2 ದಿನ ಕಳೆದರೂ ಕಡಿಮೆಯಾಗಲಿಲ್ಲ ಮದ್ಯದಂಗಡಿ ಮುಂದಿನ ಕ್ಯೂ
ನವದೆಹಲಿ, ಮೇ 6: ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಎರಡು ದಿನ ಕಳೆದಿದೆ. ಆದರೂ ಮದ್ಯದ ಅಂಗಡಿಗಳ ಮುಂದೆ ಇರುವ ಕ್ಯೂ ಮಾತ್ರ ಕಡಿಮೆಯಾಗಿಲ್ಲ. ಇಂದು ಬುಧವಾರ ಸಹ ಬೆಳಗ್ಗೆಯೇ ಕುಡುಕರು ಬಾರ್ಗಳು ಮುಂದೆ ಹಾಜರಿ ಹಾಕಿದ್ದಾರೆ.
ದೆಹಲಿ, ತೆಲಂಗಾಣ ರಾಜ್ಯಗಳ ಅನೇಕ ಬಾರ್ಗಳ ಮುಂದೆ ಇಂದು ಕೂಡ ನೂರಾರು ಸಂಖ್ಯೆಯ ಜನರು ವೈನ್ ಶಾಪ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಬಾರ್ ಓಪನ್ ಆಗುವ ಮೊದಲೇ ಬಂದು ಕ್ಯೂನಲ್ಲಿ ನಿಂತಿದ್ದಾರೆ. ಈ ರಾಜ್ಯಗಳಲ್ಲಿ ಮದ್ಯದ ಬೆಲೆ ಹೆಚ್ಚಾಗಿದ್ದರೂ, ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ.

ತೆಲಂಗಾಣದಲ್ಲಿ ಮದ್ಯದ ಮೇಲಿನ ದರವನ್ನು ಶೇಕಡ 15 ರಷ್ಟು ಹೆಚ್ಚು ಮಾಡಿದ್ದಾರೆ. ಆದರು ಸಹ ಜನ ಬಾರ್ಗೆ ಬರುವುದನ್ನು ಬಿಟ್ಟಿಲ್ಲ. ಪ್ರತಿದಿನ ಬಾರ್ಗಳ ಮುಂದೆ ದೊಡ್ಡ ಸಾಲು ಮಾಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಸ್ತೆ ಮೇಲೆ ವೃತ್ತ ಹಾಕಿದ್ದು, ಅದರ ಮೇಲೆ ಬ್ಯಾಕ್, ಚಪ್ಪಲಿ ಇಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಜನರಿಗೆ ಸಾಮಾಜಿಕ ಅಂತರ ಕಾಯ್ದಕೊಳ್ಳುವಂತೆ ಸೂಚನೆ ನೀಡಿದ್ದಾರೆ.
Telangana: People were seen in a long queue outside a liquor shop in Hyderabad today. Police deployed outside for maintaining social distancing. #CornovairusLockdown pic.twitter.com/F6o4K7dqNk
— ANI (@ANI) May 6, 2020
ಇನ್ನು ದೆಹಲಿಯಲ್ಲಿಯೂ ಕುಡುಕರು ಹಬ್ಬ ಮಾಡುತ್ತಿದ್ದಾರೆ. ಶಿವಪುರಿ ನಗರದಲ್ಲಿ ಮದ್ಯದಂಗಡಿ ಮುಂದೆ ದೊಡ್ಡ ಕ್ಯೂ ಮಾಡಲಾಗಿದೆ. ಆದರೆ, ಇಲ್ಲಿ ಜನರು ಸಾಮಾಜಿಕ ಅಂತರವನ್ನು ಮರೆತಿದ್ದಾರೆ. ಕೆಲವರು ಸಾಲಾಗಿ ನಿಂತಿದ್ದರು, ಇನ್ನು ಕೆಲವರು ಒಟ್ಟಿಗೆ ನಿಂತುಕೊಂಡಿದ್ದಾರೆ.
Delhi: People gather outside a store to buy liquor in Shivpuri area today amid #COVID19 lockdown. pic.twitter.com/yIpLhdkP4X
— ANI (@ANI) May 6, 2020
ದೆಹಲಿ ಸರ್ಕಾರ ಮದ್ಯದ ಮೇಲಿನ ದರವನ್ನು 70 ರಷ್ಟು ಹೆಚ್ಚು ಮಾಡಿದೆ. ಆದರೂ ಮದ್ಯಪ್ರಿಯರಿಗೆ ಕಡಿವಾಣ ಹಾಕಲು ಆಗುತ್ತಿಲ್ಲ. ದೇಶದ ಅನೇಕ ಬಾರ್ಗಳ ಮುಂದೆ ಸರಿಯಾಗಿ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ ಇದರಿಂದ ಸೋಂಕು ಹೆಚ್ಚಾಗುವ ಭೀತಿ ಇದೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications