ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಡವರ ಅಕ್ಕಿ ಶ್ರೀಮಂತರ ಕೈ ತೊಳೆಯುವ ಸ್ಯಾನಿಟೈಸರ್ ಆಗುತ್ತಿದೆ'

|
Google Oneindia Kannada News

ನವದೆಹಲಿ, ಏಪ್ರಿಲ್ 21: ಕೊರೊನಾ ತಡೆಯಲು ಸ್ಯಾನಿಟೈಸರ್ ಬಳಕೆ ಹೆಚ್ಚಾಗಿದೆ. ಇದರ ಉತ್ಪಾದನೆಯೂ ಹೆಚ್ಚಾಗಿದೆ.

ಭಾರತೀಯ ಆಹಾರ ನಿಗಮದಲ್ಲಿ (FCI) ಹೆಚ್ಚುವರಿಯಾಗಿ ಉಳಿದ ಅಕ್ಕಿಯನ್ನು ಮಿಥೆನಾಲ್ ಆಗಿ ಪರಿವರ್ತಿಸಿ ಸ್ಯಾನಿಟೈಸರ್ ತಯಾರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂಬ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ವರದಿಯನ್ನು ತಮ್ಮ ಟ್ವಿಟ್‌ನಲ್ಲಿ ಲಗತ್ತಿಸಿರುವ ಅವರು, 'ಬಡವರ ಅಕ್ಕಿಯನ್ನು ಶ್ರೀಮಂತರ ಕೈ ತೊಳೆಯಲು ಕೇಂದ್ರ ಸರ್ಕಾರ ಕಳಿಸುತ್ತಿದೆ ನೋಡಿ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಚಿವರಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕಾರ್ಯಕ್ರಮಶಿಕ್ಷಣ ಸಚಿವರಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕಾರ್ಯಕ್ರಮ

Poor Rice Using For Rich Peoples Sanitizer: Congress Leader Rahul Gandhi Tweet

ದೇಶದಲ್ಲಿ ಬಡವರು ಹಸಿವಿನಿಂದ ಬಳಲುತ್ತಿರುವಾಗ ಸ್ಯಾನಿಟೈಸರ್ ಬಳಕೆಗೆ ಬಡವರ ಅಕ್ಕಿಯನ್ನು ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದೆ. ದೇಶದ ಬಡವರು ಯಾವಾಗ ಎಚ್ಚೆತ್ತುಕೊಳ್ಳುತ್ತಿರಾ? ನೀವು ಹಸಿವಿನಿಂದ ಬಳಲುತ್ತಿರುವಾಗ ಶ್ರೀಮಂತರ ಕೈಯನ್ನು ಸ್ವಚ್ಛಗೊಳಿಸುವಲ್ಲಿ ಕೇಂದ್ರ ಸರ್ಕಾರ ಮಗ್ನವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

English summary
Poor Rice Using For Rich Peoples Sanitizer: Congress Leader Rahul Gandhi Tweet. he attack on central government abou FCI Dession.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X