Get Updates
Get notified of breaking news, exclusive insights, and must-see stories!

ಜಾನಪದ ಕಾಶಿಯಲ್ಲಿ ಸರಳ ದಸರಾ ಆಚರಣೆ; ಬೊಂಬೆ ಪ್ರದರ್ಶನ

ರಾಮನಗರ, ಅಕ್ಟೋಬರ್ 26: ಜನಪದ ಕಲೆ, ಸಂಸ್ಕೃತಿ ಮತ್ತು ವಿಶಿಷ್ಟ ಆಚರಣೆಗಳನ್ನು ನಾಡಿಗೆ ಪರಿಚಯಿಸುವಲ್ಲಿ ಹೆಸರಾಗಿರುವ, ಜನಪದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಜಾನಪದ ಲೋಕದಲ್ಲಿ ನಾಡಹಬ್ಬ ದಸರಾ ಹಬ್ಬವನ್ನು ಬನ್ನಿ ಮುರಿಯುವ ಮೂಲಕ ಸರಳವಾಗಿ ಆಚರಿಸಲಾಯಿತು.

ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆ ಮಾಡಲಾಯಿತು. ಆದರೆ ಜಾನಪದ ಲೋಕದಲ್ಲಿ ವರ್ಷವಿಡೀ ದಸರಾ ಬೊಂಬೆ ಪ್ರದರ್ಶನವು ನಡೆಯುತ್ತದೆ.

ಜಾನಪದ ಪರಿಷತ್ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ತಿಮ್ಮೇಗೌಡ, ಅಧಿಕಾರಿಗಳು ಸಂಪ್ರದಾಯದಂತೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬಾಳೆಕಂದು ಕತ್ತರಿಸುವ ಮೂಲಕ ಸರಳ ದಸರಾಗೆ ಚಾಲನೆ ನೀಡಿದರು. ನಾಡ ದೇವತೆ ಚಾಮುಂಡೇಶ್ವರಿ ತಾಯಿ ಹಾಗೂ ಆಯುಧಗಳಿಗೆ ಪೂಜೆ ಸಲ್ಲಿಸಿ, ಬನ್ನಿ ಮುರಿದು ಪ್ರವಾಸಿಗರು, ಜಾನಪದ ಲೋಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಭಾಶಯ ವಿನಿಮಯ ಮಾಡಿಕೊಂಡರು.

Ramanagar: Dasara Celebrated In Simple Way At Janapada Loka

ಜಾನಪದ ಲೋಕದ ಮುಖ್ಯಸ್ಥರಾದ ಟಿ. ತಿಮ್ಮೇಗೌಡ, ರುದ್ರಪ್ಪ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಸುತಾ ರಾಮೇಗೌಡ, ತಾ.ಅಧ್ಯಕ್ಷ ಗೋ.ರಾ.ಶ್ರೀನಿವಾಸ್ ಸೇರಿದಂತೆ ಜಾನಪದ ಲೋಕದ ಲೋಕದ ಸಿಬ್ಬಂದಿ ಮತ್ತು ಪ್ರವಾಸಿಗರು ಸರಳ ದಸರಾ ಆಚರಣೆಗೆ ಸಾಕ್ಷಿಯಾದರು.

Recommended Video

      Surya Kumar Yadav ರನ್ನು Australia ತಂಡಕ್ಕೆ ಈಗಲೂ ಆಯ್ಕೆ ಮಾಡಿಲ್ಲ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+