ಜಾನಪದ ಕಾಶಿಯಲ್ಲಿ ಸರಳ ದಸರಾ ಆಚರಣೆ; ಬೊಂಬೆ ಪ್ರದರ್ಶನ
ರಾಮನಗರ, ಅಕ್ಟೋಬರ್ 26: ಜನಪದ ಕಲೆ, ಸಂಸ್ಕೃತಿ ಮತ್ತು ವಿಶಿಷ್ಟ ಆಚರಣೆಗಳನ್ನು ನಾಡಿಗೆ ಪರಿಚಯಿಸುವಲ್ಲಿ ಹೆಸರಾಗಿರುವ, ಜನಪದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಜಾನಪದ ಲೋಕದಲ್ಲಿ ನಾಡಹಬ್ಬ ದಸರಾ ಹಬ್ಬವನ್ನು ಬನ್ನಿ ಮುರಿಯುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆ ಮಾಡಲಾಯಿತು. ಆದರೆ ಜಾನಪದ ಲೋಕದಲ್ಲಿ ವರ್ಷವಿಡೀ ದಸರಾ ಬೊಂಬೆ ಪ್ರದರ್ಶನವು ನಡೆಯುತ್ತದೆ.
ಅಂಬಾರಿ ಹೊತ್ತು ಸಾಗಿದ ಅಭಿಮನ್ಯು: ಐತಿಹಾಸಿಕ ಜಂಬೂಸವಾರಿಗೆ ತೆರೆ
ಜಾನಪದ ಪರಿಷತ್ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ತಿಮ್ಮೇಗೌಡ, ಅಧಿಕಾರಿಗಳು ಸಂಪ್ರದಾಯದಂತೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬಾಳೆಕಂದು ಕತ್ತರಿಸುವ ಮೂಲಕ ಸರಳ ದಸರಾಗೆ ಚಾಲನೆ ನೀಡಿದರು. ನಾಡ ದೇವತೆ ಚಾಮುಂಡೇಶ್ವರಿ ತಾಯಿ ಹಾಗೂ ಆಯುಧಗಳಿಗೆ ಪೂಜೆ ಸಲ್ಲಿಸಿ, ಬನ್ನಿ ಮುರಿದು ಪ್ರವಾಸಿಗರು, ಜಾನಪದ ಲೋಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಭಾಶಯ ವಿನಿಮಯ ಮಾಡಿಕೊಂಡರು.
Recommended Video
ಜಾನಪದ ಲೋಕದ ಮುಖ್ಯಸ್ಥರಾದ ಟಿ. ತಿಮ್ಮೇಗೌಡ, ರುದ್ರಪ್ಪ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಸುತಾ ರಾಮೇಗೌಡ, ತಾ.ಅಧ್ಯಕ್ಷ ಗೋ.ರಾ.ಶ್ರೀನಿವಾಸ್ ಸೇರಿದಂತೆ ಜಾನಪದ ಲೋಕದ ಲೋಕದ ಸಿಬ್ಬಂದಿ ಮತ್ತು ಪ್ರವಾಸಿಗರು ಸರಳ ದಸರಾ ಆಚರಣೆಗೆ ಸಾಕ್ಷಿಯಾದರು.