ನಿರ್ಭಯಾ ಅಪರಾಧಿ ತಾಯಿಗೆ ಮಗನ ಮೇಲಿರುವ ಕೊನೆಯ ಆಸೆ ಏನು?
ನವದೆಹಲಿ, ಮಾರ್ಚ್ 19: ನಿರ್ಭಯಾ ಕೊಲೆ, ಅತ್ಯಾಚಾರದಲ್ಲಿ ಅಪರಾಧಿಯಾಗಿದ್ದು ನಾಳೆ ಗಲ್ಲಿಗೇರುತ್ತಿರುವ ವಿನಯ್ ಶರ್ಮಾ ತಾಯಿ ತನ್ನ ಕೊನೆಯ ಆಸೆ ಏನೆಂಬುದನ್ನು ಹೇಳಿಕೊಂಡಿದ್ದಾರೆ.
ಇನ್ನು ಕೆಲವೇ ಗಂಟೆಗಳಲ್ಲಿ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲುಗಂಬಕ್ಕೇರಿಸಲಾಗುತ್ತದೆ. ಕೊನೆಯದಾಗಿ ಮಗನಿಗೆ ಇಷ್ಟವಾದ ಪೂರಿ, ಅಬ್ಜಿ, ಕಚೋರಿಯನ್ನು ತಿನ್ನಿಸಬೇಕು ಎಂದು ಹೇಳಿದ್ದಾಳೆ.
ಕೆಲವೇ ಗಂಟೆಗಳಲ್ಲಿ ನನ್ನ ಮಗ ಇರುವುದಿಲ್ಲ, ಶೀಘ್ರ ಆಹಾರವನ್ನು ತೆಗೆದುಕೊಂಡು ಜೈಲಿಗೆ ಹೋಗುತ್ತೇನೆ. ವಿನಯ್ ಶರ್ಮಾ ಜೊತೆಗೆ ಮುಖೇಶ್ ಸಿಂಗ್, ಪವನ್ ಗುಪ್ತಾ, ಅಕ್ಷಯ್ ಕುಮಾರ್ ಸಿಂಗ್ ನನ್ನು ಗಲ್ಲಿಗೇರಿಸಲಾಗುತ್ತಿದೆ.

ಘಟನೆ ನಡೆದು ಏಳು ವರ್ಷ ಮೂರು ತಿಂಗಳ ಬಳಿಕ ಶಿಕ್ಷೆ
2012 ಡಿಸೆಂಬರ್ 16 ರಂದು ದೆಹಲಿಯ ಬಸ್ ಒಂದರಲ್ಲಿ ವಿನಯ್ ಶರ್ಮಾ ಸೇರಿದಂತೆ ಇನ್ನೂ ನಾಲ್ವರು ಸೇರಿ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಘಟನೆ ನಡೆದು ಏಳು ವರ್ಷಗಳ ಬಳಿಕ ಅಪರಾಧಿಗಳಿಗೆ ಶಿಕ್ಷ ದೊರೆಯುತ್ತಿದೆ.

ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು
ದೆಹಲಿ ಹೈಕೋರ್ಟ್ ವಿನಯ್ ಶರ್ಮನ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಕ್ಷಮಾಧಾನ ಅರ್ಜಿಯನ್ನು ತಿರಸ್ಕರಿಸಿದ್ದರು.

ನಾನು ವಿನಯ್ ಶರ್ಮಾ ತಾಯಿ ಅಷ್ಟೇ
ನಾನು ನನ್ನ ಹೆಸರನ್ನು ಹೇಳುವುದಿಲ್ಲ ನಾನು ವಿನಯ್ ಶರ್ಮಾ ತಾಯಿ ಅಷ್ಟೇ. ನೀವ್ಯಾರು, ನಿಮಗೆ ಏನು ಬೇಕು ಮನೆಯೊಳಗೆ ಯಾರೂ ಇಲ್ಲ, ನನ್ನ ಗಂಡ ಮನೆಯಿಂದ ಹೊರಗೆ ಹೋಗಿದ್ದಾರೆ.. ಇದು ವಿನಯ್ ಶರ್ಮಾ ತಾಯಿ ಆಡಿರುವ ಮಾತುಗಳು.

ಸಾವು, ಬದುಕು ದೇವರು ತೀರ್ಮಾನಿಸುತ್ತಾನೆ
ಎಲ್ಲವೂ ದೇವರ ತೀರ್ಮಾನ, ಈಗ ಕೊರೊನಾ ವೈರಸ್ನ್ನೇ ನೋಡಿ ಯಾವುದೂ ನಮ್ಮ ಕೈಯಲ್ಲಿಲ್ಲ, ಯಾರು ಬದುಕಬೇಕು ಯಾರು ಸಾಯಬೇಕು ಎಂದು ದೇವರೇ ತೀರ್ಮಾನಿಸುತ್ತಾನೆ ಎಂದು ಶರ್ಮಾ ತಾಯಿ ಹೇಳಿದ್ದಾರೆ.

ಜೈಲಿನಲ್ಲಿ ಎಂದೂ ಊಟ ಕೊಡಲು ಬಿಡಲಿಲ್ಲ
ಇಷ್ಟು ವರ್ಷ ನನ್ನ ಮಗ ತಿಹಾರ್ ಜೈಲಿನಲ್ಲಿದ್ದರೂ ಜೈಲಿನೊಳಗೆ ಊಟ ಕೊಡಲು ಬಿಟ್ಟಿರಲಿಲ್ಲ. ಆದರೆ ಈಗ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ಪೂರಿ, ಸಬ್ಜಿ, ಕಚೋರಿಯನ್ನು ತೆಗೆದುಕೊಂಡು ಹೋಗುತ್ತೇನೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications