ನರೇಂದ್ರ ಮೋದಿ ಆಡಳಿತಕ್ಕೆ ಜನತೆ ಕೊಟ್ಟ ಮಾರ್ಕ್ಸ್ ಎಷ್ಟು?
ನವದೆಹಲಿ, ಜೂನ್.02: ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ನೊವೆಲ್ ಕೊರೊನಾ ವೈರಸ್ ನಿಯಂತ್ರಣ ಹಾಗೂ ಭಾರತದಲ್ಲಿ ಲಾಕ್ ಡೌನ್ ನಿರ್ವಹಣೆ ಸೇರಿದಂತೆ ಒಟ್ಟಾರೆಯಾಗಿ ಕೇಂದ್ರ ಸರ್ಕಾರ ಆಡಳಿತ ವೈಖರಿಯನ್ನು ಮೆಚ್ಚಿಕೊಂಡಿದ್ದಾರೆ.
Recommended Video
ಕಳೆದ ಮೇ ತಿಂಗಳಿನಲ್ಲಿ ಸಿ-ವೋಟರ್ ನಡೆಸಿದ 'ಸ್ಟೇಟ್ ಆಫ್ ದಿ ನೇಷನ್-2020' ಸ್ವಾತಂತ್ರ್ಯ ಸಮೀಕ್ಷೆಯಲ್ಲಿ ಶೇ.65ರಷ್ಟು ಜನರು ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತವು ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಸಿದ್ದಾರೆ.
ಭಾರತದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕನಿಷ್ಠ 3,000 ಜನರನ್ನು ಸಮೀಕ್ಷೆ ನಡೆಸುವುದಕ್ಕೆ ಬಳಸಿಕೊಳ್ಳಲಾಗಿತ್ತು. ಪ್ರತಿ ರಾಜ್ಯದಲ್ಲಿ 3,000 ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸಿ ಸಿ-ವೋಟರ್ ವರದಿಯನ್ನು ನೀಡಿದೆ.

ಪ್ರಧಾನಿ ಆಡಳಿತಕ್ಕೆ ಶೇ.65.69ರಷ್ಟು ಜನರಿಂದ ಉತ್ತಮ ಪ್ರತಿಕ್ರಿಯೆ
ಇತ್ತೀಚಿಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ಎರಡನೇ ಅವಧಿ ಆಡಳಿತ ಆರಂಭಿಸಿದ ವಾರ್ಷಿಕೋತ್ಸವನ್ನು ಆಚರಿಸಿತು. ಇದರ ನಡುವೆ ಸಿ-ವೋಟರ್ ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಶೇ.65.69ರಷ್ಟು ಜನರು ಉತ್ತಮವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಪೈಕಿ ಒಡಿಶಾ ರಾಜ್ಯದಲ್ಲಿ ಮೋದಿ ಆಡಳಿತವನ್ನು ಶೇ.95.6ರಷ್ಟು ಜನರು ಮೆಚ್ಚಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶೇ.93.95 ಹಾಗೂ ಛತ್ತೀಸ್ ಗಢದಲ್ಲಿ ಶೇ.92.73ರಷ್ಟು ಜನರು ಪ್ರಧಾನಿ ಆಡಳಿತಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಆಡಳಿತಕ್ಕೆ ಭೇಷ್ ಎಂದ ಟಾಪ್-10 ರಾಜ್ಯಗಳು
ರಾಜ್ಯ ಶೇಕಡಾವಾರು ಮಾರ್ಕ್ಸ್ (ಸಿ-ವೋಟರ್ ಸಮೀಕ್ಷೆ)
ಒಡಿಶಾ 95.6%
ಹಿಮಾಚಲ ಪ್ರದೇಶ 93.95%
ಛತ್ತೀಸ್ ಗಢ್ 92.73%
ಆಂಧ್ರ ಪ್ರದೇಶ 83.6%
ಜಾರ್ಖಂಡ್ 82.97%
ಕರ್ನಾಟಕ 82.56%
ಗುಜರಾತ್ 76.46%
ಅಸ್ಸಾಂ 74.59%
ತೆಲಂಗಾಣ 71.51%
ಮಹಾರಾಷ್ಟ್ರ 71.48%

ಪ್ರಧಾನಮಂತ್ರಿ ವರ್ಚಸ್ಸು ದಕ್ಷಿಣ ಭಾರತದಲ್ಲಿ ಅಷ್ಟಕಷ್ಟೇ
ಪ್ರಧಾನಿಮಂತ್ರಿ ನರೇಂದ್ರ ಮೋದಿ ಆಡಳಿತಕ್ಕೆ ದಕ್ಷಿಣ ಭಾರತದಲ್ಲಿ ಜನರು ಅಷ್ಟಾಗಿ ಮೆಚ್ಚಿಕೊಂಡಿಲ್ಲ. ಬಿಜೆಪಿಯ ವರ್ಚಸ್ಸು ದಕ್ಷಿಣ ಭಾರತದಲ್ಲಿ ಅಷ್ಟಕಷ್ಟೇ ಎನ್ನುವುದು ಸಿ-ವೋಟರ್ ಸಮೀಕ್ಷೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿ ಸರ್ಕಾರದ ಆಡಳಿತವು ತೃಪ್ತಿದಾಯಕವಾಗಿಲ್ಲ ಎಂದ ರಾಜ್ಯಗಳಲ್ಲಿ ದಕ್ಷಿಣದ ರಾಜ್ಯಗಳೇ ಹೆಚ್ಚಾಗಿವೆ. ಈ ಪೈಕಿ ತಮಿಳುನಾಡು ಅಗ್ರಸ್ಥಾನದಲ್ಲಿದೆ.

ಬಿಜೆಪಿ ಆಡಳಿತ ತೃಪ್ತಿದಾಯವಾಗಿಲ್ಲ ಎಂದ ರಾಜ್ಯಗಳು
ರಾಜ್ಯ ಶೇಕಡಾವಾರು ಮಾರ್ಕ್ಸ್ (ಸಿ-ವೋಟರ್ ಸಮೀಕ್ಷೆ)
ತಮಿಳುನಾಡು 32.15%
ಕೇರಳ 32.89%
ಜಮ್ಮು-ಕಾಶ್ಮೀರ 50.23%
ಹರಿಯಾಣ 51.25%
ಗೋವಾ 52.54%
ಉತ್ತರಾಖಂಡ್ 53.53%
ಬಿಹಾರ 58.48%
ದೆಹಲಿ 60.35%
ಉತ್ತರ ಪ್ರದೇಶ 60.68%
ಪಶ್ಚಿಮ ಬಂಗಾಳ 64.06%
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications