ಹಳೆ ನೋಟು ಜಮೆಗೆ ಕಾಲಾವಕಾಶ ನೀಡಲು ಸರಕಾರಕ್ಕೆ ಏಕೆ ಸಾಧ್ಯವಿಲ್ಲ?
ಹಳೆ 500, 1000 ರುಪಾಯಿ ನೋಟುಗಳನ್ನು ಮಾರ್ಚ್ 31ರವರೆಗೆ ಜಮೆ ಮಾಡಿಸಿಕೊಳ್ತೀರಾ? ಈ ಬಗ್ಗೆ ಅಫಿಡವಿಟ್ ಸಲ್ಲಿಸಿ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ. ಇದಕ್ಕೆ ಎಜಿ, ಹಳೆ ನೋಟನ್ನು ಜಮೆ ಸಾಧ್ಯವಿಲ್ಲ ಎಂದುತ್ತರಿಸಿದ್ದಾರೆ
ನವದೆಹಲಿ, ಮಾರ್ಚ್ 22: ನಿಷೇಧವಾದ 500, 1000 ರುಪಾಯಿ ನೋಟುಗಳನ್ನು ಮಾರ್ಚ್ 31ರವರೆಗೆ ಜಮೆ ಮಾಡಿಸಿಕೊಳ್ತೀರಾ ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸಿ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ವಿಚಾರದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ತೀವಿ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಅಟಾರ್ನಿ ಜನರಲ್ ಈ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡಿದ್ದು, ಡಿಸೆಂಬರ್ 30, 2016ರ ನಂತರ ಅಮಾನ್ಯವಾದ ನೋಟುಗಳ ಜಮೆ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಮಾರ್ಚ್ 31ರವರೆಗೆ ಇದ್ದ ಅಮಾನ್ಯ ನೋಟುಗಳ ಜಮೆ ಕಾಲಾವಕಾಶವನ್ನು ಸರಕಾರ ಏಕೆ ಕೊನೆಗೊಳಿಸಿತು ಎಂದು ಪ್ರಶ್ನಿಸಿ, ಸುಪ್ರೀಂಗೆ ಅರ್ಜಿ ಸಲ್ಲಿಸಲಾಗಿತ್ತು.[ಹಳೆ ನೋಟುಗಳನ್ನು ಇಟ್ಟುಕೊಂಡವರಿಗೆ ಕಾದಿದೆ ಗಂಡಾಂತರ]

ಕಾನೂನಿನ ಪ್ರಕಾರ ಡಿಸೆಂಬರ್ 20, 2016 ಕೊನೆ ದಿನ ಎಂದು ತಿಳಿಸಲಾಗಿತ್ತು. ಅದರೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮಾರ್ಚ್ 31, 2017ರವರೆಗೆ ಜಮೆ ಮಾಡಬಹುದು ಎಂದಿದ್ದರು. ಕೊನೆಗೆ ಕಾನೂನಿನ ಪ್ರಕಾರ ಏನು ಹೇಳುತ್ತದೋ ಅದರಂತೆ ನಡೆಯಲು ತೀರ್ಮಾನಿಸಲಾಗಿದೆ.
ನಾವೀಗ ಪ್ರಧಾನಿ ಭಾಷಣದಲ್ಲಿ ಹೇಳಿದ್ದಕ್ಕಿಂತ, ಕಾನೂನಿನ ಹಾಗೆ ನಡೆಯಲು ನಿರ್ಧರಿಸಿದ್ದೇವೆ. ಸ್ಪೆಸಿಫೈಡ್ ಬ್ಯಾಂಕ್ ನೋಟ್ಸ್ ಸುಗ್ರೀವಾಜ್ಞೆ 2016 ಅನ್ನು ಉಲ್ಲೇಖಿಸಿ, ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದರು. ಪ್ರಧಾನಿಯಾಗಲೀ ರಿಸರ್ವ್ ಬ್ಯಾಂಕ್ ಆಗಲಿ ಕಾಲಾವಕಾಶ ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಇದು ಕಾನೂನಿನ ಪ್ರಕ್ರಿಯೆ ಎಂದು ಎಜಿ ಹೇಳಿದರು.[ಹಳೆ ನೋಟು ಇಸಿದುಕೊಳ್ಳದ ಆರ್ಬಿಐ, ರೊಚ್ಚಿಗೆದ್ದ ಜನರು]
ನೋಟು ಅಮಾನ್ಯದ ನಿರ್ಧಾರದಿಂದ ಜನ ತತ್ತರಿಸಿದ್ದಾರೆ. ಇಂಥದ್ದೊಂದು ನಿಯಮ ಏಕೆ ಮಾಡಿಕೊಂಡಿದ್ದೀರಿ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಎಜಿ, ಸರಕರ ತನ್ನ ವಿವೇಚನೆಗೆ ತಕ್ಕಂತೆ ಅಧಿಕಾರ ಬಳಸಲು ಸಂಸತ್ತೇ ಅವಕಾಶ ನೀಡಿದೆ ಎಂದರು. ಹೊಸ ಕಾನೂನಿನ ಬಗ್ಗೆ ನೋಟಿಸ್ ಹೊರಡಿಸುವ ಅಗತ್ಯವಿಲ್ಲ. ಹಳೆ 500, 1000 ರುಪಾಯಿ ನೋಟು ತುಂಡು ಕಾಗದದ ಸಮಾನ ಎಂದು ಈಗಾಗಲೇ ತಿಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಹೇಳಲಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications