ವಿಡಿಯೋ: ಮತ ಹಾಕಲು ನಿರಾಕರಿಸಿದ ದಲಿತನಿಗೆ ಎಂಜಲು ನೆಕ್ಕಲು ಒತ್ತಾಯ
ಔರಂಗಾಬಾದ್, ಡಿಸೆಂಬರ್ 13: ಬಿಹಾರದ ಔರಂಗಾಬಾದ್ ಜಿಲ್ಲೆಯ ಪಂಚಾಯತ್ ಮುಖ್ಯಸ್ಥ ಹುದ್ದೆಯ ಚುನಾವಣೆಯಲ್ಲಿ ಅಭ್ಯರ್ಥಿಗೆ ಮತ ಹಾಕಲು ನಿರಾಕರಿಸಿದ್ದಕ್ಕೆ ದಲಿತನಿಗೆ ಎಂಜಲು ನೆಕ್ಕಲು ಒತ್ತಾಯಿಸಿದ ಅಮಾನವಿಯ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನಾವು ಮತದಾನದ ಹಕ್ಕನ್ನು ಹೊಂದಿದ್ದರೂ ಮತ್ತು ತಾರತಮ್ಯದಿಂದ ಮುಕ್ತರಾಗಿದ್ದರೂ ನಮ್ಮ ದೇಶದಾದ್ಯಂತ ಕೆಲವು ಘಟನೆಗಳು ಇಂಥಹ ಪ್ರಮೇಯವನ್ನು ಪ್ರಶ್ನಿಸುತ್ತವೆ. ವೈರಲ್ ಆಗಿರುವ ವಿಡಿಯೊದಲ್ಲಿ ಬಿಹಾರ ಮೂಲದ ಇಬ್ಬರು ದಲಿತ ಪುರುಷರನ್ನು ಥಳಿಸಿ ಅವಮಾನಕರ ಕೆಲಸಗಳನ್ನು ಮಾಡಲು ಕೇಳಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.
ಬಿಹಾರದ ಔರಂಗಾಬಾದ್ನ ಕುಟುಂಬ ಬ್ಲಾಕ್ನ ಇಬ್ಬರು ಯುವಕರು ಸಿಂಘ್ನಾ ಗ್ರಾಮದ ಮುಖ್ಯಸ್ಥರ ಚುನಾವಣೆಯಲ್ಲಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಲು ನಿರಾಕರಿಸಿದ್ದಕ್ಕೆ ನಿರ್ದಯವಾಗಿ ಕಿರುಕುಳ ನೀಡಲಾಗಿದೆ.
ಎನ್ಡಿಟಿವಿ ಪ್ರಕಾರ, ಚುನಾವಣೆಯಲ್ಲಿ ಪರಾಭವಗೊಂಡ ಬಿಹಾರದ ಔರಂಗಾಬಾದ್ ಜಿಲ್ಲೆಯ ಪಂಚಾಯತ್ ಮುಖ್ಯಸ್ಥ ಹುದ್ದೆಯ ಅಭ್ಯರ್ಥಿ ಬಲ್ವಂತ್ ಸಿಂಗ್ ಅವರು ಇಬ್ಬರು ದಲಿತ ಪುರುಷರ ಮೇಲೆ ಹಲ್ಲೆ ಮಾಡಿದ್ದಾನೆ. ವೀಡಿಯೊ ವೈರಲ್ ಆದ ನಂತರ ಅವರನ್ನು ಬಂಧಿಸಲಾಗಿದೆ. ಸಿಂಗ್ ಅವರಿಗೆ ಮತ ಹಾಕಿಲ್ಲ ಎಂದು ದಲಿತ ಸಮುದಾಯದ ಮೇಲೆ ಆರೋಪ ಹೊರಿಸಲಾಗಿದೆ.

ಅಭ್ಯರ್ಥಿಯು ತನ್ನ ಪರವಾಗಿ ಮತ ಹಾಕಲು ಇಬ್ಬರು ಮತದಾರರಿಗೆ ಲಂಚ ನೀಡಿದ್ದಾಗಿ ಮತ್ತು ಅವರು ಇನ್ನೂ ತನಗೆ ಮತ ಹಾಕಿಲ್ಲ ಎಂದು ವಿಡಿಯೋದಲ್ಲಿ ಉಲ್ಲೇಖಿಸುವುದನ್ನು ಕೇಳಬಹುದು. ಅವರಿಬ್ಬರ ಕಿವಿಗಳನ್ನು ಹಿಡಿದಿಟ್ಟುಕೊಂಡು ಕುಳಿತುಕೊಳ್ಳುವಂತೆ ಮಾಡುವ ಮೂಲಕ ಅವರು ದೈಹಿಕವಾಗಿಯೂ ಕಿರುಕುಳ ನೀಡುತ್ತಾರೆ. ನಂತರ ಅವರು ನೆಲದ ಮೇಲೆ ಬಿದ್ದ ಉಗುಳನ್ನು ನೆಕ್ಕಲು ಒತ್ತಾಯಿಸುವ ಮೂಲಕ ಅವರನ್ನು ಇನ್ನಷ್ಟು ಅವಮಾನಿಸಲಾಗುತ್ತದೆ.
ಸಿಂಗ್ ಅವರನ್ನು ಪೊಲೀಸ್ ಸಿಬ್ಬಂದಿ ಹಿಡಿಯಲು ಮುಂದಾದಾಗ ಸಿಂಗ್ ಬೇರೆಯದ್ದೇ ಕಥೆ ಹೇಳಿದ್ದಾರೆ. ಇಬ್ಬರು ವ್ಯಕ್ತಿಗಳು ಕುಡಿದು ಗದ್ದಲ ಸೃಷ್ಟಿಸುತ್ತಿದ್ದರು. ಅವರ ಕಠಿಣ ನಡವಳಿಕೆಯು ಕಿರಿಕಿರಿಯುಂಟು ಮಾಡಿತು. ಹೀಗಾಗಿ ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಸಿಂಗ್ ಅವರು ಹೇಳಿಕೊಂಡಿದ್ದಾರೆ. ಆದಾಗ್ಯೂ, ವೈರಲ್ ವಿಡಿಯೊ ಸ್ಪಷ್ಟವಾಗಿ ಸಿಂಗ್ ಅವರು ಮತ ಚಲಾಯಿಸಲು ಹಣ ನೀಡಿದ ಬಗ್ಗೆ ಮಾತನಾಡುತ್ತಿರುವುದು ಸ್ಪಷ್ಟವಾಗಿದೆ.
ಘಟನೆಯ ವಿಡಿಯೋ ದೃಶ್ಯಾವಳಿಗಳು ವೈರಲ್ ಆದ ನಂತರ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧೀಕ್ಷಕರು ಈ ವಿಷಯವನ್ನು ಅರಿತು ಸಿಂಗ್ ಅವರನ್ನು ಬಂಧಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಂತೇಶ್ ಕುಮಾರ್ ಮಿಶ್ರಾ ಅವರ ನಿರ್ದೇಶನದ ಮೇರೆಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಿಶ್ರಾ ಎನ್ಡಿಟಿವಿಗೆ ತಿಳಿಸಿದ್ದಾರೆ.
ಇಬ್ಬರು ಯುವಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮುಖಂಡ ಗ್ರಾಮಾಂತರ ಚುನಾವಣೆಗೆ ಅಭ್ಯರ್ಥಿಯಾಗಿದ್ದರು. ಅವರ ವಿರುದ್ಧ ಶೀಘ್ರವೇ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಎಸ್ಪಿ ಕಾಂತೇಶ್ ಮಿಶ್ರಾ ತಿಳಿಸಿದ್ದಾರೆ.
#Casteism A Dalit man made to do sit-ups, lick spit. A candidate for the post of Panchayat head, Balwant Singh, has been accused of blaming the Dalit community for his loss & beating up two people from the community as they allegedly did not vote for him.. pic.twitter.com/6102KQzeJZ
— The Dalit Voice (@ambedkariteIND) December 13, 2021











Click it and Unblock the Notifications