ಸುನಂದಾ ಕೊಲೆ: ಪತ್ರಕರ್ತೆ ನಳಿನಿ ಸಿಂಗ್ ವಿಚಾರಣೆ
ನವದೆಹಲಿ, ಜ.23: ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಕೊಲೆ ಪ್ರಕರಣದ ತನಿಖೆ ಮುಂದುವರೆಸಿರುವ ವಿಶೇಷ ತನಿಖಾ ದಳ ಈಗ ಪತ್ರಕರ್ತ ಮೇಲೆ ಕಣ್ಣಿಟ್ಟಿದೆ. ಹಿರಿಯ ಪತ್ರಕರ್ತೆ ನಳಿನಿ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಲು ಎಸ್ ಐಟಿ ಸಜ್ಜಾಗಿದೆ.
ಸುನಂದಾ ಪುಷ್ಕರ್ ಕೊಲೆ ಪ್ರಕರಣದಲ್ಲಿ ಪತ್ರಕರ್ತೆ ನಳಿನಿ ವಿಚಾರಣೆ ಪ್ರಮುಖ ತಿರುವು ನೀಡುವ ಸಾಧ್ಯತೆಯಿದೆ. ನಳಿನಿ ಹಾಗೂ ಸುನಂದಾ ಇಬ್ಬರಲ್ಲೂ ಆಪ್ತತೆ ಬೆಳೆದಿತ್ತು ಹಾಗೂ ಕಾಲಕಾಲಕ್ಕೆ ಇಬ್ಬರು ಮಾತುಕತೆ ನಡೆಸುತ್ತಿದ್ದರು ಎಂಬ ಅಂಶ ಗುಟ್ಟಾಗೇನೂ ಉಳಿದಿಲ್ಲ.
ಐಪಿಎಲ್ ವಿವಾದದ ಲಿಂಕ್
ನಳಿನಿ ಸಿಂಗ್ ಅವರು ಇತ್ತೀಚೆಗೆ ಐಪಿಎಲ್ ವಿವಾದ, ಕೇರಳ ಟಸ್ಕರ್ಸ್ ಖರೀದಿ ಅವ್ಯವಹಾರದ ಬಗ್ಗೆ ಮಾತನಾಡುತ್ತಾ ಸುನಂದಾ ಪುಷ್ಕರ್ ಹೆಸರು ಪ್ರಸ್ತಾಪಿಸಿದ್ದರು. ಅದರೆ, ಸ್ಪಷ್ಟವಾದ ಅಭಿಪ್ರಾಯ ಮಂಡನೆ ಮಾಡುವಲ್ಲಿ ವಿಫಲರಾಗಿದ್ದರು.

ಐಪಿಎಲ್ ನಲ್ಲಿ ನಡೆದ ವಿವಾದಗಳ ಬಗ್ಗೆ ಹೇಳಲು ಹೊರಟ ನಳಿನಿ, ಸುನಂದಾ ಹೆಸರನ್ನು ಬಳಸಿದ್ದೇಕೆ? ಎಂಬುದನ್ನು ತಿಳಿಯಲು ಎಸ್ ಐಟಿ ಮುಂದಾಗಿದೆ. ಇದು ಕೊಲೆ ಪ್ರಕರಣಕ್ಕೆ ಹೇಗೆ ಲಿಂಕ್ ಆಗುವುದೋ ತನಿಖಾ ತಂಡವೇ ನಿರ್ಧರಿಸಬೇಕಿದೆ.
ವಿಚಾರಣೆ ಹೊಸದೇನಲ್ಲ
ಸುನಂದಾ ಪುಷ್ಕರ್ ಸಾವಿನ ನಂತರ ತನ್ನ ಹಾಗೂ ಸುನಂದಾ ನಡುವಿನ ಒಡನಾಟದ ಬಗ್ಗೆ ನಳಿನಿ ಅವರು ಮ್ಯಾಜಿಸ್ಟ್ರೇಟ್ ಕೋರ್ಟಿಗೆ ತೆರಳಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪೊಲೀಸರು ತನ್ನನ್ನು ಹೆಚ್ಚು ಪ್ರಶ್ನಿಸುವ ಅಗತ್ಯ ಕಾಣಿಸುವುದಿಲ್ಲ ಎಂದಿದ್ದರು.
ತರಾರ್- ತರೂರ್ ಮಾತುಕತೆ
ಪಾಕಿಸ್ತಾನಿ ಪತ್ರಕರ್ತೆ ತರಾರ್ ಹಾಗೂ ಶಶಿ ತರೂರ್ ನಡುವೆ ನಡೆದಿದೆ ಎನ್ನಲಾದ ಪ್ರಣಯ ಸಂದೇಶ ವಿನಿಮಯದ ಬಗ್ಗೆ ಸುನಂದಾ ಅವರು ನಳಿನಿ ಬಳಿ ಹೇಳಿಕೊಂಡಿದ್ದರಂತೆ. ಆದರೆ, ಶಶಿ ಅವರು ಬ್ಲಾಕ್ ಬೆರಿ ಬಿಬಿಎಂ ಸಂದೇಶಗಳನ್ನು ಅಳಿಸಿ ಹಾಕಿರುವುದು ಪ್ರಮುಖಕ್ಕೆ ತಿರುವು ನೀಡಿದೆ. ನಳಿನಿ ವಿಚಾರಣೆ ವೇಳೆ ಯಾವ ವಿಷಯ ಬಹಿರಂಗ ಪಡಿಸುತ್ತಾರೆ ಎಂಬುದರ ಮೇಲೆ ಮುಂದಿನ ತನಿಖೆ ದಿಕ್ಕು ತಿಳಿಯಲಿದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications