ಕ್ರೈಸ್ತ ಪ್ರತಿಮೆಯನ್ನು ನಾನು ಪ್ರಬಲವಾಗಿ ವಿರೋಧಿಸುತ್ತೇನೆ: ಕಾಳಿಕಾ ಸ್ವಾಮಿ
ರಾಮನಗರ, ಜನವರಿ 01: ಕನಕಪುರ ತಾಲ್ಲೂಕಿನ ಹಾರೋಬೆಲೆಯಲ್ಲಿ ಕ್ರೈಸ್ತ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಳಿಕಾ ಆಶ್ರಮದ ಶ್ರೀ ಋಷಿಕುಮಾರ ಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಕ್ರೈಸ್ತ ಪ್ರತಿಮೆ ನಿರ್ಮಾಣವಾದರೆ ವಿದೇಶದಿಂದ ಹಣ ಬರುತ್ತೆ, ಆಮೇಲೆ ಕರ್ನಾಟಕ ಜನರು ಈ ಪ್ರತಿಮೆಯಿಂದ ಗುರುತಿಸಿಕೊಳ್ಳಬೇಕಾಗುತ್ತೆ, ಅಲ್ಲದೇ ಇಲ್ಲಿನ ರೈತರು ನಾಶವಾಗುವುದು ಖಂಡಿತ ಎಂದು ವಿರೋಧಿಸಿದ್ದಾರೆ.
10 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತೇವೆ ಎಂದಿರೋದು ಸುಳ್ಳು, ಇದು ಕೇವಲ ಮತಬ್ಯಾಂಕ್ ಗೋಸ್ಕರ ಮಾಡಲಾಗುತ್ತಿದೆ. ಮಹಮ್ಮದಿಯರು ಹಾಗೂ ಕ್ರಿಶ್ಚಿಯನ್ನರ ಬಗ್ಗೆ ನನಗೆ ದ್ವೇಷವಿಲ್ಲ ಎಂದರು.

ಡಿ.ಕೆ.ಶಿವಕುಮಾರ ಬಗ್ಗೆ ನನಗೆ ವೈಯಕ್ತಿಕವಾಗಿ ದ್ವೇಷವಿಲ್ಲ ಆದರೆ ಅವರು ಒಕ್ಕಲಿಗನಾಗಿ ಕಪಾಲನಾದ ಕಾಲಬೈರವೇಶ್ವರನ ಬದಲಾಗಿ ಏಸುವಿನ ಪ್ರತಿಮೆ ನಿರ್ಮಾಣ ಮಾಡ್ತಿರೋದನ್ನ ನಾನು ವಿರೋಧಿಸುತ್ತೇನೆ ಎಂದು ಋಷಿ ಕುಮಾರ ಸ್ವಾಮಿ ಹೇಳಿದರು.
ಕ್ರೈಸ್ತನ ಪ್ರತಿಮೆಯನ್ನೇ ಏಕೆ ನಿಲ್ಲಿಸುತ್ತಿದ್ದಾರೆ ಗೊತ್ತಿಲ್ಲ, ಸೋನಿಯಾ ಗಾಂಧಿ ಮೆಚ್ಚಿಸುವುದಕ್ಕೋ ಅಥವಾ ಕ್ರಿಶ್ಚಿಯನ್ನರ ಮೆಚ್ಚಿಸುವುದಕ್ಕೋ ಗೊತ್ತಿಲ್ಲ. ಇಲ್ಲಿ ಪ್ರತಿಮೆಯಾದರೆ ಪ್ರಾಂತ್ಯ ಉಳಿಯುವುದಿಲ್ಲ, ಹಿಂದೂ ಧರ್ಮ ನಾಶವಾಗುತ್ತೆ ಎಂದರು.
ಇದು ಸಾಮಾನ್ಯ ಕೆಲಸವಲ್ಲ, ಇಡೀ ವಿಶ್ವವನ್ನೇ ತಿರುಗಿಸುವ ಕೆಲಸವಿದು. ಪ್ರಪಂಚದ ನಾನಾ ಕಡೆಗಳಿಂದ ಕ್ರೈಸ್ತರು ಬಂದು ಇಲ್ಲಿ ನೆಲೆಸುತ್ತಾರೆ. ಮತಾಂತರಗೊಳಿಸುವ ಹುನ್ನಾರವಿದು, ಇದರ ವಿರುದ್ದ ಹೋರಾಟಕ್ಕೆ ಯಾರು ಬರದೇ ಇದ್ರೂ ಪರವಾಗಿಲ್ಲ ನಾನು ಏಕಾಂಗಿಯಾಗಿ ಎದೆ ಕೊಟ್ಟು ಹೋರಾಡುತ್ತೇನೆ ಎಂದು ಕಾಳಿಕಾ ಮಠದ ಋಷಿಕುಮಾರ ಸ್ವಾಮಿ ಹೇಳಿದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications