'ರಫೇಲ್ ಲಗ್ನಪತ್ರಿಕೆ'ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ
ನವದೆಹಲಿ, ಜನವರಿ 22: ರಫೇಲ್ ಒಪ್ಪಂದದ ಥೀಮ್ ಆಧರಿಸಿ ಗುಜರಾತ್ನ ಜೋಡಿಯೊಂದು ಸಿದ್ಧಪಡಿಸಿದ ಮದುವೆ ಆಹ್ವಾನ ಪತ್ರಿಕೆಯ ಚಿತ್ರ ವೈರಲ್ ಆಗಿತ್ತು. ಆ ಲಗ್ನಪತ್ರಿಕೆ ಪ್ರಧಾನಿ ನರೇಂದ್ರ ಮೋದಿ ಕೈ ಸೇರಿದ್ದು, ಅವರ ಮೆಚ್ಚುಗೆಗೆ ಪಾತ್ರವಾಗಿದೆ.
ಸೂರತ್ ಮೂಲದ ಯುವರಾಜ್ ಪೊಖರ್ನಾ ಮತ್ತು ಸಾಕ್ಷಿ ಅಗರವಾಲ್ ಜೋಡಿಗೆ ಪತ್ರ ಬರೆದಿರುವ ಮೋದಿ, ಆಹ್ವಾನ ಪತ್ರಿಕೆಯಲ್ಲಿರುವ ಅಂಶಗಳನ್ನು ಜಾಣ್ಮೆಯಿಂದ ಬರೆಯಲಾಗಿದೆ. ಈ ಪತ್ರಿಕೆ ದೇಶಕ್ಕಾಗಿ ಇನ್ನಷ್ಟು ಕಠಿಣ ಶ್ರಮ ವಹಿಸಿ ಕೆಲಸ ಮಾಡುವಂತೆ ಪ್ರೇರಣೆ ನೀಡಿದೆ ಎಂದು ಹೇಳಿದ್ದಾರೆ.
ಈ ಜೋಡಿಯ ಮದುವೆ ಇಂದು (ಜನವರಿ 22) ನಡೆಯಿತು.

'ಯುವರಾಜ್ ಮತ್ತು ಸಾಕ್ಷಿ ಅವರ ಮದುವೆಯ ಸಂಭ್ರಮದ ಸಮಾರಂಭದಲ್ಲಿ ಪೊಖರ್ನಾ ಕುಟುಂಬಕ್ಕೆ ಹೃತ್ಪೂರ್ವಕ ಶುಭಾಶಯಗಳು. ಅತಿಥಿಗಳಿಗೆ ಕಳುಹಿಸಿದ ವಿಶಿಷ್ಟ ಲಗ್ನಪತ್ರಿಕೆಯನ್ನು ಗಮನಿಸಿದ್ದೆ. ದೇಶದ ಕುರಿತಾದ ನಿಮ್ಮ ಕಾಳಜಿ ಮತ್ತು ಪ್ರೀತಿಯನ್ನು ಅದರಲ್ಲಿನ ಜಾಣ್ಮೆಯ ಅಂಶಗಳು ಪ್ರತಿಫಲಿಸುತ್ತವೆ. ಇದು ನಮ್ಮ ದೇಶಕ್ಕಾಗಿ ಇನ್ನಷ್ಟು ಶ್ರಮವಹಿಸಿ ದುಡಿಯಲು ನನಗೆ ಸ್ಫೂರ್ತಿ ನೀಡಿದೆ' ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.
'ಶಾಂತಿ ಕಾಪಾಡಿ ನಮೋರನ್ನು ನಂಬಿ' ಎಂಬ ಶೀರ್ಷಿಕೆಯಡಿ ಈ ಜೋಡಿ ಆಹ್ವಾನ ಪತ್ರಿಕೆಯಲ್ಲಿ ರಫೇಲ್ ಒಪ್ಪಂದದ ಬಗ್ಗೆ ಕೆಲವು ವಾಸ್ತವಗಳು ಎಂದು ಒಂಬತ್ತು ಅಂಶಗಳನ್ನು ಪಟ್ಟಿಮಾಡಿ ನೀಡಿತ್ತು.

ಅಲ್ಲದೆ, ಮದುವೆಗೆ ಬರುವ ಅತಿಥಿಗಳಿಂದ ನಿರೀಕ್ಷಿಸುವ ಏಕೈಕ ಉಡುಗೊರೆಯೆಂದರೆ ಮುಂದಿನ ಚುನಾವಣೆಯಲ್ಲಿ ಮೋದಿಗೆ ಮತಚಲಾಯಿಸಿ ಮತ್ತು ಪಕ್ಷದ ಆಪ್ ಮೂಲಕ ಪಕ್ಷಕ್ಕೆ ಆರ್ಥಿಕ ದೇಣಿಗೆ ನೀಡಿ ಎಂದು ಮನವಿ ಮಾಡಿದ್ದರು.
ಈ ವೆಡ್ಡಿಂಗ್ ಕಾರ್ಡ್ ದೇಶದಾದ್ಯಂತ ವೈರಲ್ ಆಗಿತ್ತು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications