ಗುಜರಾತ್, ಹಿಮಾಚಲದಲ್ಲಿ ಕಪ್ಪುಹಣ ಹರಿಯುತ್ತಿದೆ : ದೇವೇಗೌಡ
ರಾಮನಗರ, ನವೆಂಬರ್ 08 : ಗುಜರಾತ್ ಚುನಾವಣೆಯಲ್ಲಿ ಕಪ್ಪುಹಣದ ಹೊಳೆಯೆ ಹರಿದಿದೆ ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಕಪ್ಪು ಹಣವನ್ನ ಖರ್ಚು ಮಾಡುತ್ತಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ರಾಮನಗರದ ಜಾನಪದ ಲೋಕದಲ್ಲಿ ನೂತನವಾಗಿ ಪ್ರಾರಂಭಗೊಂಡ ಸಿರಿಧಾನ್ಯ ಮಾರಾಟ ಮಳಿಗೆಯನ್ನ ಉದ್ಘಾಟನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನೋಟ್ ಬ್ಯಾನ್ನಿಂದ ಹಳೆ ನೋಟು ಬದಲಿಯಾಗಿ ಹೊಸ ನೋಟು ಬಂದಿವೆ ಅಷ್ಟೆ ಇದಕ್ಕೆ ಯಾವುದೇ ಮಹತ್ವ ನೀಡುವುದು ಬೇಡ ಎಂದರು.

ಗುಜರಾತ್ನಲ್ಲಿ ಮಾಧ್ಯಮದವರು ಬೇಕಾದ್ರೆ ಸರ್ವೆ ಮಾಡಿಕೊಂಡು ಬನ್ನಿ ಗುಜರಾತ್ ನ ರಸ್ತೆಗಳಲ್ಲಿ ಕಪ್ಪು ಹಣದ ಹೊಳೆ ಹರಿಯುತ್ತಿದೆ. ಇನ್ನು ಎರಡು ರಾಷ್ಟ್ರೀಯ ಪಕ್ಷಗಳು ಜಿದ್ದಿಗೆ ಬಿದ್ದಂತೆ ಹಣ ಸುರಿಯುತ್ತಿವೆ. ಇನ್ನು ಕಪ್ಪು ಹಣ ನಿಲ್ಲಿಸುವುದು ಎಲ್ಲಿಂದ. ನಾನು ಈ ಮಾತನ್ನ ದೇವರ ಪೂಜೆ ಮಾಡಿ ಮಾತನಾಡುತ್ತಿದ್ದೇನೆ. ಇದು ಸತ್ಯ ಎಂದು ಹೇಳಿದರು.
ಯಾವ ಸರಕಾರಗಳು ರೈತನಿಗೆ ಸಹಾಯ ಮಾಡಿಲ್ಲ ಎಂಬ ನೋವಿದೆ ನಮಗೆ. ಕುಮಾರಸ್ವಾಮಿ ಮನಸ್ಸಿನಲ್ಲಿ ರೈತರ ಬಗ್ಗೆ ಅಪಾರ ಕಾಳಜಿ ಇದೆ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಬೇಕೆಂಬ ಆಸೆ ಎಚ್.ಡಿ.ಕೆ ಮನಸ್ಸಿನಲ್ಲಿದೆ, ಅದಕ್ಕೆಂದೆ ಅವರು ಇಸ್ರೇಲ್ ಗೆ ಹೋಗಿ ಅಲ್ಲಿನ ತಂತ್ರಜ್ಞಾನವನ್ನ ಅರಿತು ಬಂದಿದ್ದಾರೆ,
ಚಾಮುಂಡೇಶ್ವರಿ ದೇವಿಗೆ ಪೊಜೆ ಸಲ್ಲಿಸಿ ಯಾತ್ರೆ ಪ್ರಾರಂಭಿಸಿದ್ದೇವೆ. ವಿಕಾಸ ಯಾತ್ರೆ ಅಂದ್ರೆ ಅಭಿವೃದ್ಧಿ ಯಾತ್ರೆ, ಈ ಯಾತ್ರೆ ಅಧ್ಬುತವಾಗಿ ಉದ್ಘಾಟನೆ ಗೊಂಡಿದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಕಾಸ ಯಾತ್ರೆ ನಡೆಯುತ್ತದೆ ಚುನಾವಣೆ ಮುಗಿಯುವವರೆಗೆ ವಿಕಾಸ ಯಾತ್ರೆ ಮುಂದುವರೆಯುತ್ತದೆ ಎಂದು ಎಚ್ಡಿಡಿ ತಿಳಿಸಿದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications