Get Updates
Get notified of breaking news, exclusive insights, and must-see stories!

ಸುನಂದಾ ಪುತ್ರ ಶಿವ್ ಮೆನನ್ ವಿಚಾರಣೆಗೆ ಸಿಟ್ ನಿರ್ಧಾರ

ನವದೆಹಲಿ, ಫೆ. 4: ಸುನಂದಾ ಪುಷ್ಕರ್ ಹತ್ಯೆ ಪ್ರಕರಣದಲ್ಲಿ ನವದೆಹಲಿಯ ವಿಶೇಷ ತನಿಖಾ ದಳವು ಸುನಂದಾ ಪುತ್ರ ಶಿವ್ ಮೆನನ್ ಅವರನ್ನು ಬುಧವಾರ ತನಿಖೆಗೊಳಪಡಿಸಲು ನಿರ್ಧರಿಸಿದೆ.

ಸುನಂದಾ ಅವರ ಜೀವನದ ಹಲವು ಘಟನಾವಳಿಗಳನ್ನು ತಿಳಿಯಲು ಅವರ ಪುತ್ರನನ್ನು ಪ್ರಶ್ನೆಗೊಳಪಡಿಸುವ ಅಗತ್ಯವಿದೆ. ಸುನಂದಾ ಅವರು ಪುತ್ರನೊಂದಿಗೆ ಹಲವು ವಿಷಯಗಳನ್ನು ಹಂಚಿಕೊಂಡಿರುತ್ತಾರೆ. ಶಶಿ ತರೂರ್ ಜೊತೆ ತಾವು ಹೊಂದಿದ್ದ ಸಂಬಂಧ ಎಂದು ವಿಶೇಷ ತನಿಖಾ ದಳದ ಅಧಿಕಾರಿಗಳು ತಿಳಿಸಿದ್ದಾರೆ. [ಸುನಂದಾ ಹತ್ಯೆಯಲ್ಲಿ ಕಾಂಚಾಣದ ಕೈವಾಡ?]

shiv

ಸುನಂದಾ ಪುಷ್ಕರ್ ಹಾಗೂ ಶಶಿ ತರೂರ್ ಮಧ್ಯೆ ಇದ್ದ ಸಂಬಂಧ ಕುರಿತು ವಿರೋಧಾತ್ಮಕ ಅಭಿಪ್ರಾಯಗಳಿವೆ. ಸುನಂದಾ ಜೊತೆಗೆ ತಾವು ಯಾವಾಗಲೂ ಉತ್ತಮ ಸಂಬಂಧ ಹೊಂದಿದ್ದಾಗಿ ತರೂರ್ ತಿಳಿಸಿದ್ದಾರೆ. [ಸುನಂದಾ ಹತ್ಯೆ ಪ್ರಕರಣದಲ್ಲಿ ಅಮರ್ ಸಿಂಗ್ ಗೆ ಸಮನ್ಸ್]

ಆದರೆ, ಅವರಿಬ್ಬರ ಮಧ್ಯೆ ಹಲವು ಬಾರಿ ಜಗಳ ನಡೆದಿದ್ದು ಬೆಳಕಿಗೆ ಬಂದಿದೆ. ಹಲವರು ತಾವು ಸುನಂದಾ ಹಾಗೂ ತರೂರ್ ಮಧ್ಯೆ ಜಗಳ ನಡೆದಿದ್ದನ್ನು ನೋಡಿರುವುದಾಗಿ ತಿಳಿಸಿದ್ದಾರೆ ಎಂದು ತನಿಖಾ ದಳದ ಅಧಿಕಾರಿಗಳು ಹೇಳಿದ್ದಾರೆ. [ಸಾಕ್ಷಿ ನಾಶ, ನಾಲ್ವರ ಮೇಲಿದೆ ಶಂಕೆ]

ಈ ಹತ್ಯೆಯಲ್ಲಿ ಐಪಿಎಲ್ ವಿವಾದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದರ ಕುರಿತು ಸುನಂದಾ ಅವರು ತಮ್ಮ ಪುತ್ರನೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಸಂಭವನೀಯತೆ ಇದೆ. ಆದ್ದರಿಂದ ಅವರನ್ನು ವಿಚಾರಣೆಗೊಳಪಡಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+