎಂದರು.
ಕೇಂದ್ರ ಸರ್ಕಾರದ ನಂತರ ರಾಜ್ಯ ಸರ್ಕಾರ ಕೂಡ ಇಂಧನ ಬೆಲೆ ಇಳಿಸುವ ನಿಲುವು ತೆಗೆದುಕೊಂಡು ದೊಡ್ಡದಾಗಿ ದರ ಕಡಿಮೆ ಮಾಡಲಾಗಿದೆ. ರಾಜ್ಯ ಸರ್ಕಾರ ಜನರಿಗೆ ನೆರವು ಕೊಟ್ಟಿರುವುದು ಅನುಕೂಲವಾಗಲಿದೆ. ಉಪ ಚುನಾವಣೆಗಳು ಬರುತ್ತಲೇ ಇರುತ್ತವೆ ಎಂದು ತಿಳಿಸಿದರು.
ಹಲವು ತಿಂಗಳುಗಳ ಹಿಂದೆಯೇ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಲು ತೀರ್ಮಾನ ಮಾಡಲಾಗಿತ್ತು. ರಾತ್ರೋರಾತ್ರಿ ನಿರ್ಧರಿಸಲು ಸಾಧ್ಯವಿಲ್ಲ. ಹಲವು ಬಾರಿ ಸಮಾಲೋಚನೆ ಮಾಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಿರ್ಧಾರಗಳನ್ನು ತಗೆದುಕೊಂಡಿವೆ. ಉಪ ಚುನಾವಣೆಯಿಂದ ದರ ಕಡಿಮೆಯಾಗಿದೆ ಎಂಬ ಮಾತು ಸತ್ಯಕ್ಕೆ ದೂರವಾದ ಮಾತು. ಜನರ ಅನುಕೂಲಕ್ಕಾಗಿ ಈ ನಿರ್ಧಾರ ಮಾಡಲಾಗಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಅಭಿಪ್ರಾಯಪಟ್ಟರು.