ಭಾರತೀಯ ಯೋಧರಿಗಾಗಿ #Sandesh2Soldirs ಅಭಿಯಾನ
ನವದೆಹಲಿ, ಅಕ್ಟೋಬರ್, 24: ನಾಗರಿಕರು ಮತ್ತು ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತಿರುವ ಸೈನಿಕರ ನಡುವಿನ ಬಾಂಧವ್ಯಗಳನ್ನು ಗಟ್ಟಿಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿರುವ #Sandesh2Soldirs (ಸೈನಿಕರಿಗೆ ಸಂದೇಶ) ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು.
ಈ ಅಭಿಯಾನದ ಮೂಲಕ ದೀಪಾವಳಿ ಆಚರಣೆ ವೇಳೆ ಯೋದರಿಗೆ ಸಂದೇಶಗಳನ್ನು ಮತ್ತು ಪತ್ರಗಳನ್ನು ಬರೆದು ಕಳುಹಿಸುವಂತೆ ದೇಶದ ಜನರಿಗೆ ಪ್ರಧಾನಿ ಕರೆ ನೀಡಿದ್ದಾರೆ.
ನರೇಂದ್ರ ಮೋದಿ ಮೊಬೈಲ್ ಆ್ಯಪ್, MyGov.in ಮತ್ತು ಆಲ್ ಇಂಡಿಯಾ ರೇಡಿಯೋ ಮೂಲಕ ನಾಗರಿಕರು ಸೈನಿಕರಿಗೆ ಸಂದೇಶವನ್ನು ಕಳುಹಿಸಬಹುದು.
I sent my #Sandesh2Soldiers. You could also do the same. Your wishes will certainly make our forces very happy. https://t.co/TYuxNNJfIf
— Narendra Modi (@narendramodi) October 22, 2016
#Sandesh2Soldirs ಎಂದು ಬರೆದು ಈ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಹಬ್ಬದ ಸಂದರ್ಭದಲ್ಲಿಯೂ ತಮ್ಮ ಕುಟುಂಬದಿಂದ ದೂರವಿದ್ದುಕೊಂಡು ದೇಶ ಸೇವೆ ಮಾಡುತ್ತಿರುವ ವೀರ ಯೋಧರಿಗೆ ಸಂದೇಶ ಕಳುಹಿಸಿ ಅವರೊಂದಿಗೆ ಹಬ್ಬದ ಖುಷಿ ಹಂಚಿಕೊಳ್ಳಿ ಎಂದು ಪ್ರಧಾನಿ ತಿಳಿಸಿದ್ದಾರೆ.
सवा सौ करोड़ देशवासी जब सैनिकों के साथ खड़े होते हैं तो उनकी शक्ति सवा सौ करोड़ गुना बढ़ जाती है।
— Narendra Modi (@narendramodi) October 23, 2016
ಈ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ನೀಡಿ ಮತ್ತು ಸೈನಿಕರೊಂದಿಗೆ ಸಾರ್ವಜನಿಕರ ಸಹಕಾರ ಇದ್ದೇ ಇರುತ್ತದೆ ಎಂದು ತಿಳಿಯಪಡಿಸಿ ಎಂದು ಅವರು ಹೇಳಿದ್ದಾರೆ.