Get Updates
Get notified of breaking news, exclusive insights, and must-see stories!

'ಕಾಂಗ್ರೆಸ್ ಪ್ರೀತಿ, ವಾತ್ಸಲ್ಯ ಹರಡುತ್ತದೆ' ಗೋವಾ ಪ್ರಚಾರದಲ್ಲಿ ರಾಹುಲ್ ಗಾಂಧಿ

ಪಣಜಿ, ಅಕ್ಟೋಬರ್ 30: ಮುಂದಿನ ವರ್ಷ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು ಒಂದು ದಿನದ ಪ್ರವಾಸಕ್ಕಾಗಿ ಕರಾವಳಿ ರಾಜ್ಯದಲ್ಲಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೋವಾಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಮೀನುಗಾರರೊಂದಿಗೆ ಮಾತನಾಡಿದ ಅವರು ಹಲವಾರು ಭರವಸೆ ,ನೀಡಿದ್ದಾರೆ.

ಅವರು ಇಂದು ಬೆಳಿಗ್ಗೆ ರಾಜ್ಯದ ಕರಾವಳಿ ಗ್ರಾಮವಾದ ವೆಲ್ಸಾವೊದಲ್ಲಿ ಮೀನುಗಾರ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದರು. ಗೋವಾಕ್ಕಾಗಿ ಪಕ್ಷದ ಕಾರ್ಯತಂತ್ರದ ಕುರಿತು ಮಾತನಾಡಿದ ಅವರು ಗೋವಾದ ಜನರ ಧ್ವನಿಯಾಗಲು ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುವ ಭರವಸೆ ನೀಡಿದ್ದಾರೆ. ಪ್ರಚಾರದುದ್ದಕ್ಕೂ ಜನರನ್ನು ಆಲಿಸುವ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವ ಸಂದೇಶವನ್ನು ಪಕ್ಷವು ಒತ್ತಿಹೇಳುತ್ತಿದೆ. ರಾಜ್ಯದ ವಿವಿಧ ಭಾಗೀದಾರರೊಂದಿಗೆ ಮಾತುಕತೆ ನಡೆಸಿ ಮುಕ್ತ ಮತ್ತು ಪಾರದರ್ಶಕವಾಗಿ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಲಿದ್ದು, ಪರಿಸರ ಸಂರಕ್ಷಣೆಯತ್ತ ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.

ಈ ವೇಳೆ ರಾಹುಲ್ ಗಾಂಧಿ ಅವರು ಮೂಲಸೌಕರ್ಯ ಮತ್ತು ರಾಜ್ಯ ಕಲ್ಲಿದ್ದಲು ಹಬ್ ಆಗುವ ಸಮಸ್ಯೆಗಳ ಬಗ್ಗೆ ಮಾತನಾಡಿದರು. "ಗೋವಾ ಕಲ್ಲಿದ್ದಲು ಹಬ್ ಆಗುವುದು ನಮಗೆ ಇಷ್ಟವಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳುತ್ತೇವೆ ಮತ್ತು ಅದು ಇಲ್ಲಿ ನಡೆಯುತ್ತಿರುವ ಪರಿಸರ ವಿನಾಶಕ್ಕೆ ಕಾರಣವಾಗುತ್ತದೆ" ಎಂದು ಅವರು ಹೇಳಿದರು.

Congress spreads love and affection, says Rahul Gandhi in Goa campaign

ಗೋವಾ ರೈಲ್ವೇ ಟ್ರ್ಯಾಕ್ ಮತ್ತು ಹೆದ್ದಾರಿಯ ವಿಸ್ತರಣೆ ಮತ್ತು ಹೊಸ ವಿದ್ಯುತ್ ಮಾರ್ಗ ಎಂಬ ಮೂರು ಮೂಲಸೌಕರ್ಯ ಯೋಜನೆಗಳ ಮೇಲೆ ನಿಂತಿದೆ. ರಾಜ್ಯದ ಕೆಲ ನಿವಾಸಿಗಳು ಪ್ರಾಚೀನ ಕಾಡುಗಳಿಗೆ ಹಾನಿ ಮಾಡುತ್ತಿದ್ದಾರೆ. ಕಲ್ಲಿದ್ದಲು ಧೂಳಿನಿಂದ ಸುಂದರವಾದ ಪಟ್ಟಣಗಳನ್ನು ಕಲುಷಿತಗೊಳಿಸುತ್ತದೆ ಎಂದು ನಂಬುತ್ತಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊಲ್ಲೆಮ್ ರಾಷ್ಟ್ರೀಯ ಉದ್ಯಾನವನ ಮತ್ತು ಭಗವಾನ್ ಮಹಾವೀರ ಅಭಯಾರಣ್ಯ, ಜೈವಿಕ ವೈವಿಧ್ಯತೆಯ ಹಾಟ್‌ಸ್ಪಾಟ್ ಮೂಲಕ ಹಾದು ಹೋಗುವ ಯೋಜನೆಗಳ ವಿರುದ್ಧ ರಾಜ್ಯವು ವ್ಯಾಪಕ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. "ಮೊಲ್ಲೆಮ್ ಉಳಿಸಿ" ಮತ್ತು "ಕಲ್ಲಿದ್ದಲು ಬೇಡ" ಅಭಿಯಾನಗಳು ಸ್ಥಳೀಯರೊಂದಿಗೆ ಪ್ರತಿಧ್ವನಿಸಿದೆ ಮತ್ತು ಗ್ರ್ಯಾಂಡ್ ಓಲ್ಡ್ ಪಕ್ಷವು ರಾಜ್ಯದ ದುರ್ಬಲ ಸ್ಥಳೀಯರ ಹಿತಾಸಕ್ತಿಗಳನ್ನು ರಕ್ಷಿಸುವ ಭರವಸೆಯನ್ನು ನೀಡುತ್ತಿದೆ.

"ನನಗೆ ನನ್ನ ವಿಶ್ವಾಸಾರ್ಹತೆ ಮುಖ್ಯವಾಗಿದೆ. ಇತರ ಹಲವು ನಾಯಕರಂತಲ್ಲದೆ, ನಾನು ಇಲ್ಲಿ ಏನನ್ನಾದರೂ ಹೇಳಿದಾಗ, ಅದು ಆಗುವುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ. ನಾನು ಇಲ್ಲಿಗೆ ಬಂದರೆ ಕಲ್ಲಿದ್ದಲು ಹಬ್ ಅನ್ನು ಅನುಮತಿಸುವುದಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ ಸುಳ್ಳು ಹೇಳಿದರೆ ಮುಂದೆ ನಾನು ಇಲ್ಲಿಗೆ ಬಂದಾಗ ನನಗೆ ಯಾವುದೇ ವಿಶ್ವಾಸಾರ್ಹತೆ ಇರುವುದಿಲ್ಲ"ಎಂದು ಕಾಂಗ್ರೆಸ್ ನಾಯಕ ಹೇಳುವ ಮೂಲಕ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.

ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಇರಬೇಕು ಎಂದು ಗಾಂಧಿ ಒತ್ತಿ ಹೇಳಿದರು. "ದೊಡ್ಡ ಮೀನುಗಾರರು ಮತ್ತು ಸಣ್ಣ ಮೀನುಗಾರರ ನಡುವೆ ಸಮತೋಲನ ಇರಬೇಕು, ದೊಡ್ಡ ಹೋಟೆಲ್‌ಗಳು ಮತ್ತು ಹೋಂಸ್ಟೇಗಳ ನಡುವೆ ಸಮತೋಲನ ಇರಬೇಕು. ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಸಮತೋಲನವು ಗೋವಾದ ಜನರಿಗೆ ಮತ್ತು ನಿರ್ದಿಷ್ಟವಾಗಿ ಬಡವರ ಪರವಾಗಿರಬೇಕು. ಒಂದೆರಡು ಉದ್ಯಮಿಗಳಿಗೆ ಮಾತ್ರ' ಅಭಿವೃದ್ಧಿ ಆಗಬಾರದು, ಏಕೆಂದರೆ ಅವರು ವ್ಯವಸ್ಥೆಯ ಮೇಲೆ ಪ್ರಭಾವ ಬೀರಲು ದೊಡ್ಡ ಪ್ರಮಾಣದ ಹಣವನ್ನು ಹೊಂದಿದ್ದಾರೆ" ಎಂದು ಅವರು ಹೇಳಿದರು.

ಜೊತೆಗೆ ಬೈಕ್‌ನಲ್ಲಿ ಸುಮಾರು ಐದು ಕಿಲೋಮೀಟರ್ ವರೆಗೂ ಪ್ರಯಾಣ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಪಕ್ಷದ ರಾಜ್ಯ ಘಟಕ ರಾಹುಲ್ ಗಾಂಧಿ ವಾಹನದ ಮೇಲೆ ಸವಾರಿ ಮಾಡುವ ವೀಡಿಯೊವನ್ನು ಟ್ವೀಟ್ ಮಾಡಿದೆ.

2017 ರ ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ, 40 ಸದಸ್ಯರ ಸದನದಲ್ಲಿ ಕಾಂಗ್ರೆಸ್ ಅತ್ಯಧಿಕ 17 ಸ್ಥಾನಗಳನ್ನು ಗೆದ್ದುಕೊಂಡಿತು. ಪ್ರಮುಖ ಎದುರಾಳಿ ಬಿಜೆಪಿಯನ್ನು 13 ಕ್ಕೆ ಸೀಮಿತಗೊಳಿಸಿತು. ಆದರೆ ಕೇಸರಿ ಪಕ್ಷವು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿತು. ಈ ವೇಳೆ ಬಿಜೆಪಿ ಜನಾದೇಶವನ್ನು ಕದಿಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ ಈ ಆರೋಪವನ್ನು ಕೇಸರಿ ಪಕ್ಷ ತಿರಸ್ಕರಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+