ದೆಹಲಿ ಅತ್ಯಾಚಾರ ಸಂತ್ರಸ್ತೆಯ ತಾಯಿ ಒಡಲಾಳದ ನೋವು
ನವದೆಹಲಿ, ಮಾರ್ಚ್ 2: ಏನೂ ಬದಲಾಗಲ್ಲ. ಸಾವಿರಾರು ಕಾನೂನುಗಳನ್ನು ಮಾಡಿದ್ದಾರೆ ಹಾಗೂ ಇನ್ನು ಮುಂದೆಯೂ ಮಾಡುತ್ತಾರೆ. ಆದರೆ ಕೋರ್ಟ್ ಗಳು ಅದರದೇ ವೇಗದಲ್ಲಿ ಕಾರ್ಯ ನಿರ್ವಹಿಸುತ್ತವೆ. ಸರಕಾರ ಹಾಗೂ ಕೋರ್ಟ್ ಅನ್ನು ಕೇಳಲು ಇಚ್ಛಿಸುತ್ತೇನೆ: ಏಳು ವರ್ಷಗಳಲ್ಲಿ ಒಬ್ಬ ಯುವತಿಗೆ ನ್ಯಾಯ ಸಿಕ್ಕಿಲ್ಲ. ಅತ್ಯಾಚಾರ ನಡೆಯುತ್ತಿರುವ ಯುವತಿಯರು ಹಾಗೂ ಮಹಿಳೆಯರಿಗೆ ಉತ್ತರಿಸುವವರು ಯಾರು?
2012 Delhi gangrape & murder case: Counsel for the convicts today told Delhi's Patiala House Court that curative petition might be filed soon challenging the capital punishment.
— ANI (@ANI) 2 March 2019
-ಹೀಗೆ ಅಸಹಾಯಕತೆ ಹಾಗೂ ನೋವಿನಿಂದ ತಮ್ಮ ಒಡಲಾಳದ ನೋವನ್ನು ಹೊರ ಹಾಕಿದ್ದಾರೆ ದೆಹಲಿಯಲ್ಲಿ ನಡೆದಿದ್ದ ಅತ್ಯಂತ ಹೇಯ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾದೇವಿ. ತಮ್ಮ ಮಗಳ ಮೇಲೆ ನಡೆದ ಅತ್ಯಾಚಾರದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗದಿರುವ ಬಗ್ಗೆ ಅವರ ಸಹನೆ ಮುಗಿದು ಹೋಗಿ, ಈ ರೀತಿಯ ಬೇಸರ ತೋಡಿಕೊಂಡಿದ್ದಾರೆ.
2012ರ ದೆಹಲಿ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪರ ವಕೀಲರು ದೆಹಲಿಯ ಪಟಿಯಾಲ ಕೋರ್ಟ್ ಎದುರು, ಮರಣದಂಡನೆ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಕ್ಯುರೇಟಿವ್ ಅರ್ಜಿಯನ್ನು ಶೀಘ್ರದಲ್ಲೇ ಸಲ್ಲಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಈಗ ವಿವಿಧ ವಲಯಗಳಿಂದ ಆಕ್ರೋಶ ವ್ಯಕ್ತವಾಗಿದೆ.