ವಲಸೆ ಕಾರ್ಮಿಕರ ಅಭಿಮತ ತೇಜಸ್ವಿ ಯಾದವ್ ಪರ
ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 7 ರಂದು ಮೂರನೇ ಹಾಗೂ ಅಂತಿಮ ಹಂತದ ಮತದಾನ ಮುಕ್ತಾಯವಾಗಿದೆ. ನವೆಂಬರ್ 10ರಂದು ಅಂತಿಮ ಫಲಿತಾಂಶ ಹೊರಬರಲಿದೆ. ವಲಸೆ ಕಾರ್ಮಿಕರ ಅಭಿಮತ ಯಾರ ಪರ ಇದೆ ಎಂಬುದರ ಬಗ್ಗೆ ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ ಇಲ್ಲಿದೆ...
Recommended Video
243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಹಾಗೂ ಮತದಾನ ಪೂರ್ವ ವರದಿಯನ್ನು ಲೋಕನೀತಿ ಸಿಎಸ್ ಡಿಎಸ್ ಜೊತೆ 243 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾಗಿತ್ತು.
ಕೊರೊನಾವೈರಸ್ ಸಂಕಷ್ಟದಲ್ಲಿ ಬಳಲಿದ ವಲಸೆ ಕಾರ್ಮಿಕರು ತಮ್ಮ ನೋವನ್ನು ಆಲಿಸುವುದರಲ್ಲಿ ಆಡಳಿತಾರೂಢ ಬಿಜೆಪಿ-ಜೆಡಿಯು ಸರ್ಕಾರ ವಿಫಲವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ನಿರುದ್ಯೋಗ ಚುನಾವಣಾ ಮುಖ್ಯ ವಿಷ್ಯ ಎಂದು 20% ಮಂದಿ ಹೇಳಿದರೆ, ಎಕ್ಸಿಟ್ ಪೋಲ್ ನಲ್ಲಿ ಈ ಪ್ರಮಾಣ 30%ಕ್ಕೇರಿದೆ. ವಲಸೆ ಕಾರ್ಮಿಕರಲ್ಲಿ ಬಹುತೇಕ 18ರಿಂದ 36 ವರ್ಷ ವಯೋಮಿತಿಯವರಾಗಿದ್ದು, ಅವರ ಆಯ್ಕೆ ಕಾಂಗ್ರೆಸ್ -ಆರ್ ಜೆಡಿಯ ಮಹಾಘಟಬಂಧನ್ ಪರ ಇದೆ.

ಬಿಹಾರದ ಸಿಎಂ ಯಾರಾಗಬೇಕು?:
ತೇಜಸ್ವಿ ಯಾದವ್: 44%, 18 -35 ವರ್ಷದವರ ಆಯ್ಕೆ 47%
ನಿತೀಶ್ ಕುಮಾರ್: 35% 18 -35 ವರ್ಷದವರ ಆಯ್ಕೆ 36%
ಚಿರಾಗ್ ಪಾಸ್ವಾನ್: 7%
ಉಪೇಂದ್ರ ಕುಶ್ವಾಹ: 4%
ಕೇಂದ್ರ ಸರ್ಕಾರದ ನೆರವಿನಿಂದ ಶ್ರಮಿಕ್ ರೈಲುಗಳನ್ನು ಓಡಿಸಲಾಯಿತು. ಆದರೆ, ಲಕ್ಷಾಂತರ ವಲಸೆ ಕಾರ್ಮಿಕರು ಸಾವಿರಾರು ಕಿ.ಮೀ ದೂರ ನಡೆದುಕೊಂಡು ಸಾಗಬೇಕಾದ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇತರೆ ರಾಜ್ಯಗಳಲ್ಲಿದ್ದ ಬಿಹಾರ ಮೂಲದವರನ್ನು ವಾಪಸ್ ಕರೆಸಿಕೊಳ್ಳುವಲ್ಲಿ ನಿತೀಶ್ ಸರ್ಕಾರ ವಿಳಂಬ ಮಾಡಿತು.

ಆಡಳಿತ ವೈಫಲ್ಯ ಎಂದ ಸಮೀಕ್ಷೆ
ಆಡಳಿತ ವೈಫಲ್ಯದ ಕಾರಣ ವಲಸೆ ಕಾರ್ಮಿಕರಿಗೆ ಸೂಕ್ತ ನೆಲೆ, ಬೆಲೆ ಸಿಗಲಿಲ್ಲ. ಮುಖ್ಯವಾಗಿ ಕೆಲಸ ಇಲ್ಲದಂಥ ಪರಿಸ್ಥಿತಿ, ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಬದುಕನ್ನು ಇನ್ನಷ್ಟು ದುರ್ಬರಗೊಳಿಸಿತು.
2018ರಲ್ಲಿ ನಿರುದ್ಯೋಗ ಪ್ರಮಾಣ 7.2%ಇದ್ದದ್ದು 2019ರಲ್ಲಿ 10.2%ಕ್ಕೇರಿಕೆಯಾಯಿತು. 30 ಲಕ್ಷ ವಲಸಿಗರ ಸಮಸ್ಯೆ ರಾಜ್ಯ ಸರ್ಕಾರದ ವ್ಯಾಪ್ತಿ ಮೀರಿದ ಸಮಸ್ಯೆಯಾಗಿತ್ತು ಎಂದು ಭಾರತದ ಆರ್ಥಿಕ ಪರಿಶೀಲನಾ ಕೇಂದ್ರ ಸಿಎಂಐಇ ವರದಿ ಮಾಡಿದೆ.












Click it and Unblock the Notifications