ದೇವರ ಆಜ್ಞೆ ಅಂತ ಮಗಳ ಕಿವಿ ಕತ್ತರಿಸಿದ ಭೂಪ
ದೆಹಲಿ, ಜೂನ್ 23: ದೇವರ ಆಜ್ಞೆ ಎಂದು ಹೇಳಿ ಕಿರಾತಕನೊಬ್ಬ ಮಗಳ ಕಿವಿಯನ್ನೇ ಕತ್ತರಿಸಿದ್ದಾನೆ. ದೆಹಲಿಯ ಜಿಟಿಬಿ ನಗರದಲ್ಲಿ ಈ ಘಟನೆ ನಡೆದಿದೆ. ಅತೀಂದ್ರಿಯ ಶಕ್ತಿಯೊಂದು ನನಗೆ ಕಿವಿ ಕತ್ತರಿಸಲು ಹೇಳಿತು ಎಂದು ಆತ ಹೇಳಿದ್ದಾನೆ.
ಇದೀಗ ತಂದೆಯನ್ನು ಬಂಧಿಸಲಾಗಿದ್ದು ಆತನ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕಿವಿ ಕತ್ತರಿಸಿಕೊಂಡ ಮಗುವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಹೇಳಿಕೆ ನೀಡಿರುವ ಡಿಸಿಪಿ ಶಹದರಾ ನೂಪುರ್ ಪ್ರಸಾದ್, "ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದೆ. ಕಿವಿ ಕತ್ತರಿಸಿದ ತಂದೆಯನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಮಗುವನ್ನು ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ," ಎಂದು ಹೇಳಿದ್ದಾರೆ.












Click it and Unblock the Notifications