ಹೆಂಡತಿಯನ್ನು ಥಳಿಸಿ ಬಳಿಕ 15ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟ
ಪುಣೆ, ಜೂನ್ 29: ಹೆಂತಿಯನ್ನು ಥಳಿಸಿ ಕೊನೆಗೆ 15ನೇ ಮಹಡಿಯಿಂದ ಹಾರಿ ವ್ಯಕ್ತಿಯೊಬ್ಬ ಪ್ರಾಣಬಿಟ್ಟಿರುವ ಘಟನೆ ಪುಣೆಯಲ್ಲಿ ನಡೆದಿದೆ.
65 ವರ್ಷದ ವ್ಯಕ್ತಿ ಸುಭಾಷ್ಚಂದ್ರ ಅಗರ್ವಾಲ್ ಮೃತರು, ಹಡಪ್ಸರದಲ್ಲಿರುವ ಮೊಹಮ್ಮದ್ವಾಡಿಯ ಹೌಸಿಂಗ್ ಸೊಸೈಟಿಯ 15ನೇ ಮಹಡಿಯಿಂದ ಮಾರಿ ಮೃತಪಟ್ಟಿದ್ದಾರೆ.
ಅಗರ್ವಾಲ್ ಒಬ್ಬ ಬಿಜಿನೆಸ್ ಮ್ಯಾನ್ ಆಗಿದ್ದು, ಪತ್ನಿ, ಮಗ, ಸೊಸೆ ಮತ್ತ ಮಗಳ ಜೊತೆ ನೆಲೆಸಿದ್ದರು. ಹೆಂಡತಿ ರೇಖಾ ಅಗರ್ವಾಲ್ ಜೊತೆ ಜಗಳ ಮಾಡಿಕೊಂಡು ಆಕೆಗೆ ಥಳಿಸಿ, ಬಳಿಕ ಕೋಪದಲ್ಲೇ ಮಹಡಿಯಿಂದ ಹಾರಿ ಮೃತಪಟ್ಟಿದ್ದಾರೆ.

ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮಗಳು ಕೆಲಸಕ್ಕೆ ಹೋಗಿದ್ದಳು, ಮಗ ಹಾಗೂ ಸೊಸೆ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರೇಖಾ ಅಗರ್ವಾಲ್ನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications