ತೊಗರಿ ರಾಶಿಗೆ ಬೆಂಕಿ ಇಟ್ಟು ಪರಾರಿಯಾದ ಪುಡಾರಿಗಳು
ರಾಯಚೂರು, ಡಿಸೆಂಬರ್ 16 : ರಾಯಚೂರು ಜಿಲ್ಲೆಯ ಯಲಗಟ್ಟಾದಲ್ಲಿ ತೊಗರಿ ರಾಶಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿರುವ ಘಟನೆ ಶನಿವಾರ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯಲಗಟ್ಟಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗುಂಡಪ್ಪ ಕ್ಯಾತ ಎಂಬ ರೈತನಿಗೆ ಸೇರಿದ ತೊಗರಿ ರಾಶಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ.

20 ಕ್ಕೂ ಹೆಚ್ಚು ಚೀಲದ ರಾಶಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದಾರೆ. ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಯಾವ ವೇಳೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ, ಬೆಳಗ್ಗೆ ಎದ್ದು ನೋಡುವಾಗ ತೊಗರಿ ರಾಶಿಯೆಲ್ಲವೂ ನಾಶವಾಗಿತ್ತು.

ಇಡೀ ಬೆಳೆಯೇ ಸಂಪೂರ್ಣವಾಗಿ ನಾಶವಾದಂತಾಗಿದೆ, ಕುಟುಂಬವನ್ನು ಹೇಗೆ ನಿಭಾಯಿಸಬೇಕು ಎಂದು ರೈತ ಕಂಗಾಲಾಗಿದ್ದಾರೆ. ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.












Click it and Unblock the Notifications