1942ರಲ್ಲಿ 'ಭಾರತ್ ಛೋಡೋ', ಇಂದು 'ಭಾರತ್ ಜೋಡೋ': ಮೋದಿ
ನವದೆಹಲಿ, ಆಗಸ್ಟ್ 15: 1942ರಲ್ಲಿ ಭಾರತ್ ಛೋಡೋ (ಕ್ವಿಟ್ ಇಂಡಿಯಾ ಅಥವಾ ಚಲೇ ಜಾಂವ್) ಚಳುವಳಿ ನಡೆಸಲಾಗಿತ್ತು. ಇಂದು ನಾವು ಭಾರತ್ ಜೋಡೋ (ಭಾರತವನ್ನು ಒಗ್ಗೂಡಿಸುವ) ಚಳುವಳಿ ಆರಂಭಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ನಂತರ, ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ''ಸ್ವಾತಂತ್ರ್ಯಕ್ಕಾಗಿ ತಮ್ಮ ಸುಖ, ಸಂತೋಷಗಳನ್ನು ತ್ಯಾಗ ಮಾಡಿದವರನ್ನು ನಾವು ಇಂದು ನೆನಪಿಸಿಕೊಳ್ಳಬೇಕು. ಅವರ ಆ ತ್ಯಾಗ, ಬಲಿದಾನಗಳಿಂದಲೇ ನಾವು ಇಂದು ಸ್ವತಂತ್ರ್ಯ ದೇಶದಲ್ಲಿ ಜೀವಿಸುವಂತಾಗಿದೆ. ಅವರ ಬಲಿದಾನಗಳನ್ನು ಸಾರ್ಥಕಗೊಳಿಸಬೇಕೆಂದರೆ ನಾವು ಭಾರತ್ ಜೋಡೋ ಚಳವಳಿಯನ್ನು ಹಮ್ಮಿಕೊಳ್ಳಲೇಬೇಕು'' ಎಂದು ವಿವರಿಸಿದರು.

ಇದು, ಪ್ರಧಾನಿ ನರೇಂದ್ರ ಮೋದಿಯವರ 4ನೇ ಸ್ವಾತಂತ್ರ್ಯೋವದ ಭಾಷಣವಾಗಿದೆ. ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.
In Pics : ದೇಶದೆಲ್ಲೆಡೆ 71ನೇ ಸ್ವಾತಂತ್ರ್ಯ ದಿನಾಚರಣೆಯ ಕಲರವ
- ಈ ವರ್ಷ ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಷವಾಗಿದ್ದು, ಚಂಪಾರಣ ಸತ್ಯಾಗ್ರಹದ 100ನೇ ವರ್ಷಾಚರಣೆಯೂ ಆಗಿದೆ. ಇಷ್ಟೇ ಅಲ್ಲದೆ, ಗಣೇಶ ಉತ್ಸವವು ನಮ್ಮ ದೇಶದಲ್ಲಿ ಆರಂಭವಾಗಿ 125 ವರ್ಷಗಳಾಗಿವೆ. ಹಾಗಾಗಿ, ಈ ಬಾರಿಯ ಸ್ವಾತಂತ್ರ್ಯೋತ್ಸವ ಭಾರೀ ವಿಶೇಷವಾದದ್ದು.
- 1942ರಿಂದ 1947ರವರೆಗೆ ನಡೆದ ಕ್ವಿಟ್ ಇಂಡಿಯಾ ಚಳುವಳಿಯು ಭಾರತಕ್ಕೆ ಸ್ವತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಮಹತ್ವಪೂರ್ಣವಾದದ್ದು.
- ಆ ಅವಧಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ತಮ್ಮ ತನು,ಮನ, ಜೀವನಗಳನ್ನೇ ದೇಶಕ್ಕಾಗಿ ಹೆಚ್ಚೆಚ್ಚು ಸಮರ್ಪಿಸಿದರು. ಹೆಗಲಿಗೆ ಹೆಗಲು ಕೊಟ್ಟು ನಿಂತು ಭಾರತಕ್ಕೆ ಸ್ವತಂತ್ರ್ಯ ತಂದುಕೊಡಲೇಬೇಕೆಂಬ ಉತ್ಕಟ ಅಭೀಪ್ಸೆಯಿಂದ ಹೋರಾಟ ನಡೆಸಿದರು. ಅಂಥದ್ದೇ ಒಂದು ಹೋರಾಟ ಈಗ ನಮ್ಮ ಭಾರತದ ಅಭಿವೃದ್ಧಿಗಾಗಿ ಆಗಲೇಬೇಕಿದೆ.
- ನಮ್ಮ ಸಮಾಜದ ಅನಿಷ್ಟಗಳ ವಿರುದ್ಧ, ಸಮಸ್ಯೆಗಳ ವಿರುದ್ಧ ಎಲ್ಲಾ ನಾಗರಿಕರೂ ಸಿಡಿದೇಳಬೇಕಿದೆ. 'ಚಲ್ತಾ ಹೇ' (ಹೇಗೋ ನಡೆದುಹೋಗುತ್ತೆ) ಎನ್ನುವ ಮನಸ್ಥಿತಿಗಳಿಂದ ನಾವು ಹೊರಬರಬೇಕಿದೆ.
- 2018ರ ಜನವರಿ 1ನೇ ದಿನಾಂಕವು ಕೇವಲ ಹೊಸ ವರ್ಷದ ಆಚರಣೆಯಲ್ಲ. ಅಂದು, ಈ ಹೊಸ ಶತಮಾನದಲ್ಲಿ ಹುಟ್ಟಿದವರು 18ನೇ ವಯಸ್ಸಿಗೆ ಕಾಲಿಡುವಂಥ ಸುದಿನ. ಮುಂದಿನ ಭಾರತದ ಶಿಲ್ಪಿಗಳು ಅವರೇ. ಹಾಗಾಗಿ, ಅವರನ್ನು ಭಾರತದ 'ಭಾಗ್ಯ ವಿದಾತರು' ಎಂದು ಕರೆಯಬಯಸುತ್ತೇನೆ.
- ಭಾರತದ ಸುರಕ್ಷೆಯೇ ನಮ್ಮ ಆದ್ಯತೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications