ಛೆ, ಛೆ, ಈ ಬಾರಿನೂ ರಮ್ಯಾ ಮತಹಾಕಿಲ್ವಂತೆ, ಸರೀನಾ ನೀವೇ ಹೇಳಿ!?
Recommended Video
"Every vote matters" ಎಂದು ಏಪ್ರಿಲ್ 17 ರಂದು ನಟಿ, ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದು ನೋಡಿ, 'ಸದ್ಯ, ಈ ಬಾರಿನಾದ್ರೂ ಮಾಜಿ ಸಂಸದೆ ವೋಟ್ ಮಾಡ್ತಾರೆ' ಎಂದುಕೊಂಡಿದ್ದ ಜನರಿಗೆ ಭಾರೀ ನಿರಾಸೆಯಾಗಿದೆ. ಮಾಡಿದ್ದು ಟ್ವೀಟ್ ಅಷ್ಟೆ, ವೋಟ್ ಅಲ್ಲ!
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೌದು, ಈ ಬಾರಿಯೂ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮತ ಚಲಾಯಿಸಿಲ್ಲ. ಮಂಡ್ಯದಲ್ಲಿ ಮತದಾನದ ಹಕ್ಕು ಪಡೆದಿದ್ದ ರಮ್ಯಾ, ಗುರುವಾರ ನಡೆದ ಮೊದಲ ಹಂತದ ಚುನಾವಣೆಗೆ ಬಂದು ಮತ ಚಲಾಯಿಸಲೇ ಇಲ್ಲ!
ರಮ್ಯಾ ಅವರು ಇದೇ ಮೊದಲೇನಲ್ಲ, ಮಂಡ್ಯ ಉಪಚುನಾವಣೆ ಸಮಯದಲ್ಲಿ, ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಸಮಯದಲ್ಲೂ ದೆಹಲಿಯಿಂದ ಈಚೆ ಬರುವ ಯೋಚನೆಯನ್ನೇ ಮಾಡಲಿಲ್ಲ. 'ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆಯಾಗಿ, ಉಪದೇಶ ಮಾಡುವುದರಲ್ಲಿ ಎತ್ತಿದ ಕೈ ಎನ್ನಿಸಿರುವ ರಮ್ಯಾ, ಈಗ ತಾವೇ ಮತ ಚಲಾಯಿಸದಿರೋದು ಸರೀನಾ?' ಹಾಗಂತ ಅವರ ಅಭಿಮಾನಿಗಳು, ಜನರು ಪ್ರಶ್ನಿಸುತ್ತಿದ್ದಾರೆ.
ರಮ್ಯಾ ಅವರ ನಡೆಯನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರೂ ಲೇವಡಿ ಮಾಡಿದ್ದಾರೆ.
|
ರಮ್ಯಾ ಹ್ಯಾಟ್ರಿಕ್ ಸಾಧನೆ!
ಕೊನೆಗೂ ಮತದಾನಕ್ಕೆ ಬರದೆ ವೋಟಿಂಗ್ ಗೆ ಗೈರಾಗಿ ಹ್ಯಾಟ್ರಿಕ್ ಸಾಧಿಸಿದ ನಟಿ ರಮ್ಯ!! ಇವರು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಪ್ರಮುಖರು! ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.
|
ಬಿಟ್ಟಿ ಉಪದೇಶ ಬಿಡಿ
ತಾವು ಹಾಕಿದ್ರಾ ಓಟ್...ಬಿಟ್ಟಿ ಉಪದೇಶ ನೀಡುವುದು ಬಿಟ್ಟು ತಮ್ಮ ಸ್ವ ಕ್ಷೇತ್ರವಾದ ಮಂಡ್ಯಕ್ಕೆ ಬಂದು ಮತ ಚಲಾಯಿಸಿ ತದನಂತರ ಮತ ಚಲಾವಣೆಯ ಜನಜಾಗೃತಿ ಮೂಡಿಸಿ.-ರಾಘವೇಂದ್ರ ಅಮೀನ್
|
ಹೇಳೋದು ವೇದಾಂತ, ತಿನ್ನೋದು...
ತಿನ್ನೋದು ಬದನೆಕಾಯಿ....ಹೇಳೋದು ವೇದಾಂತ ಮೊದ್ಲು ನೀನು ಬಂದು ವೋಟ್ ಮಾಡೋದು ಕಲಿ ಆಮೇಲೆ ಬೇರೆ ಅವ್ರಿಗೆ ಹೇಳುವಂತೆ....ಅಂತ ನಮ್ಮ ರಕ್ಷಣಾ ಸಚಿವರೇ ಬಂದು ವೋಟ್ ಹಾಕಿ ಹೋಗಿದ್ದಾರೆ ನಿಂಗೆ ಏನು ದಾಡಿ ಬಂದು ವೋಟ್ ಹಾಕಕ್ಕೆ? - ಹೇಮಂತ್
|
ಕಾಂಗ್ರೆಸ್ ಮೇಲೆ ನಿಮಗೂ ನಂಬಿಕೆ ಇಲ್ಲವೇ?
ನೀವು ಕೊನೆಯ ಬಾರಿ ಮತ ಚಲಾಯಿಸಿದ್ದು ಯಾವಾಗ? ನೀವು ಜನರ ಬಳಿ ಕಾಂಗ್ರೆಸ್ಸಿಗೆ ಮತಚಲಾಯಿಸಿ ಎಂದು ಕೇಳುತ್ತಿದ್ದೀರಿ. ಆದರೆ ನೀವೇ ಮತ ಚಲಾಯಿಸಿಲ್ಲ. ಅಂದ್ರೆ ಕಾಂಗ್ರೆಸ್ ಈ ದೇಶಕ್ಕೆ ಒಳಿತನ್ನು ಮಾಡುತ್ತದೆ ಎಂಬ ನಂಬಿಕೆ ನಿಮಗೂ ಇಲ್ಲವೆಂದರ್ಥವಲ್ಲವೇ? - ಸಂಜೀವ್ ಪ್ರಕಾಶ್
-
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications