ಬಿಜೆಪಿಯವರೇ ಸರ್ಕಾರ ಬೀಳಿಸುತ್ತಾರೆ ಎಂದ ಡಿ.ಕೆ. ಸುರೇಶ್
ರಾಮನಗರ, ಮೇ 29: ಬಿಜೆಪಿ ಸರ್ಕಾರ ಮೂರು ವರ್ಷ ಪೂರೈಸುವುದಿಲ್ಲ ಎಂದಿದ್ದಾರೆ ಸಂಸದ ಡಿ.ಕೆ.ಸುರೇಶ್. ಮಾಗಡಿ ಪಟ್ಟಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, "ನಾವು ಯಾರೂ ಬಿಜೆಪಿ ಸರ್ಕಾರವನ್ನು ಬೀಳಿಸುವುದಿಲ್ಲ. ಅವರೇ ಅವರ ಸರ್ಕಾರವನ್ನು ಬೀಳಿಸುತ್ತಾರೆ" ಎಂದರು.
"ಬಿಜೆಪಿ ಸರ್ಕಾರ ಪತನಕ್ಕೆ ನಿನ್ನೆಯಿಂದಲೇ ಮುನ್ನುಡಿ ಪ್ರಾರಂಭವಾಗಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ಚುನಾವಣೆ ಬರುತ್ತದೆ. ನಾವು ರೆಡಿಯಾಗಬೇಕು" ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಸದ ಸುರೇಶ್ ಕರೆ ನೀಡಿದರು.
ಸರ್ಕಾರದ ಈ ಪ್ಯಾಕೇಜ್ ಗಳೆಲ್ಲ ಬೋಗಸ್; ಸಿದ್ದರಾಮಯ್ಯ
ಕೇಂದ್ರದ ಮೋದಿ ಸರಕಾರ 20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿ ರಾಜ್ಯದ ಜನರಿಗೆ 20 ಲಕ್ಷ ಕೋಟಿಯ ನಾಮ ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರ ಪ್ಯಾಕೇಜ್ ಬಗ್ಗೆ ಲೇವಡಿ ಮಾಡಿದರು.
Comments
English summary
"States BJP government wont complete 3 years. it will end soon" said DK Suresh in ramanagar