ದೆಹಲಿ ಹಿಂಸಾಚಾರ: ರೈತರ ವಿರುದ್ಧ ಎಫ್ಐಆರ್ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹ
ನವದೆಹಲಿ,
ಫೆಬ್ರವರಿ.13:
ರಾಷ್ಟ್ರ
ರಾಜಧಾನಿಯಲ್ಲಿ
ನಡೆದ
ಹಿಂಸಾಚಾರಕ್ಕೆ
ಸಂಬಂಧಿಸಿದಂತೆ
ರೈತರ
ಮೇಲೆ
ಸುಳ್ಳು
ಪ್ರಕರಣಗಳನ್ನು
ದಾಖಲಿಸಲಾಗುತ್ತಿದ್ದು,
ಈ
ಸಂಬಂಧ
ಉನ್ನತ
ಮಟ್ಟದ
ನ್ಯಾಯಾಂಗ
ತನಿಖೆ
ನಡೆಸಬೇಕು
ಎಂದು
ರೈತರು
ಆಗ್ರಹಿಸಿದ್ದಾರೆ.
ಕಳೆದ
ಜನವರಿ.26ರಂದು
ನಡೆದ
72ನೇ
ಗಣರಾಜ್ಯೋತ್ಸವ
ದಿನವೇ
ಕೃಷಿ
ಸಂಬಂಧಿತ
ಕಾಯ್ದೆಗಳನ್ನು
ರದ್ದುಗೊಳಿಸುವಂತೆ
ಆಗ್ರಹಿಸಿದ
ರೈತರು
ಟ್ರ್ಯಾಕ್ಟರ್
ಜಾಥಾ
ನಡೆಸಿದ್ದರು.
ದೆಹಲಿಯ
ಮೂರು
ಗಡಿಯಲ್ಲಿ
ರೈತರು
ಮತ್ತು
ಪೊಲೀಸರ
ನಡುವಿನ
ಸಂಘರ್ಷದ
ನಂತರದಲ್ಲಿ
ಪರಿಸ್ಥಿತಿ
ಹಿಂಸಾಚಾರಕ್ಕೆ
ತಿರುಗಿತ್ತು.
ಹೃದಯಾಘಾತ:
ಸಿಂಘು
ಗಡಿಯಲ್ಲಿ
ಪ್ರತಿಭಟನೆ
ನಡೆಸುತ್ತಿದ್ದ
ರೈತ
ಸಾವು
ದೆಹಲಿಯ
ಸಿಂಧು
ಗಡಿಯಲ್ಲಿ
ರೈತರನ್ನು
ಉದ್ದೇಶಿಸಿ
ಈ
ಸಂಬಂಧ
ಸಂಯುಕ್ತ
ಕಿಸಾನ್
ಮೋರ್ಚಾದ
ಮುಖಂಡರು
ಮಾತನಾಡಿದರು.
ದೆಹಲಿ
ಹಿಂಸಾಚಾರಕ್ಕೆ
ಸಂಬಂಧಪಟ್ಟಂತೆ
ಯಾವೆಲ್ಲ
ರೈತರಿಗೆ
ನೋಟಿಸ್
ಬಂದಿದೆಯೋ
ಅವರೆಲ್ಲ
ನೇರವಾಗಿ
ಪೊಲೀಸರ
ವಿಚಾರಣೆಗೆ
ಹಾಜರಾಗಬೇಡಿ.
ಬದಲಿಗೆ
ಈ
ಸಂಬಂಧ
ರಚಿಸಿದ
ವಿಶೇಷ
ತಂಡದ
ಎದುರು
ಹಾಜರಾಗುವಂತೆ
ಸಲಹೆ
ನೀಡಿದ್ದಾರೆ.
ನ್ಯಾಯಾಂಗ
ತನಿಖೆ
ನಡೆಸಲು
ವಿಶೇಷ
ತಂಡ:
ದೆಹಲಿಯಲ್ಲಿ
ನಡೆದ
ಹಿಂಸಾಚಾರ
ಪ್ರಕರಣಕ್ಕೆ
ಸಂಬಂಧಿಸಿದಂತೆ
ರೈತರ
ವಿರುದ್ಧ
ಸುಳ್ಳು
ಪ್ರಕರಣಗಳನ್ನು
ದಾಖಲಿಸಲಾಗಿದೆ
ಎಂದು
ಸಂಯುಕ್ತ
ಕಿಸಾನ್
ಮೋರ್ಚಾದ
ಮುಖಂಡ
ಕುಲ್ದೀಪ್
ಸಿಂಗ್
ಆರೋಸಿದ್ದಾರೆ.
ಈ
ಹಿಂದೆ
ನಡೆದಿರುವ
ಘಟನೆ
ಕುರಿತು
ನ್ಯಾಯಾಂಗ
ತನಿಖೆ
ನಡೆಸಲು
ಸುಪ್ರೀಂಕೋರ್ಟ್
ಅಥವಾ
ಹೈಕೋರ್ಟ್
ನಿವೃತ್ತ
ನ್ಯಾಯಮೂರ್ತಿಗಳ
ನೇತೃತ್ವದಲ್ಲಿ
ವಿಶೇಷ
ತಂಡವನ್ನು
ರಚಿಸಬೇಕೆಂದು
ಆಗ್ರಹಿಸಿದ್ದಾರೆ.
ಜನವರಿ.26ರಂದು
ನಡೆದ
ಟ್ರ್ಯಾಕ್ಟರ್
ಜಾಥಾದಲ್ಲಿ
ಭಾಗವಹಿಸಿದ
16
ರೈತರು
ಇಂದಿಗೂ
ನಾಪತ್ತೆಯಾಗಿದ್ದಾರೆ.
44
ಎಫ್ಐಆರ್
ನಲ್ಲಿ
14
ಪ್ರಕರಣಗಳಿಗೆ
ಸಂಬಂಧಿಸಿದಂತೆ
ಇದುವರೆಗೂ
122
ರೈತರನ್ನು
ದೆಹಲಿ
ಪೊಲೀಸರು
ಬಂಧಿಸಿದ್ದಾರೆ.
ಬಂಧಿತ
ರೈತರಿಗೆ
ಆರ್ಥಿಕ
ಮತ್ತು
ನ್ಯಾಯಾಂಗ
ಬೆಂಬಲವನ್ನು
ನೀಡುವುದಾಗಿ
ಸಂಯುಕ್ತ
ಕಿಸಾನ್
ಮೋರ್ಚಾದ
ಮುಖಂಡ
ರವೀಂದರ್
ಸಿಂಗ್
ಹೇಳಿದ್ದಾರೆ.
ದೆಹಲಿ
ಮೂರು
ಗಡಿಯಲ್ಲಿ
ರೈತರ
ಪ್ರತಿಭಟನೆ:
ಕೇಂದ್ರ
ಸರ್ಕಾರ
ಜಾರಿಗೊಳಿಸಿರುವ
ವಿವಾದಿತ
ರೈತರ
ಉತ್ಪಾದನೆ
ವ್ಯಾಪಾರ
ಮತ್ತು
ವಾಣಿಜ್ಯ
(ಪ್ರಚಾರ
ಮತ್ತು
ಸೌಲಭ್ಯ)
ಕಾಯ್ದೆ,
ಬೆಲೆ
ಭರವಸೆ
ಮತ್ತು
ಕೃಷಿ
ಸೇವೆಗಳ
ಕಾಯ್ದೆ
(ಸಬಲೀಕರಣ
ಮತ್ತು
ಸಂರಕ್ಷಣೆ)
ಒಪ್ಪಂದ
ಹಾಗೂ
ಅಗತ್ಯ
ಸರಕುಗಳ
(ತಿದ್ದುಪಡಿ)
ಕಾಯ್ದೆಗಳ
ವಿರುದ್ಧ
ನವಂಬರ್.26
ರಿಂದ
ಪ್ರತಿಭಟನೆ
ನಡೆಸಲಾಗುತ್ತಿದೆ.
ವಿವಾದಿತ
ಕೃಷಿ
ಕಾಯ್ದೆಗಳನ್ನು
ರದ್ದುಗೊಳಿಸಬೇಕು
ರೈತರ
ಬೆಳೆಗೆ
ಕನಿಷ್ಠ
ಬೆಂಬಲ
ಬೆಲೆ
ನೀಡಬೇಕು
ಎಂದು
ಆಗ್ರಹಿಸಿ
ಕೇಂದ್ರ
ಸರ್ಕಾರದ
ವಿರುದ್ಧ
ದೆಹಲಿ,
ಹರಿಯಾಣ
ಮತ್ತು
ಉತ್ತರ
ಪ್ರದೇಶ
ಗಡಿ
ಪ್ರದೇಶದಲ್ಲಿ
ಕಳೆದ
80
ದಿನಗಳಿಂದಲೂ
ರೈತರು
ಹೋರಾಟ
ಮುಂದುವರಿಸುತ್ತಿದ್ದಾರೆ.
ನವದೆಹಲಿಯ
ಸಿಂಘು
ಗಡಿ,
ಟಿಕ್ರಿ
ಗಡಿ
ಮತ್ತು
ಘಾಜಿಪುರ್
ಗಡಿಯಲ್ಲಿ
ಸಾವಿರಾರು
ರೈತರು
ಪ್ರತಿಭಟನೆ
ನಡೆಸುತ್ತಿದ್ದಾರೆ.