ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಸಮುದಾಯ ಸೋಂಕು ಇಲ್ಲ: ಮನೀಶ್ ಸಿಸೊಡಿಯಾ

|
Google Oneindia Kannada News

ನವದೆಹಲಿ, ಜೂನ್ 9: ದೆಹಲಿಯಲ್ಲಿ ಕೊರೊನಾ ವೈರಸ್ ಸಮುದಾಯಕ್ಕೆ ಹರಡಿಲ್ಲ ಎಂದು ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ತಿಳಿಸಿದ್ದಾರೆ.

ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೊತೆ ನಡೆದ ಸಭೆ ಬಳಿಕ ಮನೀಷ್ ಸಿಸೋಡಿಯಾ ಮಾತನಾಡಿ ಕೊರೊನಾ ವೈರಸ್ ಸಮುದಾಯಕ್ಕೆ ಹರಡಲು ಆರಂಭವಾಗಿಲ್ಲ ಎಂದು ತಿಳಿಸಿದ್ದಾರೆ.

 ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಗೆ ಕೊವಿಡ್ 19 ಟೆಸ್ಟ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಗೆ ಕೊವಿಡ್ 19 ಟೆಸ್ಟ್

ದಹಲಿಯಲ್ಲಿರುವ ಅರ್ಧದಷ್ಟು ಕೊರೊನಾ ಪ್ರಕರಣದ ಮೂಲವನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

No Community Spread Of Virus, Centres Officials Said

ಸಮುದಾಯಕ್ಕೆ ವೈರಸ್ ತಗುಲಿದರೆ ಹೇಗೆ ವೈರಸ್ ತಗುಲಿತು ಎಂಬುದನ್ನು ಅರಿಯಲು ಸಾಧ್ಯವಿಲ್ಲ.ಹಾಗೆಯೇ ದೆಹಲಿಯಲ್ಲಿ ಕೂಡ ಶೇ.50ರಷ್ಟು ಪ್ರಕರಣಗಳಲ್ಲಿ ಮೂಲವನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರ ಜೊತೆ ನಡೆದ ಸಭೆಗೂ ಮುನ್ನ ತಿಳಿಸಿದರು.

ಸಮುದಾಯ ಸೋಂಕು ಕೊರೊನಾ ವೈರಸ್‌ನ ಮೂರನೇ ಹಂತವಾಗಿದೆ. ಕೇಂದ್ರ ಸರ್ಕಾರ ಮಾತ್ರ ಸಮುದಾಯ ಸೋಂಕು ಎಂದು ಘೋಷಿಸಲು ಸಾಧ್ಯವಿದೆ.

ದಹಲಿಯಲ್ಲಿ ಸಮುದಾಯ ಸೋಂಕು ಇದೆ ಆದರೆ ಅದನ್ನು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ, ನಾವು ಅದನ್ನು ಘೋಷಿಸಲು ಸಾಧ್ಯವಿಲ್ಲ , ಕೇಂದ್ರ ಸರ್ಕಾರವೇ ಘೋಷಣೆ ಮಾಡಬೇಕು.

ಅವರು ಅದನ್ನು ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ ಅವರಿಗೆ ಬಿಟ್ಟದ್ದು, ಕೊವಿಡ್ 19 ಅಲ್ಲಿ ನಾಲ್ಕು ಹಂತಗಳಿವೆ ಮೂರನೇ ಹಂತವೇ ಸಮುದಾಯ ಸೋಂಕು ಎಂದು ಏಮ್ಸ್ ನಿರ್ದೇಶಕ ರಣ್‌ದೀಪ್ ಗುಲೇರಿಯಾ ತಿಳಿಸಿದ್ದಾರೆ.

English summary
There is no community spread of coronavirus in Delhi according to central officials, Deputy Chief Minister Manish Sisodia said even as his cabinet colleague expressed concern about the capital entering the phase with more and more cases that cannot be traced to any source.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X