ಸಂಸತ್ ಕ್ಯಾಂಟೀನ್ ಸಹ ಖಾಸಗೀಕರಣ: ನಾನ್ ವೆಜ್ಗೆ ಬ್ರೇಕ್?
ನವದೆಹಲಿ, ಜನವರಿ 14: ಹಲವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಯವರಿಗೆ ಒಪ್ಪಿಸಿ ಕೆಂಗಣ್ಣಿಗೆ ಗುರಿ ಆಗಿರುವ ಮೋದಿ ಸರ್ಕಾರ ಈಗ ಸಂಸತ್ನ ಕ್ಯಾಂಟೀನ್ ಅನ್ನೂ ಸಹ ಖಾಸಗಿ ಅವರಿಗೆ ಒಪ್ಪಿಸುತ್ತಿದೆ.
ಸಂಸತ್ನಲ್ಲಿ ರೈಲ್ವೆ ಇಲಾಖೆಯ ಅಂಗಸಂಸ್ಥೆ ಐಆರ್ಸಿಟಿಸಿ ಇಷ್ಟು ವರ್ಷಗಳಿಂದ ಆಹಾರ ಪೂರೈಕೆ ಮಾಡುತ್ತಿತ್ತು. ಕಡಿಮೆ ವೆಚ್ಚಕ್ಕೆ ಆಹಾರ ಪೂರೈಕೆ ಮಾಡುತ್ತಿದ್ದು, ದೇಶದ ಕೆಲವೇ ಕಡಿಮೆ ದರದ ಹೋಟೆಲ್ಗಳಲ್ಲಿ ಸಂಸತ್ನ ಕ್ಯಾಂಟೀನ್ ಸಹ ಒಂದಾಗಿತ್ತು. ಆದರೆ ಈಗ ಐಆರ್ಸಿಟಿಸಿ ಯನ್ನು ಬದಲಾವಣೆ ಮಾಡಿ ಆ ಜಾಗಕ್ಕೆ ಖಾಸಗಿ ಅವರನ್ನು ಕರೆದುಕೊಂಡು ಬರುವ ಯೋಜನೆ ಸರ್ಕಾರ ಹಾಕಿದೆ.
ಐಎಸ್ಆರ್ಟಿಸಿ ಬದಲಿಗೆ ಖ್ಯಾತ ಸಿದ್ಧ ಆಹಾರ ತಯಾರಿಕೆಗೆ ಹೆಸರಾಗಿರುವ ಹಲದಿರಾಮ್ಸ್ ಅಥವಾ ಬಿಕಾನೆರ್ವಾಲಾ ಅವರುಗಳಲ್ಲಿ ಒಬ್ಬರಿಗೆ ಕ್ಯಾಂಟೀನ್ ಕ್ಯಾಟರಿಂಗ್ ಜವಾಬ್ದಾರಿ ನೀಡುವ ಬಗ್ಗೆ ಸಿದ್ಧತೆ ನಡೆದಿದೆ.

ಹಲದಿರಾಮ್ಸ್ ಮತ್ತು ಬಿಕನೇರ್ವಾಲಾ ಗಳು ಸಂಸತ್ನಲ್ಲಿ ಆಹಾರ ತಯಾರಿಸಿ ಮಾರಾಟ ಮಾಡಲು ಉತ್ಸುಕವಾಗಿದ್ದು, ಆಹಾರ ಸಮಿತಿ ಸದ್ಯಕ್ಕೆ ಇಲ್ಲವಾಗಿರುವ ಕಾರಣ, ಸ್ಪೀಕರ್ ಓಂ ಬಿರ್ಲಾ ಅವರು ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದ್ದಾರೆ.
ಆದರೆ ಆಹಾರ ಗುತ್ತಿಗೆಯನ್ನು ಹಲದಿರಾಮ್ಸ್ ಅಥವಾ ಬಿಕಾನೆರ್ಗೆ ನೀಡಿದರೆ ಸಂಸತ್ನಲ್ಲಿ ಈಗ ದೊರಕುತ್ತಿರುವ ಮಾಂಸಾಹಾರ ಊಟಕ್ಕೆ ಬ್ರೇಕ್ ಬೀಳಲಿದೆ. ಹಲದಿರಾಮ್ಸ್ ಮತ್ತು ಬಿಕಾಬೆರ್ವಾಲಾ ಎರಡೂ ಸಂಸ್ಥೆಗಳು ಸಸ್ಯಹಾರವನ್ನು ಮಾತ್ರವೇ ನೀಡುತ್ತವೆ.
ಐಆರ್ಸಿಟಿಸಿಯು ನೀಡುತ್ತಿರುವ ಹಣಕ್ಕೆ ತಕ್ಕುದಾದ ಆಹಾರ ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿರುವ ಕಾರಣ ಬದಲಾವಣೆ ಮಾಡಲಾಗುತ್ತಿದೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications