ರೈಲಿನಲ್ಲಿ ಸಿಗಲಿದೆ ಎಂಟಿಆರ್ ಇಡ್ಲಿ, ಸಾಂಬಾರ್
ಬೆಂಗಳೂರು, ಮೇ 23 : ಎಂಟಿಆರ್ ಮತ್ತು ಐಟಿಸಿ ಕಂಪನಿಗಳ ತಿಂಡಿಗಳು ಶೀಘ್ರದಲ್ಲೇ ರೈಲಿನಲ್ಲಿ ದೊರೆಯಲಿದೆ. ಭಾರತೀಯ ರೈಲ್ವೆ ಪ್ರೀಮಿಯಂ ರೈಲುಗಳಲ್ಲಿ ಈ ಉತ್ಪನ್ನಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.
ಐಷಾರಾಮಿ
ರೈಲುಗಳಲ್ಲಿ
ಪ್ರಸಿದ್ಧ
ಕಂಪನಿಗಳಾದ
ಎಂಟಿಆರ್
ಮತ್ತು
ಐಟಿಸಿ
ಕಂಪನಿಗಳ
ಸಿದ್ಧಪಡಿಸಿದ
ಆಹಾರಗಳನ್ನು
ನೀಡಲು
ಚಿಂತನೆ
ನಡೆಸಲಾಗಿದೆ.
ರಾಜಧಾನಿ
ರೈಲುಗಳಿಗಿಂತ
ಎರಡು-ಮೂರು
ಪಟ್ಟು
ದರ
ಹೆಚ್ಚಿರುವ
ಪ್ರೀಮಿಯಂ
ರೈಲುಗಳಲ್ಲಿ
ಈ
ಆಹಾರ
ಪದಾರ್ಥಗಳನ್ನು
ನೀಡಲಾಗುತ್ತದೆ.
ಈ ಬಗೆಯ ಆಹಾರಗಳನ್ನು ನೀಡುವ ಮೂಲಕ ರೈಲಿನ ಪ್ರಯಾಣವನ್ನು ಮತ್ತಷ್ಟು ಪ್ರಸಿದ್ಧಿ ಪಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಈಗಾಗಲೇ ಈ ಬಗ್ಗೆ ರೈಲ್ವೆ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಿದ್ದು, ಶೇ 80ರಷ್ಟು ಜನರು ಇದು ಉತ್ತಮ ಯೋಜನೆ ಎಂದು ಹೇಳಿದ್ದಾರೆ.
ಸ್ಥಳೀಯ ಪ್ರದೇಶಗಳಿಗೆ ತಕ್ಕಂತೆ ಈ ತಿಂಡಿಗಳ ಮೆನುವಿನಲ್ಲಿ ಬದಲಾವಣೆ ಮಾಡಲು ರೈಲ್ವೆ ಆಲೋಚಿಸಿದೆ. ದಕ್ಷಿಣ ಭಾರತದಲ್ಲಿ ಉಪ್ಪಿಟ್ಟು, ಇಡ್ಲಿ, ಸಾಂಬಾರ್. ಉತ್ತರ ಭಾರತದಲ್ಲಿ ದಾಲ್, ಸಾಹಿ ಪನ್ನೀರ್ ಸೇರಿದಂತೆ ಇತರ ತಿಂಡಿಗಳನ್ನು ವಿತರಿಸಲು ಚಿಂತನೆ ನಡೆಸಿದೆ.
ಈ ತಿಂಡಿಗಳಿಗೆ ರೈಲ್ವೆ ಹೆಚ್ಚಿನ ದರವನ್ನು ವಿಧಿಸುವುದಿಲ್ಲ. ಮೊದಲು ರೈಲಿನಲ್ಲಿ ಸರಬರಾಜು ಮಾಡುತ್ತಿದ್ದ ಊಟ, ತಿಂಡಿಗಿದ್ದ ದರವನ್ನು ನಿಗದಿಪಡಿಸುವ ಆಲೋಚನೆ ಇದೆ. ಮಾಂಸಹಾರಿ ಪ್ಯಾಕೆಟ್ ಗಳಿಗೆ ದರ ಸ್ವಲ್ಪ ಹೆಚ್ಚಾಗಿರುತ್ತದೆ. ಆದರೆ, ಒಮ್ಮೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ದರ ಕಡಿಮೆಯಾಗಬಹುದು.
ಈ ತಿಂಡಿಗಳ ಪ್ಯಾಕೆಟ್ ಮೇಲೆಯೇ ರೈಲ್ವೆ ಕಂಪನಿಗಳ ದೂರವಾಣಿ ಸಂಖ್ಯೆಯನ್ನು ಮುದ್ರಿಸಲಿದೆ. ಒಂದು ವೇಳೆ ತಿಂಡಿಗಳ ಬಗ್ಗೆ ಪ್ರಯಾಣಿಕರು ದೂರು ನೀಡಬೇಕಾದರೆ, ನೇರವಾಗಿ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಎಲ್ಲವೂ ಅಂದುಕೊಡಂತೆ ನಡೆದರೆ ಕೆಲವು ದಿನಗಳಲ್ಲಿ ನಿಮ್ಮ ಕೈಯಲ್ಲಿ ಎಂಟಿಆರ್ ಬಿಸಿ-ಬಿಸಿ ಇಡ್ಲಿ ಇರುತ್ತದೆ.