ಆಪರೇಷನ್ ಕಮಲಕ್ಕೆ ಯತ್ನಿಸಿದ ಬಿಎಸ್ವೈ ವಿರುದ್ಧ ಶರಣಗೌಡ ದೂರು
Recommended Video
ರಾಯಚೂರು, ಫೆಬ್ರವರಿ 13: ಆಪರೇಷನ್ ಕಮಲದ ಆಡಿಯೋ ಪ್ರಕರಣದ ಮೂಲವ್ಯಕ್ತಿ ಜೆಡಿಎಸ್ ಶಾಸಕ ನಾಗನಗೌಡ ಅವರ ಮಗ ಶರಣಗೌಡ ಅವರು ಈಗ ತಮ್ಮನ್ನು ಆಪರೇಷನ್ ಕಮಲದ ಖೆಡ್ಡಕ್ಕೆ ಬೀಳಿಸಲು ಯತ್ನಿಸಿದವರ ವಿರುದ್ಧ ದೂರು ನೀಡಿದ್ದಾರೆ.
ರಾಯಚೂರು ಎಸ್ಪಿ ಕಚೇರಿಗೆ ತೆರಳಿದ್ದ ಅವರು, ಯಡಿಯೂರಪ್ಪ, ಶಿವನಗೌಡ ನಾಯಕ್, ಪ್ರೀತಂಗೌಡ ಅವರುಗಳು ನನಗೆ ಹಣದ ಆಮೀಷ ಒಡ್ಡಿದ್ದಾರೆ, ರಾಜಕೀಯ ಒತ್ತಡ ಹೇರಿದ್ದಾರೆ ಎಂದು ದೂರು ನೀಡಿದ್ದಾರೆ.
ಆಪರೇಷನ್ ಕಮಲ ನಿಲ್ಲಿಸಿ: ಬಿಜೆಪಿ ಹೈಕಮಾಂಡ್ನಿಂದ ಸೂಚನೆ
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರಣಗೌಡ ಅವರು, ಒಟ್ಟು ನಾಲ್ಕು ಜನರ ವಿರುದ್ಧ ದೂರು ನೀಡಿದ್ದೇನೆ, ಯಡಿಯೂರಪ್ಪ, ಶಿವನಗೌಡ ನಾಯಕ್, ಶಾಸಕ ಪ್ರೀತಂಗೌಡ ಮತ್ತು ಮರಮಕಲ್ ಎಂಬ ಮಾಜಿ ಪತ್ರಕರ್ತನ ವಿರುದ್ಧ ದೂರು ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ತಮ್ಮ ಮೇಲೆ ಒತ್ತಡ ಹೇರಿದ್ದಾಗಿ, ಹಣದ ಆಮಿಷ ಒಡ್ಡಿದ್ದಾಗಿ ಹಾಗೂ ಸವರಿಗೆ ಸಹಕರಿಸಲಿಲ್ಲವೆಂದರೆ ರಾಜಕೀಯವಾಗಿ ಮುಗಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ದಾಖಲಿಸಿರುವುದಾಗಿ ಅವರು ಹೇಳಿದ್ದಾರೆ.
ಆಡಿಯೋ ರಾಡಿ : ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದರೇ ಸಿದ್ದರಾಮಯ್ಯ?
ಅಧಿವೇಶನದಲ್ಲಿ ಆಡಿಯೋ ಕ್ಲಿಪ್ ಪ್ರಕರಣವನ್ನು ಯಾವ ರೀತಿಯ ತನಿಖೆಗೆ ಒಳಪಡಿಸಬೇಕು ಎಂದು ಇನ್ನೂ ಅಂತಿಮವಾಗಿಲ್ಲ ಆದರೆ, ಪ್ರಕರಣವನ್ನು ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿಸಿದ್ದಾರೆ. ಇದು ಕುಮಾರಸ್ವಾಮಿ ಅವರ ತಂತ್ರವೇ ಎನ್ನಲಾಗುತ್ತಿದೆ.
ಆಪರೇಷನ್ ಕಮಲ ಆಡಿಯೋ: ಸಂಭಾಷಣೆ ಹೈಲೈಟ್ಸ್
ಸರ್ಕಾರವು ಆ ಪ್ರಕರಣವನ್ನು ಎಸ್ಐಟಿಗೆ ನಿಡಲಿ ಅಥವಾ ನಿಡದಿರಲಿ, ಅಥವಾ ಸದನ ಸಮಿತಿಯನ್ನೇ ಮಾಡಲಿ. ರಾಯಚೂರು ಪೊಲೀಸರು ಈಗ ಆಡಿಯೋ ಪ್ರಕರಣದ ಬಗ್ಗೆ ತನಿಖೆ ನಡೆಸಲಿದ್ದಾರೆ.