ಮೋದಿ ಮನ್ ಕಿ ಬಾತ್ ನ ಮನತಟ್ಟುವ 15 ಹೇಳಿಕೆಗಳು
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ ಹಲವು ಮಹತ್ವದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿ ವೈರಲ್ ಆಗಿದ್ದವು. ಅಂಥ 15 ಪ್ರಮುಖ ಹೇಳಿಕೆಗಳು ಇಲ್ಲಿವೆ.
ನವದೆಹಲಿ, ಮೇ 26: ಪ್ರಧಾನಿ ನರೇಂದ್ರಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಇದೀಗ ಪುಸ್ತಕ ರೂಪದಲ್ಲಿ ಬರುತ್ತಿರುವ ಸುದ್ದಿಯನ್ನು ಈಗಾಗಲೇ ನೀವು ಒನ್ ಇಂಡಿಯಾದಲ್ಲಿ ಓದಿರುತ್ತೀರಿ.
ಇಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಲೋಕಾರ್ಪಣೆಗೊಳಿಸಲಿರುವ ಮನ್ ಕಿ ಬಾತ್ ನರೇಂದ್ರ ಮೋದಿಯವರ ಇದುವರೆಗಿನ ಮನ್ ಕಿ ಬಾತ್ ನ ಸಾರಾಂಶವನ್ನು ಹೊಂದಿದೆ.[ಮೋದಿಯವರ 'ಮನ್ ಕಿ ಬಾತ್' ಪುಸ್ತಕದ ರೂಪದಲ್ಲಿ]
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ ಹಲವು ಮಹತ್ವದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿ ವೈರಲ್ ಆಗಿದ್ದವು. ಇಂದು ಪುಸ್ತಕ ಬಿಡುಗಡೆಯಾಗುತ್ತರುವ ಹಿನ್ನೆಲೆಯಲ್ಲಿ ಅವುಗಳಲ್ಲಿ ಕೆಲವು ಹೇಳಿಕೆಗಳನ್ನು ನೆನಪಿಸಿಕೊಳ್ಳುವುದು ಸಂದರ್ಭೋಚಿತ.[ಬಸವಣ್ಣ, ರಾಮಾನುಜರ ನೆನೆದು ಬೇಸಿಗೆಗೆ ತಂಪೆರೆದ ಮನ್ ಕೀ ಬಾತ್]

ಮೋಸ ಅಂದ್ರೆ, ನಮಗೆ ನಾವೇ ಸಣ್ಣವರಾಗೋದು
1. ಮೋಸ ಮಾಡುವುದು ಅಂದ್ರೆ, ನಮಗೆ ನಾವೇ ಸಣ್ಣವರಾದಂತೆ. ಮೋಸ ಮಾಡುವುದನ್ನು ಅಭ್ಯಾಸಮಾಡಿಕೊಂಡರೆ ಕಲಿಕೆಯ ದಾಹ ಇಲ್ಲವಾಗುತ್ತದೆ. ಮೋಸ ಮಾಡುವುದಕ್ಕೆ ಸಮಯ, ಜಾಣ್ಮೆ ಬೇಕು ಎಂದಾದರೆ ಆ ಸಮಯ-ಜಾಣ್ಮೆಯನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳಿ.
2. ಪಾಲಕರು ಮಕ್ಕಳಿಂದ ನಿರೀಕ್ಷಿಸುವುದನ್ನು ಬಿಟ್ಟು, ಅವರನ್ನು ಒಪ್ಪಿಕೊಳ್ಳುವುದನ್ನು ಕಲಿಯಬೇಕು. ಮಕ್ಕಳಿಂದ ಅತಿಯಾದ ನಿರೀಕ್ಷೆ, ಮಕ್ಕಳಿಗೂ-ಪಾಲಕರಿಗೂ ಒಳ್ಳೆಯದಲ್ಲ.

ಪರೀಕ್ಷೆ ಬದುಕಿನ ಮೌಲ್ಯಮಾಪಕವಲ್ಲ!
4. ನಿಮ್ಮ ಗುರಿ ಮತ್ತು ಪ್ರಯತ್ನ ಹೊಂದಾಣಿಕೆಯಾಗುತ್ತಿದ್ದರೆ, ಅದಕ್ಕೆ ತಕ್ಕ ಹಾಗೇ ಪ್ರತಿಫಲ ಬರುತ್ತದೆ.
5. ನಾವು ಪರೀಕ್ಷೆಗಳನ್ನು ನೋಡುವ ದೃಷ್ಟಿಕೋನವೇ ಸರಿಯಿಲ್ಲ. ಪರೀಕ್ಷೆಗಳೇ ಜೀವನದ ಮುಖ್ಯ ಘಟವಲ್ಲ. ನಾವೆಷ್ಟು ಜ್ಞಾನಹೊಂದಿದ್ದೇವೆ ಎಂಬುದು ಮುಖ್ಯ.

ನಮ್ಮದು VIP ಅಲ್ಲ, EPI ಪರಿಕಲ್ಪನೆ
7. ಹೊಸ ಭಾರತದ್ದು VIP ಪರಿಕಲ್ಪನೆಯಲ್ಲ. EPI ಪರಿಕಲ್ಪನೆ. ಅಂದ್ರೆ Every Person is Important.
8. ನಮ್ಮ ರೈತರಂತೆಯೇ ವಿಜ್ಞಾನಿಗಳು ಸಹ ದೇಶದ ಹೆಮ್ಮೆ. ಅವರ ಬಿಡುವಿಲ್ಲದ ಪರಿಶ್ರಮದಿಂದಲೇ ದೇಶವಿಂದು ಹೆಮ್ಮೆಪಡುವತಾಗಿದೆ.

ನಮ್ಮನ್ನು ನಾವೇ ನಾಶಮಾಡಿಕೊಂಡರೆ ಹೇಗೆ?
10. ಮಾದಕ ವ್ಯಸನ ನಮ್ಮ ಹಾದಿಯನ್ನೇ ಕತ್ತಲನ್ನಾಗಿಸುತ್ತದೆ. ಇದು ನಮ್ಮನ್ನು ನಾವೇ ನಾಶ ಮಾಡಿಕೊಳ್ಳುವ ವಿಧಾನ. ದಯವಿಟ್ಟು ಮಾದಕ ವ್ಯಸನದ ದಾಸ್ಯದಿಂದ ಹೊರಬನ್ನಿ.
11. ನೀವು ಇತಿಹಾಸ ಸೃಷ್ಟಿಮಾಡಬೇಕೆಂದರೆ ಮೊದಲು ಇತಿಹಾಸದ ಕುರಿತು ಕೆಲವಷ್ಟನ್ನಾದರೂ ತಿಳಿದುಕೊಳ್ಳಿ. ಏಕೆಂದರೆ ಇತಿಹಾಸ ನಮ್ಮ ಬೇರಿದ್ದಂತೆ. ಬೇರಿನ ಬಗ್ಗೆ ತಿಳಿಯದೆ ನಾವು ಸೊಂಪಾಗಿ ಚಿಗುರುವುದಕ್ಕೆ ಸಾಧ್ಯವಿಲ್ಲ.

ಆಂತರ್ಯದ ಶಕ್ತಿ ಗುರುತಿಸಿ
13. ಭಾರತದ 1.3 ಶತಕೋಟಿ ಜನರಿಗೂ ಪ್ರತಿಭೆಯಿದೆ, ಶಕ್ತಿಯಿದೆ. ಆದರೆ ಆ ಪ್ರತಿಭೆಯನ್ನು ಗುರುತಿಸುವವರಿಲ್ಲ. ನಾವು ನಮ್ಮ ಆಂತರ್ಯದಲ್ಲಿರುವ ಶಕ್ತಿಯನ್ನು ಗುರುತಿಸುವುದನ್ನು ಮೊದಲು ಕಲಿಯಬೇಕಿದೆ.
14. ಹೆಣ್ಣು ಶಿಶುವನ್ನು ರಕ್ಷಿಸುವುದು, ಆಕೆಗೆ ಶಿಕ್ಷಣ ನೀಡುವುದು ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಕರ್ತವ್ಯ. ನಮ್ಮ ಮಾನವೀಯ ಜವಾಬ್ದಾರಿಯನ್ನು ಅರಿತುಕೊಂದು, ಸ್ತ್ರೀಯರಿಗೆ ಗೌರವ ನೀಡಬೇಕಿದೆ.
15. ಅಂಗಾಂಗ ದಾನ ಅಮೂಲ್ಯ ಜೀವವನ್ನುರಕ್ಷಿಸುತ್ತದೆ. ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ಇದು ಅಮರತ್ವಕ್ಕೆ ಒಂದು ದಾರಿ. ಈ ದಾನಕ್ಕಿಂತ ಶ್ರೇಷ್ಠ ದಾನ ಇನ್ಯಾವುದಿದೆ?
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications