Raichur: ಬ್ಯಾಂಕ್ ಮ್ಯಾನೇಜರ್ನಿಂದಲೇ ಕೋಟಿ ಕೋಟಿ ಹಣ ವಂಚನೆ
ರಾಯಚೂರು ಮಾರ್ಚ್ 30: ಜನ ಬ್ಯಾಂಕ್ಗಳನ್ನು ನಂಬಿಕೊಂಡು ಹಣವನ್ನು ಇಡುತ್ತಾರೆ. ಆದರೆ ಇಲ್ಲೊಂದು ಬ್ಯಾಂಕ್ನಲ್ಲಿ ಮ್ಯಾನೇಜರ್ ಗ್ರಾಹಕರ ಹಣವನ್ನು ನುಂಗಿ ನೀರು ಕುಡಿದಿದ್ದಾನೆ. ಬೇಲಿಯೇ ಎದ್ದು ಹೊಲವನ್ನು ಮೇಯ್ದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಹೌದು ರಾಯಚೂರು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭಾರೀ ಗೋಲ್ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ಬ್ಯಾಂಕ್ ಮ್ಯಾನೇಜರ್ನಿಂದಲೇ ಕೋಟಿ ಕೋಟಿ ಹಣವನ್ನು ವಂಚನೆ ಮಾಡಲಾಗಿದೆ. ಗೋಲ್ಡ್ ಲೋನ್ ಹೆಸರಲ್ಲಿ ಸುಮಾರು 10.97 ಕೋಟಿ ವಂಚನೆ ಮಾಡಲಾಗಿದೆ. ಅಲ್ಲದೆ ಕಾರ್ ಲೋನ್ ಹೆಸರಲ್ಲೂ ಮ್ಯಾನೇಜರ್ ಹಣ ವಂಚನೆ ಮಾಡಿದ್ದಾನೆ.

ಮ್ಯಾನೇಜರ್ ಕೆ. ನರೇಂದ್ರ ರೆಡ್ಡಿ ಎಂಬಾತ ಅಸಲಿ ಚಿನ್ನ ಅಡವಿಟ್ಟು ಸಾಲ ಪಡೆದ ಗ್ರಾಹಕರಿಗೆ ನಕಲಿ ಚಿನ್ನ ಇಟ್ಟು ಮೋಸ ಮಾಡಿದ್ದಾನೆ. ಇದೀಗ ಗ್ರಾಹಕರು ಸೈಬರ್ ಪೊಲೀಸ್ ಠಾಣೆಗೆ ದೂರು ಕೊಟ್ಟು ನ್ಯಾಯ ನೀಡುವಂತೆ ಮನವಿ ಮಾಡಿದ್ದಾರೆ. ಬ್ಯಾಂಕ್ನಲ್ಲೂ ಸುರಕ್ಷತೆ ಇಲ್ಲ ಅಂತಾದರೆ ಜನ ಇನ್ನೆಲ್ಲಿ ಒಡವೆ ಬಂಗಾರ ದಾಖಲೆ ಇಡೋದು ಅಂತ ಚಿಂತೆಗೀಡಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಹಕರೊಬ್ಬರು, 'ನಮ್ಮದು ಈ ಬ್ಯಾಂಕ್ ಅಲ್ಲಿ ಅಕೌಂಟ್ ಇದ್ದು ಸುಮಾರು ಏಳು ಎಂಟು ವರ್ಷ ಆಗಿದೆ. ನಾವು ಲೋನ್ ಕಟ್ಟುತ್ತಾ ಬಂದಿದ್ದೇವೆ. ಕಾರು ಲೋನ್ ತೆಗೆದುಕೊಂಡು ಒಂದು ವರ್ಷ ಆಗಿದೆ. ಇತ್ತೀಚೆಗೆ ಪ್ರತೀ ತಿಂಗಳು ಹೆಚ್ಚುವರಿ ಹಣ ಕಡಿತಗೊಳಿಸಲಾಗಿದೆ. ಬ್ಯಾಂಕ್ಗೆ ಬಂದು ವಿಚಾರಿಸಿದಾಗ ಬ್ಯಾಂಕ್ ಸಿಬ್ಬಂದಿ ನೀವು ಸೈಬರ್ ಕ್ರೈಂಗೆ ಹೋಗಿ ದೂರು ನೀಡಿ ಎನ್ನುತ್ತಿದ್ದಾರೆ. ನಮ್ಮ ಕಡೆಯಿಂದ ಸಹಾಯ ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ. ನಮಗೆ ಬ್ಯಾಂಕ್ ನವರೇ ಮೋಸ ಮಾಡಿದ್ದಾರೆ' ಎಂದು ಅವರು ಸುದ್ದಿಗಾರರ ಮುಂದೆ ಬೇಸರ ಹಂಚಿಕೊಂಡಿದ್ದಾರೆ.
ಮತ್ತೊಬ್ಬರು ಗ್ರಾಹಕರು ಹೇಳುವಂತೆ 'ನಮಗೆ ಬ್ಯಾಂಕ್ ಬ್ಯಾನೇಜರ್ ದಿಢೀರ್ ಆಗಿ ಹತ್ತು ಕೋಟಿ ವಂಚನೆ ಮಾಡಿದ್ದಾರೆ. ತಕ್ಷಣ ನಾವು ಬ್ಯಾಂಕ್ಗೆ ಬಂದು ವಿಚಾರಿಸಿದಾಗ ನಮಗೆ ಗೊತ್ತಾಗಿದೆ. ನಾವು ಚಿನ್ನವನ್ನು ಬ್ಯಾಂಕ್ನಲ್ಲಿ ಇಟ್ಟು ಅದರ ಮೇಲೆ ಸಾಲ ಪಡೆದುಕೊಂಡಿದ್ದೇವೆ. ಈಗ ಆ ಗೋಲ್ಡ್ ನಕಲಿ ಎಂದು ಹೇಳುತ್ತಿದ್ದಾರೆ. ನಮ್ಮ ಅಸಲಿ ಚಿನ್ನ ತೆಗೆದುಕೊಂಡು ಅದರ ಮೇಲೆ ಸಾಲಾ ಮಾಡಿ, ನಮ್ಮ ಅಸಲಿ ಚಿನ್ನಕ್ಕೆ ನಕಲಿ ಎಂದು ಮಾಡಿದ್ದಾರೆ. ಮತ್ತೆ ಹೊಸ ಲೋನ್ಗಳನ್ನು ಮಾಡಿಕೊಂಡ ಬ್ಯಾಂಕ್ ಮ್ಯಾನೇಜರ್ ಹತ್ತು ಕೋಟಿ ಹಣವನ್ನು ವಂಚಿಸಿದ್ದಾನೆ' ಎಂದು ಆರೋಪಿಸಿದ್ದಾರೆ.

ಬ್ಯಾಂಕ್ ಮ್ಯಾನೇಜರ್ ಗ್ರಾಹಕರ ಚಿನ್ನವನ್ನು ನಕಲಿ ಮಾಡಿ, ತನ್ನ ಮೊಬೈಲ್ಗೆ ಮೆಸೇಜ್ ಬರುವಂತೆ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲ ಗ್ರಾಹಕರ ಖಾತೆಗಳ ದಾಖಲೆಗಳನ್ನು ನಕಲಿ ಮಾಡಿ, ಅವರ ಓಟಿಪಿಗಳನ್ನು ತಮ್ಮ ನಂಬರ್ಗೆ ಬರುವಂತೆ ಮಾಡಿರುವುದು ಗೊತ್ತಾಗಿದೆ. ಜೊತೆಗೆ ಗ್ರಾಹಕರ ಹಣ ತನ್ನ ಖಾತೆಗೆ ಜಮಾ ಆಗುವಂತೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕಾರ್ ಲೋನ್ ಕಂತು ಕಟ್ ಆದ ಕೂಡಲೇ ಗ್ರಾಹಕರೊಬ್ಬರು ಬ್ಯಾಂಕ್ಗೆ ಬಂದಾಗ ಆ ಹಣ ಐದು ಖಾತೆಗಳಿಗೆ ವರ್ಗಾವಣೆ ಆಗಿದೆ. ಆಗ ಗ್ರಾಹಕರಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಬ್ಯಾಂಕ್ನಲ್ಲಿ 28 ಖಾತೆಗಳಲ್ಲಿ ಗೋಲ್ಡ್ ಲೋನ್ ಪಡೆದ ಗ್ರಾಹಕರಿಗೂ ಈಗ ಅನುಮಾನ ಶುರುವಾಗಿದೆ. ಈಗಾಗಲೇ ತಾವಿಟ್ಟ ಅಸಲಿ ಚಿನ್ನ ನಕಲಿ ಆಗಿರುವ ಬಗ್ಗೆ ಸುದ್ದಿ ಗೋತ್ತಾಗುತ್ತಿದ್ದಂತೆ ಇನ್ನಷ್ಟು ಗ್ರಾಹಕರು ಬಂದು ಬ್ಯಾಂಕ್ನಲ್ಲಿ ವಿಚಾರಿಸಿದಾಗ ಅವರ ಚಿನ್ನ ಕೂಡ ನಕಲಿ ಆಗಿರುವುದು ಗೊತ್ತಾಗಿದೆ.
ಜೊತೆಗೆ 105 ನಕಲಿ ಖಾತೆಗಳನ್ನು ತಯಾರಿಸಿ ಅದರ ಮೂಲಕ ಗೋಲ್ಡ್ ಲೋನ್ ಪಡೆದು ಈಗಾಗಲೇ 10.97 ಕೋಟಿ ಹಣವನ್ನು ಬ್ಯಾಂಕ್ ಹಾಗೂ ಗ್ರಾಹಕರಿಗೆ ಈ ಮ್ಯಾನೇಜರ್ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನೂ ತನಿಖೆಯಿಂದ ಇನ್ನೂ ಎಷ್ಟು ಕೋಟಿ ಹಣ ವಂಚನೆ ಆಗಿದೆ ಎನ್ನುವುದು ಬಯಲಾಗಬೇಕಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications